ಮಡಿಕೇರಿ: ಜಿಎಸ್ಟಿ ಹೆಸರಿನಲ್ಲಿ ಗ್ರಾಹಕರಿಂದ ಹೆಚ್ಚಿನ ಮೊತ್ತ ಪಡೆಯದಂತೆ ಎಚ್ಚರ ವಹಿಸಬೇಕು ಎಂದು ಮೈಸೂರು ಜಿಎಸ್ಟಿ ಆಯುಕ್ತಾಲಯದ ಜಂಟಿ ನಿರ್ದೇಶಕ ರವಿ ಕಿರಣ್ ಅವರು ಸೂಚಿಸಿದ್ದಾರೆ.
ನಗರದ ಕೂರ್ಗ್ ಇಂಟರ್ನ್ಯಾಷನಲ್ ಹೋಟೆಲ್ನಲ್ಲಿ ನಡೆದ ಜಿಎಸ್ಟಿ ಕುರಿತು ಕಾರ್ಯಾಗಾರದಲ್ಲಿಅವರು ಮಾತನಾಡಿದರು.
'ಒಂದು ರಾಷ್ಟ್ರ ಒಂದು ತೆರಿಗೆ' ಎನ್ನುವ ಘೋಷ ವಾಕ್ಯದೊಂದಿಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಜಿಎಸ್ಟಿ ಬಗ್ಗೆ ವರ್ತಕರು ಸರಿಯಾದ ತಿಳಿವಳಿಕೆ ಹೊಂದಿ ಗ್ರಾಹಕರೊಂದಿಗೆ ವ್ಯವಹರಿಸಬೇಕು. ಜಿಎಸ್ಟಿ ಕುರಿತಂತೆ ವರ್ತಕರಿಗೆ ಹಲವು ಅನುಮಾನಗಳಿದ್ದರೂ ಈ ಬಗ್ಗೆ ಆತಂಕ ಬೇಡ. 150ಕ್ಕೂ ಹೆಚ್ಚು ದೇಶಗಳಲ್ಲಿ ಈ ಪದ್ಧತಿ ಜಾರಿಯಗಿ ಯಶಸ್ವಿ ಕಂಡಿದೆ. ನಮ್ಮ ದೇಶಕ್ಕೆ ಇದು ಹೊಸ ಬೆಳವಣಿಗೆಯಾಗಿದ್ದು, ಸಂಪೂರ್ಣ ಮಾಹಿತಿಯೊಂದಿಗೆ ಗ್ರಾಹಕರೊಂದಿಗೆ ವ್ಯವಹರಿಸುವುದು ಉತ್ತಮ ಎಂದು ಸಲಹೆ ಮಾಡಿದರು.
ಜಿಎಸ್ಟಿ ಜಾರಿಯಿಂದ ಇಂದು ಸರಕು ಹಾಗೂ ಸೇವಾ ತೆರಿಗೆಗಳ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಿದೆ. ತೆರಿಗೆದಾರರು ಇನ್ನಷ್ಟು ಸುಗಮವಾಗಿ ವ್ಯಾಪಾರ ನಡೆಸುವಂತಹ ವಾತಾವರಣ ಸೃಷ್ಟಿಸುವಲ್ಲಿ ಜಿಎಸ್ಟಿ ಪಾತ್ರ ಪ್ರಮುಖವಾಗಿದೆ ಎಂದ ಅವರು, ರಾಜ್ಯದಿಂದ ಪ್ರತಿ ತಿಂಗಳೂ 6 ಸಾವಿರ ಕೋಟಿಗಳಷ್ಟು ಜಿಎಸ್ಟಿ ಸಂಗ್ರಹವಾಗುತ್ತಿದೆ. ಅದೇ ರೀತಿ ಮರುಪಾವತಿ ಕೂಡ ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.
ಜಿಎಸ್ಟಿ ವಿಭಾಗಧಿಕಾರಿ ಪಲ್ಲವಿ ಆನಂದ ಮಾತನಾಡಿ, ಜಿಎಸ್ಟಿಯಿಂದ ಒಂದೇ ಮಾದರಿಯ ತೆರಿಗೆ ವ್ಯವಸ್ಥೆ ಪ್ರತಿ ರಾಜ್ಯದಲ್ಲಿ ಜಾರಿಯಾಗಿದೆ. ಇದು ದೇಶದಲ್ಲೇ ಹೊಸ ಆಶಾ ಭಾವನೆ ಉಂಟುಮಾಡಿದೆ. ಮೌಲ್ಯವರ್ಧಿತ ತೆರಿಗೆ ಪದ್ಧತಿಯ ಸುಧಾರಿತ ಕ್ರಮವೇ ಜಿಎಸ್ಟಿಯಿಂದ ಸಾಧ್ಯವಾಗಿದೆ ಎಂದು ಹೇಳಿದರು.
ಮಡಿಕೇರಿ ವಿಭಾಗ ಮುಖ್ಯಸ್ಥ ವೆಂಕಟೇಶ್ ಮಾತನಾಡಿ, ಜಿಎಸ್ಟಿಯು ಆರ್ಥಿಕ ವಲಯದಲ್ಲಿ ಹೊಸತನವನ್ನು ತರುವಲ್ಲಿ ಯಶಸ್ವಿಯಾಗಿದೆ. ವರ್ತಕರಲ್ಲಿ ಯಾವುದೇ ಆತಂಕ ಬೇಡ. ವರ್ತಕರೆ ಈ ಬಗ್ಗೆ ಸೂಕ್ತ ಮಾಹಿತಿ ಪಡೆದು ಜನಸಾಮಾನ್ಯರಿಗೆ ಮಾಹಿತಿ ನೀಡುವ ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದರು.
