ಆ್ಯಪ್ನಗರ

ಸುಂಟಿಕೊಪ್ಪ ಭಾಗದಲ್ಲಿ ಭರ್ಜರಿ ಮಳೆ

ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಸುತ್ತಮುತ್ತ ಮಂಗಳವಾರ ಸುರಿದ ಭಾರಿ ಮಳೆಯಿಂದ ಮನೆಗಳಿಗೆ ಹಾನಿಯಾಗಿದೆ ಮನೆಯಲ್ಲಿದ್ದ ಗೃಹಬಳಕೆ ಸಾಮಾಗ್ರಿಗಳು ನೀರಿನಲ್ಲಿ ತೊಯ್ದು ಹಾಳಾಗಿವೆ...

Vijaya Karnataka 15 Aug 2018, 5:00 am
ಸುಂಟಿಕೊಪ್ಪ: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಸುತ್ತಮುತ್ತ ಮಂಗಳವಾರ ಸುರಿದ ಭಾರಿ ಮಳೆಯಿಂದ ಮನೆಗಳಿಗೆ ಹಾನಿಯಾಗಿದೆ. ಮನೆಯಲ್ಲಿದ್ದ ಗೃಹಬಳಕೆ ಸಾಮಾಗ್ರಿಗಳು ನೀರಿನಲ್ಲಿ ತೊಯ್ದು ಹಾಳಾಗಿವೆ.
Vijaya Karnataka Web MDK-mdk14  snt02


ಮಂಗಳವಾರ ಎಡೆಬಿಡದೆ ಸುರಿದ ಮಳೆಯಿಂದ ನಾಕೂರು ಶಿರಂಗಾಲ ಗ್ರಾಪಂನ ಮನೆಯೊಂದರ ಚಾವಣಿಗೆ ಅಳವಡಿಸಿದ್ದ ಶಿಟ್‌ಗಳು ಹಾಗೂ ಹೆಂಚುಗಳಿಗೆ ಹಾನಿಯಾಗಿ ಹೆಚ್ಚಿನ ನಷ್ಟವಾಗಿದೆ.

ಗ್ರಾಮಲೆಕ್ಕಿಗರಾದ ರೂಪ ಹಾಗೂ ಗ್ರಾಪಂ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸುಂಟಿಕೊಪ್ಪ ಶ್ರೀದೇವಿ ತೋಟದ ಬಳಿ ಭಾರಿ ಗಾತ್ರದ ಮರ ಚೆಟ್ಟಳ್ಳಿ -ಸುಂಟಿಕೊಪ್ಪ ರಸ್ತೆಗೆ ಅಡ್ಡಲಾಗಿ ಉರುಳಿದ ಪರಿಣಾಮ 4 ತಾಸು ರಸ್ತೆ ಸಂಚಾರಕ್ಕೆ ತೊಡಕುಂಟಾಯಿತು. ಅಲ್ಲದೇ, ಸುಂಟಿಕೊಪ್ಪದಲ್ಲಿ ಮನೆಯೊಂದರ ಗೋಡೆ ಕುಸಿದು ನಷ್ಟ ಸಂಭವಿಸಿದೆ.

ಮಾದಾಪುರ ಗ್ರಾಪಂನ ಇಗೋಡ್ಲು ಗ್ರಾಮದ ಬೇಬಿ ಅವರ ಮನೆ ಹಿಂಭಾಗದ ಗೋಡೆ ಕುಸಿದು ಸುಮಾರು ನಷ್ಟ ಸಂಭವಿಸಿದೆ. ಈ ಸಂಬಂಧ ಕಂದಾಯ ಇಲಾಖೆಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಗ್ರಾಮ ಲೆಕ್ಕಿಗರಾದ ಪರಮೇಶ್‌ ಭೇಟಿ ನೀರಿ ಸ್ಥಳ ಪರಿಶೀಲಿಸಿದ್ದಾರೆ.

ಎಡೆಬಿಡದೆ ಸುರಿದ ಮಳೆಗೆ ತೋಡುವಿನ ನೀರು ಉಕ್ಕಿ ಹರಿಯುತ್ತಿದ್ದು ಹಾರ್‌ಬೈಲು ಗ್ರಾಮಕ್ಕೆ ತೆರಳುವ ರಸ್ತೆ ನೀರಿನಿಂದ ಆವೃತವಾಗಿದೆ. ಎಮ್ಮೆ ಗುಂಡಿ ಸಮೀಪದ ಟಾಟ ತೋಟದ ಬೃಹತ್‌ ಕೆರೆಯೊಂದು ಒಡೆದ ಪರಿಣಾಮ ರಾಮಯ್ಯಗೌಡರ ಗದ್ದೆ, ದೇವಪ್ಪ ಅವರ ಮನೆ ನೀರಿನಲ್ಲಿ ಮಳುಗಿದ ಪರಿಣಾಮ ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಭಾರಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕೂಲಿ ಕೆಲಸವಿಲ್ಲದೇ ಕಾರ್ಮಿಕರು ಕುಟುಂಬ ನಿರ್ವಹಣೆಗೆ ಪರದಾಡುವಂತಾಗಿದೆ. ಈ ವೇಳೆ ಅನ್ನಭಾಗ್ಯದ ಯೋಜನೆಯ ಪಡಿತರವೇ ಕಾರ್ಮಿಕರಿಗೆ ನೆರವಾಗಿದೆ. ಮಳೆ, ಗಾಳಿಯಿಂದ ಮನೆಯಿಂದ ಹೊರಗೆ ಬರಲು ಆಗದೇ ಆತಂಕದಲ್ಲೇ ದಿನದೂಡು ಪರಿಸ್ಥಿತಿ ಜನತೆಯದ್ದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