ಸುನಿಲ್ಪೊನ್ನೇಟಿ ಮಡಿಕೇರಿ
ಕೊಡಗಿನ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಪರ-ವಿರೋಧ ಅಭಿಪ್ರಾಯಗಳು ದೊಡ್ಡಮಟ್ಟದಲ್ಲಿ ವ್ಯಕ್ತವಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣವನ್ನು ವಿರೋಧಿಸುವ ಮೂಲಕ ಕೊಡಗನ್ನು ಅಭಿವೃದ್ಧಿಯಿಂದ ದೂರ ಇಡಲಾಗುತ್ತಿದೆ ಎನ್ನುವುದು ರಾಷ್ಟ್ರೀಯ ಹೆದ್ದಾರಿ ಸಮರ್ಥಕರ ವಾದವಾದರೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ನಮ್ಮ ವಿರೋಧ. ಕೊಡಗಿನಂತಹ ಪರಿಸರ ಸೂಕ್ಷ ್ಮ ಪ್ರದೇಶದಲ್ಲಿ ಇಂತಹ ಯೋಜನೆ ಜಾರಿಗೊಳಿಸುವಾಗ ಇಲ್ಲಿನ ಜನಾಭಿಪ್ರಾಯ ಪರಿಗಣಿಸಬೇಕು ಎನ್ನುವುದು ನಮ್ಮ ಒತ್ತಾಯ ಎನ್ನುತ್ತಾರೆ ಪರಿಸವಾದಿಗಳು. ಈ ಮಧ್ಯೆ ಬುಧವಾರ (ಜು.31) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮಡಿಕೇರಿಯಲ್ಲಿ ಕರೆದಿದ್ದ ಸಮಾಲೋಚನಾ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಶುರುವಾಗಿದೆ ಪ್ರಕ್ರಿಯೆ: ಮೈಸೂರು-ಮಡಿಕೇರಿ ಹೈಸ್ಪೀಡ್ ಎಕ್ಸ್ಪ್ರೆಸ್ ಹೆದ್ದಾರಿ-275 ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕ್ರಿಯೆ ಶುರುವಾಗಿದೆ. ಯೋಜನೆಗೆ ಅಗತ್ಯವಿರುವ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮೈಸೂರಿನ ರಾಮಸ್ವಾಮಿ ವೃತ್ತದ ಬಳಿ ಚಾಮರಾಜಪುರಂನ ಗೀತಾ ರಸ್ತೆಯಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಸಕ್ಷ ಮ ಪ್ರಾಧಿಕಾರದ ಕಚೇರಿಯೂ ಕಾರ್ಯಾರಂಭ ಮಾಡಿದ್ದು, ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಪತ್ರಿಕಾ ಪ್ರಕಟಣೆಯನ್ನೂ ಹೊರಡಿಸಲಾಗಿದೆ.
