ವರ್ಷವಾದರೂ ರಸ್ತೆ ಕಾಮಗಾರಿ ಅಪೂರ್ಣ
ಇಲ್ಲಿಗೆ ಸಮೀಪದ ಅಬ್ಬೂರುಕಟ್ಟೆಯಿಂದ ಯಲಕನೂರು ಹೊಸಳ್ಳಿ ಗ್ರಾಮದ ಮೂಲಕ ಕಣಿವೆಗೆ ಸಂಪರ್ಕಿಸುವ ರಸ್ತೆ ಕಾಮಗಾರಿ ವರ್ಷವಾದರೂ ಪೂರ್ಣಗೊಂಡಿಲ್ಲ. ಪರಿಣಾಮ ಗ್ರಾಮಸ್ಥರು ಹಾಗೂ ವಾಹನ ಸವಾರರು ನಿತ್ಯ ಪರದಾಡುವಂತಾಗಿದೆ !
ವಿಕ ಸುದ್ದಿಲೋಕ 23 Jul 2016, 4:07 pm
ಅಬ್ಬೂರುಕಟ್ಟೆಯಿಂದ ಯಲಕನೂರು ಹೊಸಳ್ಳಿ ಸಂಪರ್ಕ ಹಾದಿ ಅವ್ಯವಸ್ಥೆ
ತೇಲಪಂಡ ಕವನ್ ಕಾರ್ಯಪ್ಪ ಸೋಮವಾರಪೇಟೆ: ಇಲ್ಲಿಗೆ ಸಮೀಪದ ಅಬ್ಬೂರುಕಟ್ಟೆಯಿಂದ ಯಲಕನೂರು ಹೊಸಳ್ಳಿ ಗ್ರಾಮದ ಮೂಲಕ ಕಣಿವೆಗೆ ಸಂಪರ್ಕಿಸುವ ರಸ್ತೆ ಕಾಮಗಾರಿ ವರ್ಷವಾದರೂ ಪೂರ್ಣಗೊಂಡಿಲ್ಲ. ಪರಿಣಾಮ ಗ್ರಾಮಸ್ಥರು ಹಾಗೂ ವಾಹನ ಸವಾರರು ನಿತ್ಯ ಪರದಾಡುವಂತಾಗಿದೆ !
ಕೋಟಿ 5 ರೂ.ವೆಚ್ಚದಲ್ಲಿ ಸುಮಾರು 5.29 ಕಿಲೋ ಮೀಟರ್ ಉದ್ದದ ಈ ರಸ್ತೆ ಕಳೆದ ಹಲವು ವರ್ಷ ಗಳಿಂದ ಸಂಪೂರ್ಣ ಹದಗೆಟ್ಟಿರುವುದರ ಬಗ್ಗೆ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಸ್ತೆಯನ್ನು ‘ನಮ್ಮ ಊರು ನಮ್ಮ ರಸ್ತೆ’ ಯೋಜನೆಯಡಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 5.23 ಕೋಟಿ ರೂ. ವೆಚ್ಚದ ಕಾಮಗಾರಿಗೆ ಯೋಜನೆ ರೂಪಿಸಲಾಗಿತ್ತು. ಅದರಂತೆ ಜೂನ್ 25, 2015ರಂದು ಮಡಿಕೇರಿ ವಿಧಾನಸಭೆ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದರು.
ಈ ಯೋಜನೆಯ ಒಪ್ಪಂದದ ಪ್ರಕಾರ 2016ರ ಮೇ 24ರಂದು ರಸ್ತೆ ಸಾರ್ವಜನಿಕ ಸೇವೆಗೆ ಲಭ್ಯವಾಗಬೇಕಿತ್ತು. ಆದರೆ ಗುತ್ತಿಗೆದಾರರು ಕಡಿಮೆ ಪ್ರಮಾಣದಲ್ಲಿ ನೌಕರರನ್ನು ನಿಯೋಜಿಸಿದ್ದರಿಂದ ಕಾಮಗಾರಿಯು ಮಂದಗತಿಯಲ್ಲಿ ಸಾಗಿದೆ. ಇನ್ನು ಈಗಾಗಲೇ ಮಳೆಗಾಲ ಆರಂಭವಾಗಿದ್ದು, ವಾಹನ ಸವಾರರ ಪರಿಸ್ಥಿತಿ ತೀರಾ ಶೋಚನೀಯವಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.
