ಆ್ಯಪ್ನಗರ

ಕೊಡವ ಹಾಕಿ ಹಬ್ಬಕ್ಕೆ ಹಾಕಿ ಇಂಡಿಯಾ ಅಧ್ಯಕ್ಷರಿಗೆ ಆಹ್ವಾನ

ಪ್ರತಿ ವರ್ಷ ಹಲವು ವಿಶೇಷತೆಗೆಳೊಂದಿಗೆ ಗಮನ ಸೆಳೆಯುತ್ತಿರುವ ಕೊಡವ ಹಾಕಿ ಹಬ್ಬಕ್ಕೆ ಈ ಬಾರಿ ಹಾಕಿ ಇಂಡಿಯಾದ ಅಧ್ಯಕ್ಷ ಹಾಗೂ ಕಾರ್ಯದರ್ಶಿಗೆ ಆಹ್ವಾನ ನೀಡಲಾಗಿದ್ದು, ಇದರಿಂದಾಗಿ ಜಿಲ್ಲೆಯ ಹಾಕಿ ಪ್ರತಿಭೆಗಳಿಗೆ ರಾಷ್ಟ್ರಮಟ್ಟದಲ್ಲಿ ಮಿಂಚುವ ಮತ್ತೊಂದು ಅವಕಾಶ ಲಭ್ಯವಾಗಿದೆ.

ವಿಕ ಸುದ್ದಿಲೋಕ 26 Mar 2016, 4:38 am
ಮಡಿಕೇರಿ: ಪ್ರತಿ ವರ್ಷ ಹಲವು ವಿಶೇಷತೆಗೆಳೊಂದಿಗೆ ಗಮನ ಸೆಳೆಯುತ್ತಿರುವ ಕೊಡವ ಹಾಕಿ ಹಬ್ಬಕ್ಕೆ ಈ ಬಾರಿ ಹಾಕಿ ಇಂಡಿಯಾದ ಅಧ್ಯಕ್ಷ ಹಾಗೂ ಕಾರ್ಯದರ್ಶಿಗೆ ಆಹ್ವಾನ ನೀಡಲಾಗಿದ್ದು, ಇದರಿಂದಾಗಿ ಜಿಲ್ಲೆಯ ಹಾಕಿ ಪ್ರತಿಭೆಗಳಿಗೆ ರಾಷ್ಟ್ರಮಟ್ಟದಲ್ಲಿ ಮಿಂಚುವ ಮತ್ತೊಂದು ಅವಕಾಶ ಲಭ್ಯವಾಗಿದೆ.
Vijaya Karnataka Web hockey feast invite the president of hockey india
ಕೊಡವ ಹಾಕಿ ಹಬ್ಬಕ್ಕೆ ಹಾಕಿ ಇಂಡಿಯಾ ಅಧ್ಯಕ್ಷರಿಗೆ ಆಹ್ವಾನ