ಎಕ್ಸ್ಪ್ರೆಸ್ ಹೆದ್ದಾರಿ: ಮೈಸೂರು-ಮಡಿಕೇರಿ ಹೈಸ್ಪೀಡ್ ಎಕ್ಸ್ಪ್ರೆಸ್ ಹೆದ್ದಾರಿ-275 ಒಟ್ಟು 116 ಕಿ.ಮೀ. ಉದ್ದ ಮತ್ತು 14 ಮೀಟರ್ ಅಗಲದ 4 ಪಥದ ರಸ್ತೆಯಾಗಿದೆ. ಶ್ರೀರಂಗಪಟ್ಟಣ ಸಮೀಪ ಪಶ್ಚಿಮ ವಾಹಿನಿ ಮತ್ತು ನಗುವನ ಹಳ್ಳಿ ನಡುವೆ ಬೆಂಗಳೂರು-ಮೈಸೂರು ಹೆದ್ದಾರಿಯಿಂದ ತಿರುವು ಪಡೆದು ಹುಣಸೂರು ಸಮೀಪ ಗೋಣಿಕೊಪ್ಪಲುವಿಗೆ ಹೋಗುವ ಡೀವಿಯೇಷನ್ ಬಳಿ ಕೂಡುತ್ತದೆ. ಮುಂದೆ ಕಳ್ಳಬೆಟ್ಟ, ಕಂಪಲಾಪುರ, ಬೈಲಕುಪ್ಪೆ, ಕೊಪ್ಪ, ಕುಶಾಲನಗರ, ಸುಂಟಿಕೊಪ್ಪ ಮೂಲಕ ಮಡಿಕೇರಿ ಸಂಪರ್ಕಿಸುತ್ತದೆ. ಮಧ್ಯೆ ಬರುವ ಪಟ್ಟಣಗಳು, ಹೋಬಳಿ ಕೇಂದ್ರಗಳ ಹೊರ ಭಾಗದಲ್ಲಿ ಬೈಪಾಸ್ ರಸ್ತೆಯಾಗುವದರಿಂದ ಯಾವುದೇ ಅಡೆ-ತಡೆಯಿಲ್ಲದೆ ವಾಹನಗಳು ಒಂದೇ ವೇಗದಲ್ಲಿ ಚಲಿಸಬಹುದು ಎನ್ನಲಾಗುತ್ತಿದೆ.
6 ಸಾವಿರ ಕೋಟಿ ಪರಿಹಾರ: ಯೋಜನೆಗೆ ಸುಮಾರು 516 ಹೆಕ್ಟೇರ್ ಭೂಮಿ ಬೇಕು. ಶೇ.25 ಈಗಿರುವ ರಸ್ತೆಯೇ ಬಳಕೆ ಆಗುತ್ತದೆ. ಶೇ.40ರಷ್ಟು ಸರಕಾರಿ ಭೂಮಿ ಇದೆ. ಇನ್ನುಳಿದ ಭೂಮಿ ಖಾಸಗಿ ವ್ಯಕ್ತಿಗಳಿಂದ ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ 6 ಸಾವಿರ ಕೋಟಿ ಪರಿಹಾರ ಕೊಡಬೇಕಾಗಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಂದಾಜಿಸಿದೆ. ಮೊದಲ ಹಂತದಲ್ಲಿ ಮೈಸೂರು-ಕುಶಾಲನಗರ ಮಧ್ಯೆ 85 ಕಿ.ಮೀ. ಹೆದ್ದಾರಿ ನಿರ್ಮಾಣ ಆಗಲಿದೆ. 2ನೇ ಹಂತದಲ್ಲಿ ಮಡಿಕೇರಿ, ಸುಳ್ಯ, ಬಂಟ್ವಾಳ ಮಧ್ಯೆ ರಸ್ತೆ ನಿರ್ಮಿಸಲಾಗುವುದು. ಈ ಸಂಬಂಧ ಬೆಂಗಳೂರು ಮೂಲದ ಖಾಸಗಿ ಸಂಸ್ಥೆಯಿಂದ ಅಧ್ಯಯನ ನಡೆದಿದೆ. ಸಂಪೂರ್ಣ ಭೂಸ್ವಾಧೀನದ ನಂತರ ಯೋಜನೆಯ ಒಟ್ಟು ಖರ್ಚು ಅಂದಾಜಿಸಲಾಗುವುದು ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಹೆದ್ದಾರಿ ಸಮರ್ಥಕರ ವಾದ