ಜಿಲ್ಲೆಯ ವರ್ತಕರು, ಉದ್ದಿಮೆದಾರರು ಸೇರಿದಂತೆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ನಗರದ ಕೂರ್ಗ್ ಇಂಟರ್ನ್ಯಾಷನಲ್ ಹೋಟೆಲ್ನಲ್ಲಿ ನಡೆದ ಜಿಎಸ್ಟಿ ಕುರಿತು ಕಾರ್ಯಾಗಾರದಲ್ಲಿಅವರು ಮಾತನಾಡಿದರು.
'ಒಂದು ರಾಷ್ಟ್ರ ಒಂದು ತೆರಿಗೆ' ಎನ್ನುವ ಘೋಷ ವಾಕ್ಯದೊಂದಿಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಜಿಎಸ್ಟಿ ಬಗ್ಗೆ ವರ್ತಕರು ಸರಿಯಾದ ತಿಳಿವಳಿಕೆ ಹೊಂದಿ ಗ್ರಾಹಕರೊಂದಿಗೆ ವ್ಯವಹರಿಸಬೇಕು. ಜಿಎಸ್ಟಿ ಕುರಿತಂತೆ ವರ್ತಕರಿಗೆ ಹಲವು ಅನುಮಾನಗಳಿದ್ದರೂ ಈ ಬಗ್ಗೆ ಆತಂಕ ಬೇಡ. 150ಕ್ಕೂ ಹೆಚ್ಚು ದೇಶಗಳಲ್ಲಿ ಈ ಪದ್ಧತಿ ಜಾರಿಯಗಿ ಯಶಸ್ವಿ ಕಂಡಿದೆ. ನಮ್ಮ ದೇಶಕ್ಕೆ ಇದು ಹೊಸ ಬೆಳವಣಿಗೆಯಾಗಿದ್ದು, ಸಂಪೂರ್ಣ ಮಾಹಿತಿಯೊಂದಿಗೆ ಗ್ರಾಹಕರೊಂದಿಗೆ ವ್ಯವಹರಿಸುವುದು ಉತ್ತಮ ಎಂದು ಸಲಹೆ ಮಾಡಿದರು.
ಜಿಎಸ್ಟಿ ಜಾರಿಯಿಂದ ಇಂದು ಸರಕು ಹಾಗೂ ಸೇವಾ ತೆರಿಗೆಗಳ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಿದೆ. ತೆರಿಗೆದಾರರು ಇನ್ನಷ್ಟು ಸುಗಮವಾಗಿ ವ್ಯಾಪಾರ ನಡೆಸುವಂತಹ ವಾತಾವರಣ ಸೃಷ್ಟಿಸುವಲ್ಲಿ ಜಿಎಸ್ಟಿ ಪಾತ್ರ ಪ್ರಮುಖವಾಗಿದೆ ಎಂದ ಅವರು, ರಾಜ್ಯದಿಂದ ಪ್ರತಿ ತಿಂಗಳೂ 6 ಸಾವಿರ ಕೋಟಿಗಳಷ್ಟು ಜಿಎಸ್ಟಿ ಸಂಗ್ರಹವಾಗುತ್ತಿದೆ. ಅದೇ ರೀತಿ ಮರುಪಾವತಿ ಕೂಡ ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.
ಜಿಎಸ್ಟಿ ವಿಭಾಗಧಿಕಾರಿ ಪಲ್ಲವಿ ಆನಂದ ಮಾತನಾಡಿ, ಜಿಎಸ್ಟಿಯಿಂದ ಒಂದೇ ಮಾದರಿಯ ತೆರಿಗೆ ವ್ಯವಸ್ಥೆ ಪ್ರತಿ ರಾಜ್ಯದಲ್ಲಿ ಜಾರಿಯಾಗಿದೆ. ಇದು ದೇಶದಲ್ಲೇ ಹೊಸ ಆಶಾ ಭಾವನೆ ಉಂಟುಮಾಡಿದೆ. ಮೌಲ್ಯವರ್ಧಿತ ತೆರಿಗೆ ಪದ್ಧತಿಯ ಸುಧಾರಿತ ಕ್ರಮವೇ ಜಿಎಸ್ಟಿಯಿಂದ ಸಾಧ್ಯವಾಗಿದೆ ಎಂದು ಹೇಳಿದರು.
ಮಡಿಕೇರಿ ವಿಭಾಗ ಮುಖ್ಯಸ್ಥ ವೆಂಕಟೇಶ್ ಮಾತನಾಡಿ, ಜಿಎಸ್ಟಿಯು ಆರ್ಥಿಕ ವಲಯದಲ್ಲಿ ಹೊಸತನವನ್ನು ತರುವಲ್ಲಿ ಯಶಸ್ವಿಯಾಗಿದೆ. ವರ್ತಕರಲ್ಲಿ ಯಾವುದೇ ಆತಂಕ ಬೇಡ. ವರ್ತಕರೆ ಈ ಬಗ್ಗೆ ಸೂಕ್ತ ಮಾಹಿತಿ ಪಡೆದು ಜನಸಾಮಾನ್ಯರಿಗೆ ಮಾಹಿತಿ ನೀಡುವ ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದರು.
ಜಿಲ್ಲೆಯ ವರ್ತಕರು, ಉದ್ದಿಮೆದಾರರು ಸೇರಿದಂತೆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.