ಆ್ಯಪ್ನಗರ

ನಾಪೋಕ್ಲು: ಭಾರಿ ಮಳೆ ಜನಜೀವನ ಅಸ್ತವ್ಯಸ್ತ

ಎರಡು ದಿನಗಳಿಂದ ಹಳೆ ತಾಲೂಕು, ಕೊಳಕೇರಿ, ಕುಂಜಿಲ, ಕಕ್ಕಬ್ಬೆ, ನೆಲಜಿ, ಬಲ್ಲಮಾವಟಿ, ಪೆರೂರು, ಬೇತು, ಕೊಟ್ಟಮುಡಿ ವ್ಯಾಪ್ತಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಮಿ.ಮೀ. ಮಳೆಯಾಗಿದೆ.

Vijaya Karnataka 11 Jun 2018, 5:00 am
ನಾಪೋಕ್ಲು: ಎರಡು ದಿನಗಳಿಂದ ಹಳೆ ತಾಲೂಕು, ಕೊಳಕೇರಿ, ಕುಂಜಿಲ, ಕಕ್ಕಬ್ಬೆ, ನೆಲಜಿ, ಬಲ್ಲಮಾವಟಿ, ಪೆರೂರು, ಬೇತು, ಕೊಟ್ಟಮುಡಿ ವ್ಯಾಪ್ತಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಮಿ.ಮೀ. ಮಳೆಯಾಗಿದೆ.
Vijaya Karnataka Web heavy rainfall in napoklu
ನಾಪೋಕ್ಲು: ಭಾರಿ ಮಳೆ ಜನಜೀವನ ಅಸ್ತವ್ಯಸ್ತ


ನಿರಂತರ ವರ್ಷಧಾರೆಯಿಂದ ಕಾವೇರಿ ಹೊಳೆಯಲ್ಲೂ ನೀರಿನ ಪ್ರಮಾಣ ಏರಿಕೆಯಾಗುತ್ತಿದ್ದು, ಭಾರಿ ಗಾಳಿಯಿಂದ ಜನರು ಭಯಭೀತರಾಗಿದ್ದಾರೆ. ಮಳೆ ಹೀಗೆ ಮುಂದುವರಿದರೆ ಕಾವೇರಿ ಅಪಾಯದ ಮಟ್ಟ ತಲುಪಲ್ಲಿದ್ದು, ನಾಪೆæäೕಕ್ಲು ಹೊರಗಿನ ಸಂಪರ್ಕ ಕಡಿದುಕೊಂಡು ದ್ವೀಪವಾಗುವ ಸಾಧ್ಯತೆ ಇದೆ. ಗಾಳಿ ಮಳೆಯಿಂದ ಹಲವೆಡೆ ತೋಟಗಳಲ್ಲಿ ಸಣ್ಣ, ಪುಟ್ಟ ಮರ, ಗಿಡಗಳು ಬಿದ್ದು ನಷ್ಟ ಆಗಿದೆ.

ನೆಲಜಿ ಗ್ರಾಮದ ಮಾಜಿ ಸೈನಿಕ ಮಾಣಿಚಂಡ ಪಳಂಗಪ್ಪನವರ ಲೈನ್‌ ಮನೆಯ ಮೇಲೆ ಮರಬಿದ್ದು ಅಪಾರ ನಷ್ಟ ಸಂಭವಿಸಿದೆ. ಭಾಗಮಂಡಲ ಸಂಪರ್ಕಿಸುವ ಬಲ್ಲಮಾವಟಿಯ ತಂಡ್ರ ಹೊಳೆ, ವಿರಾಜಪೇಟೆ ಸಂಪರ್ಕಿಸುವ ಕಕ್ಕಬ್ಬೆ ಹೊಳೆ ಮತ್ತು ಪಾರಾಣೆ ಸಂಪರ್ಕಿಸುವ ಎತ್ತುಕಡವು ಹೊಳೆಯು ತುಂಬಿ ಹರಿಯುತ್ತಿದ್ದು, ನೀರಿನ ಪ್ರಮಾಣ ಏರಿಕೆಯಾಗಿದೆ. ಮಳೆ ಗಾಳಿಯಿಂದ ನಾಪೆæäೕಕ್ಲು ವ್ಯಾಪ್ತಿಯಲ್ಲಿ ಜೂ. 8ರಿಂದ ವಿದ್ಯೂತ್‌ ಇಲ್ಲದೆ ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ವಿದ್ಯುತ್‌ ಇಲ್ಲದಿರುವುದರಿಂದ ಜನತೆ ಕುಡಿಯಲು ಮಳೆ ನೀರನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಇದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗಳು ತುರ್ತು ಕ್ರಮ ಕೈಗೊಂಡಿಲ್ಲ. ಇನ್ನಾದರೂ ಜಿಲ್ಲಾಧಿಕಾರಿ ಇದರ ಬಗ್ಗೆ ಗಮನ ಹರಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