-ಮೈಸೂರು-ಬಂಟ್ವಾಳ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಳ
-ಮಡಿಕೇರಿ-ಮೈಸೂರು ಮಧ್ಯೆ ಸಂಚಾರ ಅವಧಿ ಕಡಿಮೆಯಾಗಲಿದೆ
-ಕುಶಾಲನಗರ - ಮಡಿಕೇರಿ ಮಧ್ಯೆ ಅಪಘಾತಗಳ ಸಂಖ್ಯೆ ಇಳಿಮುಖ
-ಕಣ್ಣೂರು, ಮಡಿಕೇರಿ, ಸುಳ್ಯ, ಹೊಳೆನರಸೀಪುರ ಕಡೆಯಿಂದ ಬೆಂಗಳೂರಿಗೆ ಹೋಗುವವರಿಗೆ ಅನುಕೂಲ
-ಮಡಿಕೇರಿ-ಬೆಂಗಳೂರು ನಡುವೆ ಸಂಚರಿಸುವವರು ಮೈಸೂರಿಗೆ ಬಾರದೇ ನೇರವಾಗಿ ಹೋಗಬಹುದು
-ಮೈಸೂರು-ಮಡಿಕೇರಿ ಮಧ್ಯೆ ಕಡಿಮೆ ಅವಧಿಯ ಪ್ರಯಾಣ. ಇಂಧನ ಉಳಿತಾಯ, ವಾಯುಮಾಲಿನ್ಯ, ಅಪಘಾತಗಳ ನಿಯಂತ್ರಣ
-ಸರಕು ಸಾಗಣೆ ವ್ಯವಸ್ಥೆಗಳಿಗೆ ಸಹಕಾರಿ
ವಿರೋಧಿಗಳ ವಾದ
-ಅರಣ್ಯ ಸಂಪತ್ತು ನಾಶಗೊಳಿಸಿ ನಿರ್ಮಾಣವಾಗುವ ಹೆದ್ದಾರಿ ಕಾಮಗಾರಿ ಕೊಡಗಿಗೆ ಬೇಡ
-ಕಾಂಕ್ರೀಟಿಕರಣಗೊಳಿಸುವ ಮೂಲಕ ಕೊಡಗಿನ ಮೂಲ ಸ್ವರೂಪಕ್ಕೆ ಧಕ್ಕೆ
-ನೈಸರ್ಗಿಕ ಜಲಮೂಲಗಳಿಗೆ ಅಡಚಣೆ
-ಅಪಘಾತಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಹೆದ್ದಾರಿ ನಿರ್ಮಾಣಗೊಂಡ ಬಳಿಕವೂ ಹಲವೆಡೆ ಹೆಚ್ಚಿನ ಅಪಘಾತಗಳು ಸಂಭವಿಸಿವೆ
-ಈಗಿರುವ ರಸ್ತೆಯನ್ನೇ ಅಭಿವೃದ್ಧಿಪಡಿಸಿ ದ್ವಿಪಥ ರಸ್ತೆಯಾಗಿ ಪರಿವರ್ತಿಸಿದರೆ ಸಾಕು
-ರಸ್ತೆ ವಿಸ್ತರಣೆ ಸಂದರ್ಭ ಕೇರಳದ ವ್ಯವಸ್ಥೆ ಮಾದರಿ ಆಗಲಿ
ಸಭೆ ಮುಂದಕ್ಕೆ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮಡಿಕೇರಿಯ ಕೋಟೆ ಹಳೇ ವಿಧಾನಸಭಾಂಗಣದಲ್ಲಿ ಬುಧವಾರ (ಜು.31) ಕರೆದಿದ್ದ ಸಮಾಲೋಚನಾ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ಜಿಲ್ಲೆಯಲ್ಲಿ ಹೆದ್ದಾರಿ ನಿರ್ಮಾಣಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸಭೆ ಮುಂದಕ್ಕೆ ಹೋಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅನುಮೋದನೆಗೆ ಅನುಗುಣವಾಗಿ ಭಾರತ ಸರಕಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮೈಸೂರಿನಿಂದ ಮಡಿಕೇರಿವರೆಗೆ ನಿರ್ಮಿಸಲಿರುವ 4 ಪಥಗಳ ಹೆದ್ದಾರಿ ಯೋಜನೆಯ ಬಗ್ಗೆ ಸಾರ್ವಜನಿಕರ ತಿಳಿವಳಿಕೆ, ಸಂಪರ್ಕ ಹಾಗೂ ಅಭಿಪ್ರಾಯ ಸಂಗ್ರಹಿಸಲು ಸಾರ್ವಜನಿಕರೊಂದಿಗೆ ಈ ಸಮಾಲೋಚನಾ ಸಭೆ ಆಯೋಜಿಸಲಾಗಿತ್ತು. ಸಾರ್ವಜನಿಕರು ತಮ್ಮ ವೈಯಕ್ತಿಕ ಅಭಿಪ್ರಾಯ ಸಲ್ಲಿಸಬಹುದು ಎಂದು ಕೂಡ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಕಳೆದ ವರ್ಷ ಅ.10ರಂದು ಕುಶಾಲನಗರದಲ್ಲಿ ನಡೆದಿದ್ದ ಇಂತಹದ್ದೇ ಸಭೆ ರಾಷ್ಟ್ರೀಯ ಹೆದ್ದಾರಿಯ ಪರ-ವಿರೋಧ ಬಣದ ವಾಗ್ವಾದಕ್ಕೆ ಕಾರಣವಾಗಿದ್ದಲ್ಲದೆ ಹೆಚ್ಚಿನ ಪ್ರಯೋಜನ ಆದಂತೆ ಕಂಡುಬರಲಿಲ್ಲ.
ಕೊಡಗಿನ ರಸ್ತೆಗಳ ಅಭಿವೃದ್ಧಿಗೆ ನಮ್ಮ ಅಭ್ಯಂತರವಿಲ್ಲ. ಆದರೆ ಕೊಡಗಿನ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಪ್ರಾಕೃತಿಕ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡುವ ದೊಡ್ಡ ಪ್ರಮಾಣದ ರಸ್ತೆಗಳು ಬೇಕಾಗಿಲ್ಲ. ಜಿಲ್ಲೆಯಲ್ಲಿ ಕಳೆದ ವರ್ಷ ಸಂಭವಿಸಿದ ಪ್ರಾಕೃತಿಕ ವಿಕೋಪದ ಹಿಂದಿರುವ ಕಾರಣಗಳ ಬಗ್ಗೆ ತಜ್ಞರು ಬೊಟ್ಟು ಮಾಡಿದ್ದು, ಇಂತಹ ಸ್ಥಿತಿಯಲ್ಲಿ ಮತ್ತೆ ಜಿಲ್ಲೆಯ ಪರಿಸರದ ಮೇಲೆ ದಾಳಿ ಬೇಡ.
-ರಾಜೀವ್ ಬೋಪಯ್ಯ, ಅಧ್ಯಕ್ಷ , ಕೊಡಗು ಮಾರಕ ಯೋಜನೆ ವಿರೋಧಿ ಹೋರಾಟ ವೇದಿಕೆ
---
ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಗೆ ರಾಷ್ಟ್ರೀಯ ಹೆದ್ದಾರಿಯ ಅಗತ್ಯ ಇದೆ. ಕೊಡಗಿನಿಂದ ಹೊರಗೆ ಬೆಂಗಳೂರಿನಂತಹ ನಗರಗಳಲ್ಲಿ ಹೈಫೈ ಆಗಿ ವಾಸ ಮಾಡುತ್ತಿರುವ ಜಿಲ್ಲೆಯ ಮೂಲದವರೇ ಬಹುತೇಕ ಮಂದಿ ಈ ಯೋಜನೆ ವಿರೋಧಿಸುತ್ತಿದ್ದಾರೆ. ಹಾಗಾದರೆ ಇಲ್ಲಿಯೇ ನೆಲೆಕಂಡುಕೊಂಡವರು ಅಂತಹ ಸೌಲಭ್ಯಗಳಿಂದ ವಂಚಿತರಾಗಬೇಕಾ?
