ಮಡಿಕೇರಿ
ಜಿಲ್ಲೆಯ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗಾಗಿ ನಿರ್ಮಿಸಲಾಗುತ್ತಿರುವ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಸದ್ಯದಲ್ಲೇ ಮುಖ್ಯಮಂತ್ರಿ ಅವರಿಂದ ಮನೆಗಳ ಲೋಕಾರ್ಪಣೆ ಕಾರ್ಯ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರು ಸಚಿವ ಸಾ.ರಾ. ಮಹೇಶ್ ತಿಳಿಸಿದರು. ಮಾದಾಪುರ ಸಮೀಪದ ಜಂಬೂರು ಮತ್ತು ಮಡಿಕೇರಿ ಸಮೀಪದ ಕರ್ಣಂಗೇರಿ ಗ್ರಾಮದಲ್ಲಿ ನಡೆಯುತ್ತಿರುವ ಮನೆಗಳ ನಿರ್ಮಾಣ ಕಾಮಗಾರಿ ಪರಿಶೀಲನೆ ನಂತರ ಶನಿವಾರ ಮಾತನಾಡಿದರು.
ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವವರಿಗೆ ಈಗಾಗಲೇ ಸರಕಾರ ಪ್ರತಿ ತಿಂಗಳೂ ತಲಾ 10 ಸಾವಿರ ಬಾಡಿಗೆ ಭತ್ಯೆ ನೀಡುತ್ತಿದೆ. ಮಾದಾಪುರದಲ್ಲಿ 218, ಕರ್ಣಂಗೇರಿಯಲ್ಲಿ 35 ಹಾಗೂ ಮದೆನಾಡಿನಲ್ಲಿ 80 ಮನೆಗಳ ನಿರ್ಮಾಣ ಕಾರ್ಯ ತಲಾ 9.85 ಲಕ್ಷ ವೆಚ್ಚದಲ್ಲಿ ಪೂರ್ಣಗೊಂಡಿದ್ದು, ಮೂಲ ಸವಲತ್ತುಗಳನ್ನು ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ. ಜಂಬೂರು ಗ್ರಾಮದಲ್ಲಿ 200 ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇನ್ಫೋಸಿಸ್ ಸಂಸ್ಥೆಗೆ ನಿವೇಶನಗಳನ್ನು ಹಸ್ತಾಂತರಿಸಲಾಗಿದ್ದು, ಅಲ್ಲಿ ಕೂಡ ಮನೆಗಳ ನಿರ್ಮಾಣ ಕಾಮಗಾರಿ ಚುರುಕಿನಿಂದ ನಡೆಯುತ್ತಿದೆ. ಸರಕಾರ ಕೊಟ್ಟ ಮಾತಿನಂತೆ ಎಲ್ಲ ನಿರಾಶ್ರಿತರಿಗೂ ಮನೆಗಳನ್ನು ಹಸ್ತಾಂತರಿಸಲಿದೆ ಎಂದರು.
ಮಡಿಕೇರಿ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ಶುರುವಾಗಿದೆ. ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ಅಲ್ಲೊಂದು ವೃತ್ತ ನಿರ್ಮಿಸಿ ಪ್ರವಾಸಿ ಆಕರ್ಷಣೆಯ ತಾಣವನ್ನು ರೂಪಿಸಲಾಗುವುದು. ಹೊಸ ಖಾಸಗಿ ಬಸ್ ನಿಲ್ದಾಣ ಸದ್ಯದಲ್ಲೇ ಕಾರ್ಯಾರಂಭ ಮಾಡಲಿದೆ ಎಂದು ಮಾಹಿತಿ ನೀಡಿದರು. ಮಡಿಕೇರಿ ದಸರಾ ಅನುದಾನದ ಹಣ ಬಿಡುಗಡೆ ಆಗಿದೆ ಎಂದೂ ಈ ವೇಳೆ ಹೇಳಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಎಸ್ಪಿ ಡಾ. ಸುಮನಾ ಡಿ. ಪನ್ನೇಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಶಂಕರ್, ವಿಭಾಗಾಧಿಕಾರಿ ಜವರೇಗೌಡ, ಡಿವೈಎಸ್ಪಿ ಸುಂದರರಾಜ್, ಲೋಕೋಪಯೋಗಿ ಇಲಾಖೆ ಇಇ ಇಬ್ರಾಹಿಂ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಶಂಷುದ್ದೀನ್, ಪೌರಾಯುಕ್ತ ರಮೇಶ್ ಹಾಜರಿದ್ದರು.
