ಆ್ಯಪ್ನಗರ

ವರುಣನ ಆರ್ಭಟಕ್ಕೆ ಕುಸಿದ ಮನೆ

ಸೋಮವಾರ ಬೆಳಗ್ಗೆ ವರುಣನ ಆರ್ಭಟಕ್ಕೆ ನಗರದ ಮಹದೇವಪೇಟೆಯಲ್ಲಿ ಮನೆಯೊಂದು ಕುಸಿದಿದೆ. ಮನೆಯವರ ಮುಂಜಾಗ್ರತೆಯಿಂದ ಭಾರಿ ಅನಾಹುತ ತಪ್ಪಿದೆ.

Vijaya Karnataka 10 Jul 2018, 5:00 am
ಮಡಿಕೇರಿ: ಸೋಮವಾರಬೆಳಗ್ಗೆ ವರುಣನ ಆರ್ಭಟಕ್ಕೆ ನಗರದ ಮಹದೇವಪೇಟೆಯಲ್ಲಿ ಮನೆಯೊಂದು ಕುಸಿದಿದೆ. ಮನೆಯವರ ಮುಂಜಾಗ್ರತೆಯಿಂದ ಭಾರಿ ಅನಾಹುತ ತಪ್ಪಿದೆ.
Vijaya Karnataka Web house collapsed
ವರುಣನ ಆರ್ಭಟಕ್ಕೆ ಕುಸಿದ ಮನೆ


ಮಹದೇವಪೇಟೆ ನಿವಾಸಿ ರಶ್ಮಿ ಮಾಲೀಕತ್ವದಲ್ಲಿದ್ದ ಮನೆ, ಕುಸಿಯುವ ಹಂತದಲ್ಲಿ ಇತ್ತು. ಅದೇ ಮನೆಯಲ್ಲೇ ಮೂರು ವರ್ಷಗಳಿಂದ ಸುಲಿತಾ, ಪ್ರಮೀಳಾ, ವಸಂತಿ ಎಂಬುವವರು ಬಾಡಿಗೆಗೆ ವಾಸವಿದ್ದರು. ಆದರೆ ಮನೆ ಬೀಳುವ ಹಂತದಲ್ಲಿದೆ ಎಂದು ತಿಳಿದಿದ್ದ ಸುಲಿತಾ ಕುಟುಂಬಕ್ಕೆ ಪಕ್ಕದ ಮನೆಯವರು ಆಶ್ರಯ ನೀಡಿದ್ದರು.

ಸೋಮವಾರ ಮುಂಜಾನೆ ಮನೆ ಕುಸಿದು ಬಿದ್ದಿದ್ದು, ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಮನೆಯೊಳಗೆ ಇದ್ದ ಪೀಠೋಪಕರಣ, ಬೀರು, ಟೈಲರಿಂಗ್‌ ಮಿಷನ್‌ ಸೇರಿದಂತೆ ಮತ್ತಿತರ ವಸ್ತುಗಳು ಜಖಂಗೊಂಡಿದ್ದು, ಅಪಾರ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ನಗರಸಭೆ ಸದಸ್ಯೆ ಸವಿತಾ ರಾಕೇಶ್‌ ಸೇರಿದಂತೆ, ನಗರಸಭೆ ಪೌರಾಯುಕ್ತೆ ಬಿ.ಶುಭಾ ಭೇಟಿ ನೀಡಿ ಪರೀಶಿಲನೆ ನಡೆಸಿ, ಹಾನಿ ಸಂಬಂಧಿಸಿದಂತೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

ಬರೆ ಕುಸಿತ: ಮಡಿಕೇರಿ ತಾಲೂಕಿನ ಮದೆನಾಡು ಮುಖ್ಯ ರಸ್ತೆಯಲ್ಲಿ ಸಣ್ಣಮಟ್ಟದಲ್ಲಿ ಬರೆ ಕುಸಿತವಾಗಿತ್ತು. ಇದರಿಂದ ಕೆಲ ಸಮಯ ವಾಹನ ಸವಾರರು ಪರದಾಡುವಂತೆ ಆಯಿತು. ಇದೇ ಸಂದರ್ಭ ಮಡಿಕೇರಿ-ಮಂಗಳೂರು ಹೆದ್ದಾರಿಯ ಇಕ್ಕೆಲಗಳಲ್ಲಿ ಚರಂಡಿ ಸ್ವಚ್ಛಗೊಳಿಸುತ್ತಿದ್ದ ಜೆಸಿಬಿ ಮುಖಾಂತರ ಮಣ್ಣು ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