-ಕಾಳನ ರವಿ, ನೈಜ ಸೇವ್ ಕೊಡಗು ಸಂಘಟನೆ ಪದಾಧಿಕಾರಿ
ಕೊಡಗಿನ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಪರ-ವಿರೋಧ ಅಭಿಪ್ರಾಯಗಳು ದೊಡ್ಡಮಟ್ಟದಲ್ಲಿ ವ್ಯಕ್ತವಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣವನ್ನು ವಿರೋಧಿಸುವ ಮೂಲಕ ಕೊಡಗನ್ನು ಅಭಿವೃದ್ಧಿಯಿಂದ ದೂರ ಇಡಲಾಗುತ್ತಿದೆ ಎನ್ನುವುದು ರಾಷ್ಟ್ರೀಯ ಹೆದ್ದಾರಿ ಸಮರ್ಥಕರ ವಾದವಾದರೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ನಮ್ಮ ವಿರೋಧ. ಕೊಡಗಿನಂತಹ ಪರಿಸರ ಸೂಕ್ಷ ್ಮ ಪ್ರದೇಶದಲ್ಲಿ ಇಂತಹ ಯೋಜನೆ ಜಾರಿಗೊಳಿಸುವಾಗ ಇಲ್ಲಿನ ಜನಾಭಿಪ್ರಾಯ ಪರಿಗಣಿಸಬೇಕು ಎನ್ನುವುದು ನಮ್ಮ ಒತ್ತಾಯ ಎನ್ನುತ್ತಾರೆ ಪರಿಸವಾದಿಗಳು. ಈ ಮಧ್ಯೆ ಬುಧವಾರ (ಜು.31) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮಡಿಕೇರಿಯಲ್ಲಿ ಕರೆದಿದ್ದ ಸಮಾಲೋಚನಾ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಶುರುವಾಗಿದೆ ಪ್ರಕ್ರಿಯೆ: ಮೈಸೂರು-ಮಡಿಕೇರಿ ಹೈಸ್ಪೀಡ್ ಎಕ್ಸ್ಪ್ರೆಸ್ ಹೆದ್ದಾರಿ-275 ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕ್ರಿಯೆ ಶುರುವಾಗಿದೆ. ಯೋಜನೆಗೆ ಅಗತ್ಯವಿರುವ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮೈಸೂರಿನ ರಾಮಸ್ವಾಮಿ ವೃತ್ತದ ಬಳಿ ಚಾಮರಾಜಪುರಂನ ಗೀತಾ ರಸ್ತೆಯಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಸಕ್ಷ ಮ ಪ್ರಾಧಿಕಾರದ ಕಚೇರಿಯೂ ಕಾರ್ಯಾರಂಭ ಮಾಡಿದ್ದು, ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಪತ್ರಿಕಾ ಪ್ರಕಟಣೆಯನ್ನೂ ಹೊರಡಿಸಲಾಗಿದೆ.