ದಾರಿ ತಪ್ಪಿದ ಬೆಂಗಾವಲು ಪಡೆ ವಾಹನ
ಮಾದಾಪುರ ಸಮೀಪದ ಜಂಬೂರಿನಲ್ಲಿ ಕಾಮಗಾರಿ ವೀಕ್ಷಿಸಿ ಸಚಿವರು ಕರ್ಣಂಗೇರಿಗೆ ಆಗಮಿಸುತ್ತಿದ್ದ ವೇಳೆ ಸಚಿವರ ಬೆಂಗಾವಲು ಪಡೆ ವಾಹನ ದಾರಿ ತಪ್ಪಿ ಸುಮಾರು 1ಕಿಮೀ. ಮುಂದಕ್ಕೆ ಹೋದ ಘಟನೆ ನಡೆಯಿತು. ಕರ್ಣಂಗೇರಿ ಬಸ್ ನಿಲ್ದಾಣ ಬಳಿ ಎಡಕ್ಕೆ ತಿರುವು ತೆಗೆದುಕೊಳ್ಳುವ ಬದಲು ಬೆಂಗಾವಲು ಪಡೆ ವಾಹನ ನೇರವಾಗಿ ಸಂಚರಿಸಿದ ಕಾರಣ ಈ ಎಡವಟ್ಟಾಯಿತು. ವಿಭಾಗಾಧಿಕಾರಿ ವಾಹನ ಬಸ್ ನಿಲ್ದಾಣ ಬಳಿಯೇ ನಿಂತಿತ್ತಾದರೂ ಉಳಿದ ವಾಹನಗಳು ಸಚಿವರ ಕಾರನ್ನು ಹಿಂಬಾಲಿಸಿದವು. ಕೂಡಲೇ ಬೆಂಗಾವಲು ಪಡೆ ವಾಹನದಲ್ಲಿದ್ದವರನ್ನು ಎಚ್ಚರಿಸಿದ ನಂತರ ಮತ್ತೆ ಹಿಂತಿರುಗಿ ಬರಲಾಯಿತು.
ಜಿಲ್ಲೆಯ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗಾಗಿ ನಿರ್ಮಿಸಲಾಗುತ್ತಿರುವ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಸದ್ಯದಲ್ಲೇ ಮುಖ್ಯಮಂತ್ರಿ ಅವರಿಂದ ಮನೆಗಳ ಲೋಕಾರ್ಪಣೆ ಕಾರ್ಯ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರು ಸಚಿವ ಸಾ.ರಾ. ಮಹೇಶ್ ತಿಳಿಸಿದರು. ಮಾದಾಪುರ ಸಮೀಪದ ಜಂಬೂರು ಮತ್ತು ಮಡಿಕೇರಿ ಸಮೀಪದ ಕರ್ಣಂಗೇರಿ ಗ್ರಾಮದಲ್ಲಿ ನಡೆಯುತ್ತಿರುವ ಮನೆಗಳ ನಿರ್ಮಾಣ ಕಾಮಗಾರಿ ಪರಿಶೀಲನೆ ನಂತರ ಶನಿವಾರ ಮಾತನಾಡಿದರು.
ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವವರಿಗೆ ಈಗಾಗಲೇ ಸರಕಾರ ಪ್ರತಿ ತಿಂಗಳೂ ತಲಾ 10 ಸಾವಿರ ಬಾಡಿಗೆ ಭತ್ಯೆ ನೀಡುತ್ತಿದೆ. ಮಾದಾಪುರದಲ್ಲಿ 218, ಕರ್ಣಂಗೇರಿಯಲ್ಲಿ 35 ಹಾಗೂ ಮದೆನಾಡಿನಲ್ಲಿ 80 ಮನೆಗಳ ನಿರ್ಮಾಣ ಕಾರ್ಯ ತಲಾ 9.85 ಲಕ್ಷ ವೆಚ್ಚದಲ್ಲಿ ಪೂರ್ಣಗೊಂಡಿದ್ದು, ಮೂಲ ಸವಲತ್ತುಗಳನ್ನು ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ. ಜಂಬೂರು ಗ್ರಾಮದಲ್ಲಿ 200 ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇನ್ಫೋಸಿಸ್ ಸಂಸ್ಥೆಗೆ ನಿವೇಶನಗಳನ್ನು ಹಸ್ತಾಂತರಿಸಲಾಗಿದ್ದು, ಅಲ್ಲಿ ಕೂಡ ಮನೆಗಳ ನಿರ್ಮಾಣ ಕಾಮಗಾರಿ ಚುರುಕಿನಿಂದ ನಡೆಯುತ್ತಿದೆ. ಸರಕಾರ ಕೊಟ್ಟ ಮಾತಿನಂತೆ ಎಲ್ಲ ನಿರಾಶ್ರಿತರಿಗೂ ಮನೆಗಳನ್ನು ಹಸ್ತಾಂತರಿಸಲಿದೆ ಎಂದರು.
