ಆ್ಯಪ್ನಗರ

Madikeri Rains: ಕೊಡಗಿನಲ್ಲಿ ಗುಡ್ಡಕುಸಿತಕ್ಕೆ ಮೂವರು ಬಲಿ, ಕುಸಿದ ಮನೆ, ರಸ್ತೆ ಬಂದ್‌, ರಕ್ಷಣೆಗೆ ಹೆಲಿಕಾಪ್ಟರ್‌

ಕೊಡಗಿನಲ್ಲಿ ಮಳೆ ಮುಂದುವರಿದಿದ್ದು, ಆತಂಕದ ಸ್ಥಿತಿ ನಿರ್ಮಾಣಗೊಂಡಿದೆ. ಸಿದ್ದಾಪುರ ಬಳಿ ಮಳೆಯಿಂದಾಗಿ ಮನೆ ಕುಸಿದಿದೆ. ​

Vijaya Karnataka 16 Aug 2018, 1:57 pm
ಮಡಿಕೇರಿ: ಕೊಡಗಿನಲ್ಲಿ ಮಳೆ ಮುಂದುವರಿದಿದ್ದು, ಆತಂಕದ ಸ್ಥಿತಿ ನಿರ್ಮಾಣಗೊಂಡಿದೆ. ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಿದ್ದಾಪುರ ಬಳಿ ಮಳೆಯಿಂದಾಗಿ ಮನೆ ಕುಸಿದಿದೆ. ತಂತಿಪಾಲ ಬಳಿಯಲ್ಲಿ ಪ್ರವಾಹದಲ್ಲಿ ಕೆಲವರು ಕೊಚ್ಚಿಕೊಂಡು ಹೋಗಿರುವ ಶಂಕೆಯಿದ್ದು, ಹಲವರನ್ನು ರಕ್ಷಿಸಲಾಗಿದೆ.
Vijaya Karnataka Web madikeri


ಮಡಿಕೇರಿ ಮುತ್ತಪ್ಪ ದೇವಸ್ಥಾನ ಬಳಿಯಲ್ಲಿ ಭೂಕುಸಿತಗೊಂಡು ಮನೆ ನೆಲಕಚ್ಚಿದೆ. ಕಾಟಕೇರಿ ಗ್ರಾಮದಲ್ಲಿ ಭೂಕುಸಿತಗೊಂಡಿದ್ದು, ಯಶವಂತ್, ವೆಂಕಟರಮಣ, ಪವನ್ ಮೃತಪಟ್ಟಿದ್ದಾರೆ. ಒಬ್ಬರು ಗಾಯಗೊಂಡಿದ್ದಾರೆ.

ರಕ್ಷಣೆಗೆ ಹೆಲಿಕಾಪ್ಟರ್‌

ಕೊಡಗಿನ ಜನರ ರಕ್ಷಣೆಗೆ ಸೇನಾ ಹೆಲಿಕಾಪ್ಟರ್ ಹೋಗಲಿದೆ. ಎಮ್ಮೆತ್ತಾಳು, ಮೇಘತ್ತಾಳು ಗ್ರಾಮದ ಜನರ ರಕ್ಷಣೆಗೆ ಹೆಲಿಕಾಪ್ಟರ್ ಬಳಸಲಾಗುತ್ತದೆ. ಜಿಲ್ಲಾಡಳಿತದ ಮನವಿ ಮೇರೆಗೆ ಸೇನಾ ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಸಲಿದೆ. ಜನರ ರಕ್ಷಣೆಗೆ ಜಿಲ್ಲಾಡಳಿತ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ತಂತಿಪಾಲ, ಹಟ್ಟಿಕೊಳೆ ಭರ್ತಿ ಹಾಗೂ ಗುಡ್ಡಕುಸಿತದಿಂದ ನಡುವಲ್ಲಿ 60ಕ್ಕೂ ಹೆಚ್ಚು ಜನ ಸಿಲುಕಿದ್ದು, ಈಗಾಗಲೇ 20 ಜನರನ್ನು ರಕ್ಷಿಸಲಾಗಿದೆ. ಮಣ್ಣಿನಡಿ ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಹೆಬ್ಬಾಲೆ ಕಣಿವೆ ರಸ್ತೆ ಯ ಮೇಲೆ 3 ಅಡಿ ನೀರು ಇದೆ. ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದೆ.


ಕುಶಾಲನಗರ,ಮಡಿಕೇರಿ, ವಿರಾಜಪೇಟೆ, ಕುಶಾಲನಗರಗಳ ಹಲವು ಬಡಾವಣೆಗಳು ಜಲಾವೃತಗೊಂಡಿವೆ. ಮಡಿಕೇರಿ ವಿರಾಜಪೇಟೆ, ಮಡಿಕೇರಿ ಮಂಗಳೂರು, ಮಡಿಕೇರಿ ಹಟ್ಟಿಹೊಳೆ, ಸೋಮವಾರಪೇಟೆ ಸಕಲೇಶಪುರ ರಸ್ತೆಗಳು ಬಂದ್‌ ಆಗಿವೆ.


ಕಾಲೂರಿನಲ್ಲಿ ಜನರು ದ್ವೀಪದೊಳಗೆ ಸಿಲುಕಿದಂತಾಗಿದ್ದಾರೆ. ಇಡೀ ಕೊಡಗಿನಲ್ಲಿ ಎಲ್ಲಿಯೂ ವಿದ್ಯುತ್ ಇಲ್ಲದೆ ಸಂಕಷ್ಟವುಂಟಾಗಿದ್ದು, ಕುಡಿಯುವ ನೀರಿಗೂ ತೊಂದರೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