ಎಕ್ಸ್ಪ್ರೆಸ್ ಹೆದ್ದಾರಿ: ಮೈಸೂರು-ಮಡಿಕೇರಿ ಹೈಸ್ಪೀಡ್ ಎಕ್ಸ್ಪ್ರೆಸ್ ಹೆದ್ದಾರಿ-275 ಒಟ್ಟು 116 ಕಿ.ಮೀ. ಉದ್ದ ಮತ್ತು 14 ಮೀಟರ್ ಅಗಲದ 4 ಪಥದ ರಸ್ತೆಯಾಗಿದೆ. ಶ್ರೀರಂಗಪಟ್ಟಣ ಸಮೀಪ ಪಶ್ಚಿಮ ವಾಹಿನಿ ಮತ್ತು ನಗುವನ ಹಳ್ಳಿ ನಡುವೆ ಬೆಂಗಳೂರು-ಮೈಸೂರು ಹೆದ್ದಾರಿಯಿಂದ ತಿರುವು ಪಡೆದು ಹುಣಸೂರು ಸಮೀಪ ಗೋಣಿಕೊಪ್ಪಲುವಿಗೆ ಹೋಗುವ ಡೀವಿಯೇಷನ್ ಬಳಿ ಕೂಡುತ್ತದೆ. ಮುಂದೆ ಕಳ್ಳಬೆಟ್ಟ, ಕಂಪಲಾಪುರ, ಬೈಲಕುಪ್ಪೆ, ಕೊಪ್ಪ, ಕುಶಾಲನಗರ, ಸುಂಟಿಕೊಪ್ಪ ಮೂಲಕ ಮಡಿಕೇರಿ ಸಂಪರ್ಕಿಸುತ್ತದೆ. ಮಧ್ಯೆ ಬರುವ ಪಟ್ಟಣಗಳು, ಹೋಬಳಿ ಕೇಂದ್ರಗಳ ಹೊರ ಭಾಗದಲ್ಲಿ ಬೈಪಾಸ್ ರಸ್ತೆಯಾಗುವದರಿಂದ ಯಾವುದೇ ಅಡೆ-ತಡೆಯಿಲ್ಲದೆ ವಾಹನಗಳು ಒಂದೇ ವೇಗದಲ್ಲಿ ಚಲಿಸಬಹುದು ಎನ್ನಲಾಗುತ್ತಿದೆ.
6 ಸಾವಿರ ಕೋಟಿ ಪರಿಹಾರ: ಯೋಜನೆಗೆ ಸುಮಾರು 516 ಹೆಕ್ಟೇರ್ ಭೂಮಿ ಬೇಕು. ಶೇ.25 ಈಗಿರುವ ರಸ್ತೆಯೇ ಬಳಕೆ ಆಗುತ್ತದೆ. ಶೇ.40ರಷ್ಟು ಸರಕಾರಿ ಭೂಮಿ ಇದೆ. ಇನ್ನುಳಿದ ಭೂಮಿ ಖಾಸಗಿ ವ್ಯಕ್ತಿಗಳಿಂದ ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ 6 ಸಾವಿರ ಕೋಟಿ ಪರಿಹಾರ ಕೊಡಬೇಕಾಗಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಂದಾಜಿಸಿದೆ. ಮೊದಲ ಹಂತದಲ್ಲಿ ಮೈಸೂರು-ಕುಶಾಲನಗರ ಮಧ್ಯೆ 85 ಕಿ.ಮೀ. ಹೆದ್ದಾರಿ ನಿರ್ಮಾಣ ಆಗಲಿದೆ. 2ನೇ ಹಂತದಲ್ಲಿ ಮಡಿಕೇರಿ, ಸುಳ್ಯ, ಬಂಟ್ವಾಳ ಮಧ್ಯೆ ರಸ್ತೆ ನಿರ್ಮಿಸಲಾಗುವುದು. ಈ ಸಂಬಂಧ ಬೆಂಗಳೂರು ಮೂಲದ ಖಾಸಗಿ ಸಂಸ್ಥೆಯಿಂದ ಅಧ್ಯಯನ ನಡೆದಿದೆ. ಸಂಪೂರ್ಣ ಭೂಸ್ವಾಧೀನದ ನಂತರ ಯೋಜನೆಯ ಒಟ್ಟು ಖರ್ಚು ಅಂದಾಜಿಸಲಾಗುವುದು ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಹೆದ್ದಾರಿ ಸಮರ್ಥಕರ ವಾದ