ಮಡಿಕೇರಿ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ಶುರುವಾಗಿದೆ. ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ಅಲ್ಲೊಂದು ವೃತ್ತ ನಿರ್ಮಿಸಿ ಪ್ರವಾಸಿ ಆಕರ್ಷಣೆಯ ತಾಣವನ್ನು ರೂಪಿಸಲಾಗುವುದು. ಹೊಸ ಖಾಸಗಿ ಬಸ್ ನಿಲ್ದಾಣ ಸದ್ಯದಲ್ಲೇ ಕಾರ್ಯಾರಂಭ ಮಾಡಲಿದೆ ಎಂದು ಮಾಹಿತಿ ನೀಡಿದರು. ಮಡಿಕೇರಿ ದಸರಾ ಅನುದಾನದ ಹಣ ಬಿಡುಗಡೆ ಆಗಿದೆ ಎಂದೂ ಈ ವೇಳೆ ಹೇಳಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಎಸ್ಪಿ ಡಾ. ಸುಮನಾ ಡಿ. ಪನ್ನೇಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಶಂಕರ್, ವಿಭಾಗಾಧಿಕಾರಿ ಜವರೇಗೌಡ, ಡಿವೈಎಸ್ಪಿ ಸುಂದರರಾಜ್, ಲೋಕೋಪಯೋಗಿ ಇಲಾಖೆ ಇಇ ಇಬ್ರಾಹಿಂ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಶಂಷುದ್ದೀನ್, ಪೌರಾಯುಕ್ತ ರಮೇಶ್ ಹಾಜರಿದ್ದರು.
ದಾರಿ ತಪ್ಪಿದ ಬೆಂಗಾವಲು ಪಡೆ ವಾಹನ
ಮಾದಾಪುರ ಸಮೀಪದ ಜಂಬೂರಿನಲ್ಲಿ ಕಾಮಗಾರಿ ವೀಕ್ಷಿಸಿ ಸಚಿವರು ಕರ್ಣಂಗೇರಿಗೆ ಆಗಮಿಸುತ್ತಿದ್ದ ವೇಳೆ ಸಚಿವರ ಬೆಂಗಾವಲು ಪಡೆ ವಾಹನ ದಾರಿ ತಪ್ಪಿ ಸುಮಾರು 1ಕಿಮೀ. ಮುಂದಕ್ಕೆ ಹೋದ ಘಟನೆ ನಡೆಯಿತು. ಕರ್ಣಂಗೇರಿ ಬಸ್ ನಿಲ್ದಾಣ ಬಳಿ ಎಡಕ್ಕೆ ತಿರುವು ತೆಗೆದುಕೊಳ್ಳುವ ಬದಲು ಬೆಂಗಾವಲು ಪಡೆ ವಾಹನ ನೇರವಾಗಿ ಸಂಚರಿಸಿದ ಕಾರಣ ಈ ಎಡವಟ್ಟಾಯಿತು. ವಿಭಾಗಾಧಿಕಾರಿ ವಾಹನ ಬಸ್ ನಿಲ್ದಾಣ ಬಳಿಯೇ ನಿಂತಿತ್ತಾದರೂ ಉಳಿದ ವಾಹನಗಳು ಸಚಿವರ ಕಾರನ್ನು ಹಿಂಬಾಲಿಸಿದವು. ಕೂಡಲೇ ಬೆಂಗಾವಲು ಪಡೆ ವಾಹನದಲ್ಲಿದ್ದವರನ್ನು ಎಚ್ಚರಿಸಿದ ನಂತರ ಮತ್ತೆ ಹಿಂತಿರುಗಿ ಬರಲಾಯಿತು.