ಕುಶಾಲನಗರ
ಕೊಡಗಿನ ಗಡಿಭಾಗ ಬಯಲುಸೀಮೆ ಹೆಬ್ಬಾಲೆ ಗ್ರಾಮದಲ್ಲಿ ಗ್ರಾಮೀಣ ಸೊಗಡಿನ ಹೊನ್ನಾರು ಉತ್ಸವ ಆಚರಣೆ ನಡೆಯಿತು.
ಯುಗಾದಿಯ ಹಬ್ಬದ ಅಂಗವಾಗಿ ಗ್ರಾಮದ ಶ್ರೀ ಬಸವೇಶ್ವರ ದೇವಾಲಯ ಸಮಿತಿಯ ವತಿಯಿಂದ ನಡೆದ ಹೊನ್ನಾರು ಉತ್ಸವದ ಅಂಗವಾಗಿ ಶ್ರೀ ಬಸವೇಶ್ವರ ದೇವಾಲಯದ ಅವರಣದಲ್ಲಿ ಬಸವೇಶ್ವರ ದೇವರು, ಸಿಂಗಾರಗೊಂಡ ಜೋಡಿ ಎತ್ತುಗಳು ಹಾಗೂ ಉಳುಮೆಗೆ ಬಳಸುವ ನೆಗಿಲುಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಸಿಂಗಾರಗೊಂಡ 50 ಕ್ಕೂ ಅಧಿಕ ಎತ್ತುಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಗ್ರಾಮದ ಪ್ರಮುಖ ಗ್ರಾಮದೇವತೆ ಶ್ರೀ ಬನಶಂಕರಿ ದೇವಿ ದೇವಾಲಯ ಆವರಣಕ್ಕೆ ತೆರಳು ಪೂಜೆ ಸಲ್ಲಿಸಲಾಯಿತು.
ದೇವಾಲಯದ ಜಮೀನಿನಲ್ಲಿ ಉಳುಮೆ ಮಾಡುವ ಮೂಲಕ ಹೊನ್ನಾರು ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ರೈತರು ತಮ್ಮ ತಮ್ಮ ಜಮೀನಿಗೆ ತರಳಿ ಉಳುಮೆಗೆ ಸಾಲು ಹೊಡೆದರು.
ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಬಸವರಾಜು ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥ್ದರು, ನೂರಾರು ರೈತರು ಭಾಗವಹಿಸಿದರು.
ಕೊಡಗಿನ ಗಡಿಭಾಗ ಬಯಲುಸೀಮೆ ಹೆಬ್ಬಾಲೆ ಗ್ರಾಮದಲ್ಲಿ ಗ್ರಾಮೀಣ ಸೊಗಡಿನ ಹೊನ್ನಾರು ಉತ್ಸವ ಆಚರಣೆ ನಡೆಯಿತು.
ಯುಗಾದಿಯ ಹಬ್ಬದ ಅಂಗವಾಗಿ ಗ್ರಾಮದ ಶ್ರೀ ಬಸವೇಶ್ವರ ದೇವಾಲಯ ಸಮಿತಿಯ ವತಿಯಿಂದ ನಡೆದ ಹೊನ್ನಾರು ಉತ್ಸವದ ಅಂಗವಾಗಿ ಶ್ರೀ ಬಸವೇಶ್ವರ ದೇವಾಲಯದ ಅವರಣದಲ್ಲಿ ಬಸವೇಶ್ವರ ದೇವರು, ಸಿಂಗಾರಗೊಂಡ ಜೋಡಿ ಎತ್ತುಗಳು ಹಾಗೂ ಉಳುಮೆಗೆ ಬಳಸುವ ನೆಗಿಲುಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಸಿಂಗಾರಗೊಂಡ 50 ಕ್ಕೂ ಅಧಿಕ ಎತ್ತುಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಗ್ರಾಮದ ಪ್ರಮುಖ ಗ್ರಾಮದೇವತೆ ಶ್ರೀ ಬನಶಂಕರಿ ದೇವಿ ದೇವಾಲಯ ಆವರಣಕ್ಕೆ ತೆರಳು ಪೂಜೆ ಸಲ್ಲಿಸಲಾಯಿತು.
ದೇವಾಲಯದ ಜಮೀನಿನಲ್ಲಿ ಉಳುಮೆ ಮಾಡುವ ಮೂಲಕ ಹೊನ್ನಾರು ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ರೈತರು ತಮ್ಮ ತಮ್ಮ ಜಮೀನಿಗೆ ತರಳಿ ಉಳುಮೆಗೆ ಸಾಲು ಹೊಡೆದರು.
ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಬಸವರಾಜು ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥ್ದರು, ನೂರಾರು ರೈತರು ಭಾಗವಹಿಸಿದರು.