-ಮೈಸೂರು-ಬಂಟ್ವಾಳ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಳ
-ಮಡಿಕೇರಿ-ಮೈಸೂರು ಮಧ್ಯೆ ಸಂಚಾರ ಅವಧಿ ಕಡಿಮೆಯಾಗಲಿದೆ
-ಕುಶಾಲನಗರ - ಮಡಿಕೇರಿ ಮಧ್ಯೆ ಅಪಘಾತಗಳ ಸಂಖ್ಯೆ ಇಳಿಮುಖ
-ಕಣ್ಣೂರು, ಮಡಿಕೇರಿ, ಸುಳ್ಯ, ಹೊಳೆನರಸೀಪುರ ಕಡೆಯಿಂದ ಬೆಂಗಳೂರಿಗೆ ಹೋಗುವವರಿಗೆ ಅನುಕೂಲ
-ಮಡಿಕೇರಿ-ಬೆಂಗಳೂರು ನಡುವೆ ಸಂಚರಿಸುವವರು ಮೈಸೂರಿಗೆ ಬಾರದೇ ನೇರವಾಗಿ ಹೋಗಬಹುದು
-ಮೈಸೂರು-ಮಡಿಕೇರಿ ಮಧ್ಯೆ ಕಡಿಮೆ ಅವಧಿಯ ಪ್ರಯಾಣ. ಇಂಧನ ಉಳಿತಾಯ, ವಾಯುಮಾಲಿನ್ಯ, ಅಪಘಾತಗಳ ನಿಯಂತ್ರಣ
-ಸರಕು ಸಾಗಣೆ ವ್ಯವಸ್ಥೆಗಳಿಗೆ ಸಹಕಾರಿ
ವಿರೋಧಿಗಳ ವಾದ
-ಅರಣ್ಯ ಸಂಪತ್ತು ನಾಶಗೊಳಿಸಿ ನಿರ್ಮಾಣವಾಗುವ ಹೆದ್ದಾರಿ ಕಾಮಗಾರಿ ಕೊಡಗಿಗೆ ಬೇಡ
-ಕಾಂಕ್ರೀಟಿಕರಣಗೊಳಿಸುವ ಮೂಲಕ ಕೊಡಗಿನ ಮೂಲ ಸ್ವರೂಪಕ್ಕೆ ಧಕ್ಕೆ
-ನೈಸರ್ಗಿಕ ಜಲಮೂಲಗಳಿಗೆ ಅಡಚಣೆ
-ಅಪಘಾತಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಹೆದ್ದಾರಿ ನಿರ್ಮಾಣಗೊಂಡ ಬಳಿಕವೂ ಹಲವೆಡೆ ಹೆಚ್ಚಿನ ಅಪಘಾತಗಳು ಸಂಭವಿಸಿವೆ
-ಈಗಿರುವ ರಸ್ತೆಯನ್ನೇ ಅಭಿವೃದ್ಧಿಪಡಿಸಿ ದ್ವಿಪಥ ರಸ್ತೆಯಾಗಿ ಪರಿವರ್ತಿಸಿದರೆ ಸಾಕು
-ರಸ್ತೆ ವಿಸ್ತರಣೆ ಸಂದರ್ಭ ಕೇರಳದ ವ್ಯವಸ್ಥೆ ಮಾದರಿ ಆಗಲಿ
ಸಭೆ ಮುಂದಕ್ಕೆ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮಡಿಕೇರಿಯ ಕೋಟೆ ಹಳೇ ವಿಧಾನಸಭಾಂಗಣದಲ್ಲಿ ಬುಧವಾರ (ಜು.31) ಕರೆದಿದ್ದ ಸಮಾಲೋಚನಾ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ಜಿಲ್ಲೆಯಲ್ಲಿ ಹೆದ್ದಾರಿ ನಿರ್ಮಾಣಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸಭೆ ಮುಂದಕ್ಕೆ ಹೋಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅನುಮೋದನೆಗೆ ಅನುಗುಣವಾಗಿ ಭಾರತ ಸರಕಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮೈಸೂರಿನಿಂದ ಮಡಿಕೇರಿವರೆಗೆ ನಿರ್ಮಿಸಲಿರುವ 4 ಪಥಗಳ ಹೆದ್ದಾರಿ ಯೋಜನೆಯ ಬಗ್ಗೆ ಸಾರ್ವಜನಿಕರ ತಿಳಿವಳಿಕೆ, ಸಂಪರ್ಕ ಹಾಗೂ ಅಭಿಪ್ರಾಯ ಸಂಗ್ರಹಿಸಲು ಸಾರ್ವಜನಿಕರೊಂದಿಗೆ ಈ ಸಮಾಲೋಚನಾ ಸಭೆ ಆಯೋಜಿಸಲಾಗಿತ್ತು. ಸಾರ್ವಜನಿಕರು ತಮ್ಮ ವೈಯಕ್ತಿಕ ಅಭಿಪ್ರಾಯ ಸಲ್ಲಿಸಬಹುದು ಎಂದು ಕೂಡ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಕಳೆದ ವರ್ಷ ಅ.10ರಂದು ಕುಶಾಲನಗರದಲ್ಲಿ ನಡೆದಿದ್ದ ಇಂತಹದ್ದೇ ಸಭೆ ರಾಷ್ಟ್ರೀಯ ಹೆದ್ದಾರಿಯ ಪರ-ವಿರೋಧ ಬಣದ ವಾಗ್ವಾದಕ್ಕೆ ಕಾರಣವಾಗಿದ್ದಲ್ಲದೆ ಹೆಚ್ಚಿನ ಪ್ರಯೋಜನ ಆದಂತೆ ಕಂಡುಬರಲಿಲ್ಲ.
ಕೊಡಗಿನ ರಸ್ತೆಗಳ ಅಭಿವೃದ್ಧಿಗೆ ನಮ್ಮ ಅಭ್ಯಂತರವಿಲ್ಲ. ಆದರೆ ಕೊಡಗಿನ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಪ್ರಾಕೃತಿಕ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡುವ ದೊಡ್ಡ ಪ್ರಮಾಣದ ರಸ್ತೆಗಳು ಬೇಕಾಗಿಲ್ಲ. ಜಿಲ್ಲೆಯಲ್ಲಿ ಕಳೆದ ವರ್ಷ ಸಂಭವಿಸಿದ ಪ್ರಾಕೃತಿಕ ವಿಕೋಪದ ಹಿಂದಿರುವ ಕಾರಣಗಳ ಬಗ್ಗೆ ತಜ್ಞರು ಬೊಟ್ಟು ಮಾಡಿದ್ದು, ಇಂತಹ ಸ್ಥಿತಿಯಲ್ಲಿ ಮತ್ತೆ ಜಿಲ್ಲೆಯ ಪರಿಸರದ ಮೇಲೆ ದಾಳಿ ಬೇಡ.
-ರಾಜೀವ್ ಬೋಪಯ್ಯ, ಅಧ್ಯಕ್ಷ , ಕೊಡಗು ಮಾರಕ ಯೋಜನೆ ವಿರೋಧಿ ಹೋರಾಟ ವೇದಿಕೆ
---
ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಗೆ ರಾಷ್ಟ್ರೀಯ ಹೆದ್ದಾರಿಯ ಅಗತ್ಯ ಇದೆ. ಕೊಡಗಿನಿಂದ ಹೊರಗೆ ಬೆಂಗಳೂರಿನಂತಹ ನಗರಗಳಲ್ಲಿ ಹೈಫೈ ಆಗಿ ವಾಸ ಮಾಡುತ್ತಿರುವ ಜಿಲ್ಲೆಯ ಮೂಲದವರೇ ಬಹುತೇಕ ಮಂದಿ ಈ ಯೋಜನೆ ವಿರೋಧಿಸುತ್ತಿದ್ದಾರೆ. ಹಾಗಾದರೆ ಇಲ್ಲಿಯೇ ನೆಲೆಕಂಡುಕೊಂಡವರು ಅಂತಹ ಸೌಲಭ್ಯಗಳಿಂದ ವಂಚಿತರಾಗಬೇಕಾ?
-ಕಾಳನ ರವಿ, ನೈಜ ಸೇವ್ ಕೊಡಗು ಸಂಘಟನೆ ಪದಾಧಿಕಾರಿ