ನಾನಾ ಬೇಡಿಕೆ ಈಡೇರಿಕೆಗಾಗಿ ಗ್ರಾಪಂ ನೌಕರರ ಪ್ರತಿಭಟನೆ
1993 ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ 112 ನಿಯಮದಂತೆ ವೇತನ ಶ್ರೇಣಿ ಡಿ ದರ್ಜೆ 17,000 ರಿಂದ 28,950 ಮತ್ತು ಸಿ ದರ್ಜೆ 21,400 ದಿಂದ 36,950 ನಿಗದಿಪಡಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
Vijaya Karnataka 24 Feb 2019, 5:00 am
ಮಡಿಕೇರಿ : 1993 ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ 112 ನಿಯಮದಂತೆ ವೇತನ ಶ್ರೇಣಿ ಡಿ ದರ್ಜೆ 17,000 ರಿಂದ 28,950 ಮತ್ತು ಸಿ ದರ್ಜೆ 21,400 ದಿಂದ 36,950 ನಿಗದಿಪಡಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ರಾಜ್ಯ ಗ್ರಾಮ ಪಂಚಾಯತ್ ನೌಕರರ ಬೇಡಿಕೆಗಳಾದ ಸೇವಾ ನಿಯಮಾವಳಿ ರಚಿಸಬೇಕು, ವೃದ್ಧಾಪ್ಯ ವೇತನ, ವೈದ್ಯ ವೆಚ್ಚ ಸೇರಿದಂತೆ ಸರಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಗ್ರಾ.ಪಂ. ನೌಕರರಿಗೂ ನೀಡಬೇಕು, ಉಳಿದಿರುವ 18 ಸಾವಿರ ನೌಕರರ ಮಾಹಿತಿ ಅಳವಡಿಸಿ ಎಲ್ಲರಿಗೂ ವೇತನ ಬಿಡುಗಡೆ ಮಾಡಬೇಕು, 1,252 ಗ್ರಾ.ಪಂ.ಗಳನ್ನು ಮೇಲ್ದರ್ಜೆಗೇರಿಸುವ ಕಡತಗಳು ವಿವಿಧ ಹಂತದಲ್ಲಿ ಅನುಮೋದನೆ ಆಗದೆ ಉಳಿದಿದ್ದು, ತಕ್ಷ ಣ ಅನುಮೋದನೆ ನೀಡಬೇಕು, ಗಣಕ ಯಂತ್ರ ನಿರ್ವಾಹಕರಿಗೂ ಗ್ರೇಡ್ 2 ಕಾರ್ಯದರ್ಶಿ ಬಡ್ತಿ ನೀಡಬೇಕು.
26,000 ಹುದ್ದೆಗಳನ್ನು ಸೃಷ್ಟಿ ಮಾಡಿ ಎಲ್ಲರನ್ನು ಕಾಯಂಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.
ಜಿಲ್ಲೆಯಿಂದಲೂ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಅವರ ನೇತೃತ್ವದಲ್ಲಿ ತೆರಳಿದ್ದ ವಿವಿಧ ಗ್ರಾ.ಪಂ.ಗಳ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ರಾಜ್ಯ ಗ್ರಾಮ ಪಂಚಾಯತ್ ನೌಕರರ ಬೇಡಿಕೆಗಳಾದ ಸೇವಾ ನಿಯಮಾವಳಿ ರಚಿಸಬೇಕು, ವೃದ್ಧಾಪ್ಯ ವೇತನ, ವೈದ್ಯ ವೆಚ್ಚ ಸೇರಿದಂತೆ ಸರಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಗ್ರಾ.ಪಂ. ನೌಕರರಿಗೂ ನೀಡಬೇಕು, ಉಳಿದಿರುವ 18 ಸಾವಿರ ನೌಕರರ ಮಾಹಿತಿ ಅಳವಡಿಸಿ ಎಲ್ಲರಿಗೂ ವೇತನ ಬಿಡುಗಡೆ ಮಾಡಬೇಕು, 1,252 ಗ್ರಾ.ಪಂ.ಗಳನ್ನು ಮೇಲ್ದರ್ಜೆಗೇರಿಸುವ ಕಡತಗಳು ವಿವಿಧ ಹಂತದಲ್ಲಿ ಅನುಮೋದನೆ ಆಗದೆ ಉಳಿದಿದ್ದು, ತಕ್ಷ ಣ ಅನುಮೋದನೆ ನೀಡಬೇಕು, ಗಣಕ ಯಂತ್ರ ನಿರ್ವಾಹಕರಿಗೂ ಗ್ರೇಡ್ 2 ಕಾರ್ಯದರ್ಶಿ ಬಡ್ತಿ ನೀಡಬೇಕು.
26,000 ಹುದ್ದೆಗಳನ್ನು ಸೃಷ್ಟಿ ಮಾಡಿ ಎಲ್ಲರನ್ನು ಕಾಯಂಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.
ಜಿಲ್ಲೆಯಿಂದಲೂ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಅವರ ನೇತೃತ್ವದಲ್ಲಿ ತೆರಳಿದ್ದ ವಿವಿಧ ಗ್ರಾ.ಪಂ.ಗಳ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.