ಈಗಾಗಲೇ ಹಾಕಿ ಕೊಡಗುವಿಗೆ ರಾಷ್ಟ್ರಮಟ್ಟದ ಮಾನ್ಯತೆ ಲಭ್ಯವಾಗಿದೆ. ಇದರಿಂದಾಗಿ ಕೊಡಗಿನ ನಾನಾ ವಿಭಾಗಗಳ ತಂಡಗಳಿಗೆ ರಾಷ್ಟ್ರಮಟ್ಟದಲ್ಲಿ ಆಡಲು ಅವಕಾಶ ಲಭ್ಯವಾಗಿದೆ. ಈಗಾಗಲೇ ಸಂಭವನೀಯರ ತಂಡವನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ತರಬೇತಿ ನೀಡಲಾಗುತ್ತಿದೆ.
ಇದರೊಂದಿಗೆ ಏ.10ರಿಂದ ಮೇ 8 ರವರೆಗೆ ನಡೆಯಲಿರುವ 20ನೇ ವರ್ಷದ ಕೊಡವ ಹಾಕಿ ಹಬ್ಬ ಶಾಂತೆ ಯಂಡ ಕಪ್‌ಗೆ ಹಾಕಿ ಇಂಡಿಯಾದ ಅಧ್ಯಕ್ಷರಾದ ಡಾ.ನರೀಂದರ್ ಧ್ರುವ್ ಬಾತ್ರ ಹಾಗೂ ಕಾರ್ಯ ದರ್ಶಿ ಮುಸ್ತಾಕ್ ಅಹ್ಮದ್ ಅವರನ್ನು ಕರೆಸಲು ಪ್ರಯತ್ನಿಸ ಲಾಗುತ್ತಿದೆ. ಇವರ ಸಮ್ಮುಖದಲ್ಲಿ ಕೊಡಗಿನ ಯುವ ಹಾಕಿ ಪಟುಗಳು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಅವಕಾಶ ಲಭ್ಯವಾಗಲಿದೆ. ಇಲ್ಲಿನ ಆಟಗಾರರಿಗೆ ರಾಷ್ಟ್ರಮಟ್ಟದಲ್ಲಿ ಉದ್ಯೋಗ ಸೇರಿದಂತೆ ಹಲವು ಅವಕಾಶಗಳು ಲಭ್ಯವಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈ ಉದ್ದೇಶದಿಂದ ಅವರನ್ನು ಕೊಡಗಿಗೆ ಕರೆಯಿಸಲಾಗುತ್ತಿದೆ.
ಅಕಾಡೆಮಿ ವಾರ್ಷಿಕ ಸಭೆ: ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಹಾಗೂ ಕೊಡವ ಹಾಕಿ ಹಬ್ಬದ ಜನಕ ಪಾಡಂಡ ಕುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ವಿರಾಜಪೇಟೆ ಯಲ್ಲಿ ವಾರ್ಷಿಕ ಮಹಾಸಭೆ ನಡೆಯಿತು. ಇದರಲ್ಲಿ ಎಲ್ಲಾ ಕುಟುಂಬಗಳ ಪ್ರತಿನಿಧಿಗಳು ಹಾಗೂ ಈ ಬಾರಿ ಹಾಕಿ ಹಬ್ಬವನ್ನು ಆಯೋಜಿಸುವ ಶಾಂತೆಯಂಡ ಕುಟುಂಬದ ಪ್ರತಿನಿಧಿಗಳ ಭಾಗವಹಿಸಿದ್ದರು.
ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡಿ, ತಮ್ಮ ಕುಟುಂಬ ಹಾಕಿ ಹಬ್ಬವನ್ನು ನಡೆಸಲು ಎಲ್ಲಾ ರೀತಿಯ ತಯಾರಿ ನಡೆಸಿದೆ. ಈಗಾ ಗಲೇ ಹಾಕಿ ಮೈದಾನವನ್ನು ಸಿದ್ಧಪಡಿಸ ಲಾಗುತ್ತಿದೆ. ತಿಂಗಳ ಅಂತ್ಯಕ್ಕೆ ಈ ಕಾರ್ಯ ಮುಗಿಯಲಿದೆ. ಗ್ಯಾಲರಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪಾರ್ಕಿಂಗ್‌ಗೆ ಕೂಡ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಮೆರವಣಿಗೆ: ಹಾಕಿ ಹಬ್ಬ ಉದ್ಘಾಟನೆಯಾಗ ಲಿರುವ ಏಪ್ರಿಲ್ 10 ರಂದು ಜನರಲ್ ತಿಮ್ಮಯ್ಯ ವೃತ್ತದಿಂದ ಮೆರವಣಿಗೆ ಹೊರಡಲಿದೆ. ಕೊಡವ ಸಾಹಿತ್ಯ ಅಕಾಡೆಮಿಯ ಸಹಯೋಗ ದಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ ಎಂದರು. 20 ಗುಂಡು: ಈ ಬಾರಿ 20ನೇ ವರ್ಷದ ಹಾಕಿ ಹಬ್ಬ ವಾಗಿರುವುದರಿಂದ ಉದ್ಘಾಟನೆ ಸಂದರ್ಭ ಹಾಕಿ ಮೈದಾನದಲ್ಲಿ 20 ಗುಂಡುಗಳನ್ನು ಹಾರಿಸಲಾಗುವುದು. ಇಲ್ಲಿವರೆಗೆ ಕೊಡವ ಹಾಕಿ ಹಬ್ಬವನ್ನು ನಡೆಸಿದ 19 ಕುಟುಂಬಗಳ ಹಾಗೂ ಈ ಬಾರಿಯ ಶಾಂತೆಯಂಡ ಕುಟುಂಬದ ಮುಖ್ಯಸ್ಥರು ಗುಂಡು ಹಾರಿಸುತ್ತಾರೆ ಎಂದರು.
ರಕ್ಷಣ ಮಂತ್ರಿ ಆಗಮನ: ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