ಈಗಾಗಲೇ ರಸ್ತೆಯ ಎರಡೂ ಬದಿಗಳಲ್ಲಿ ಬೇಲಿ ತೆರವುಗೊಳಿಸಿ ವಿಸ್ತರಿಸಲಾಗಿದೆ. ಇದ್ದ ಹಳೆಯ ಡಾಂಬರು ರಸ್ತೆಯನ್ನು ಕಿತ್ತು ಹಾಕಿರುವುದರಿಂದ ಬಹುತೇಕ ಕಡೆಗಳಲ್ಲಿ ಕೆಸರಿನ ಗುಂಡಿಗಳಾಗಿವೆ. ಈ ಭಾಗದ ವಿದ್ಯಾರ್ಥಿಗಳು ಕುಶಾಲನಗರ, ಸೋಮವಾರಪೇಟೆ ಹಾಗೂ ಶನಿವಾರಸಂತೆ ಪ್ರದೇಶಗಳಲ್ಲಿನ ಶಾಲಾ ಕಾಲೇಜುಗಳಿಗೆ ಇದೇ ರಸ್ತೆಯನ್ನು ಅವಲಂಬಿಸಬೇಕಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ವಿ.ಎಂ.ವಿಜಯ್ರ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಗುತ್ತಿಗೆದಾರರು ರಸ್ತೆ ಕಾಮಗಾರಿಯನ್ನು ಒಂದು ವರ್ಷದಲ್ಲಿ ಮುಗಿಸಬೇಕಾಗಿತ್ತು. ಆದರೆ ಇನ್ನೂ ಕೇವಲ ಶೇ.20 ರಿಂದ 30ರಷ್ಟು ಕಾಮಗಾರಿ ಮಾತ್ರ ಮುಗಿದಿದೆ. ಸೂಕ್ತ ಸಮಯದಲ್ಲಿ ಕಾಮಗಾರಿ ಮುಗಿಯದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗು ಶಾಲಾ ವಿದ್ಯಾರ್ಥಿ ಗಳಿಗೆೆ ತೊಂದರೆಯಾಗಿದೆ. ಈಗಾಗಲೇ ಮಳೆ ಕೂಡ ಆರಂಭವಾ ಗಿದ್ದು, ಮುಂದಿನ ದಿನಗಳಲ್ಲಿ ರಸ್ತೆಯಲ್ಲಿ ಸಂಚರಿಸುವುದೇ ತ್ರಾಸದಾಯಕ ಎಂದು ಗ್ರಾಮಸ್ಥರಾದ ಮೋಹನ್ ಆರೋಪಿಸುತ್ತಾರೆ.
ಒಟ್ಟಾರೆ ಜನರ ಅನುಕೂಲಕ್ಕಾಗಿ ಸರ್ಕಾರ ಉತ್ತಮ ರಸ್ತೆಯನ್ನು ಕಲ್ಪಿಸಲು ಮುಂದಾಗಿದ್ದರೂ, ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ನಿಗದಿತ ಸಮಯದಲ್ಲಿ ಜನರ ಸೇವೆಗೆ ಲಭ್ಯವಾಗುತ್ತಿಲ್ಲ. ಒಟ್ಟಿನಲ್ಲಿ ಜನರು ನೂತನ ರಸ್ತೆಗಿಂತ ಹಳೆಯ ರಸ್ತೆಯೇ ಸಾಕಿತ್ತೆಂದು ನಿತ್ಯ ಗೊಣಗಾಡುತ್ತಿರುವುದು ಸಾಮಾನ್ಯವಾಗಿದೆ.
ಕ್ಷೇತ್ರದ ಶಾಸಕರು, ನೂತನವಾಗಿ ಚುನಾಯಿತರಾಗಿರುವ ತಾಲೂಕು ಪಂಚಾಯಿತಿ , ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿ ಕುರಿತು ಚಿಂತನೆ ನಡೆಸಬೇಕಾಗಿದೆ.
ರಸ್ತೆ ಕಾಮಗಾರಿ ನಿಗದಿಪಡಿಸಿದ ಗುಣಮಟ್ಟದಲ್ಲಿ ಹಾಗೂ ವೇಗದಲ್ಲಿ ಸಾಗುತ್ತಿಲ್ಲ. ಮಳೆಗಾಲ ಆರಂಭ ವಾಗಿರುವ ಹಿನ್ನೆಲೆಯಲ್ಲಿ ಅಪೂರ್ಣ ರಸ್ತೆ ಕಾಮಗಾರಿ ಯಿಂದ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಕಾಮಗಾರಿಗೆ ಹಳೆಯ ರಸ್ತೆಯ ಕಲ್ಲನ್ನು ಕಿತ್ತು ಅದನ್ನು ಕ್ರಶಿಂಗ್ ಮಾಡಿಸಿ ಬಳಸಲು ಮುಂದಾಗಿರುವುದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ.
-ವಿ.ಎಂ.ವಿಜಯ, ಮಾಜಿ ಅಧ್ಯಕ್ಷರು, ಕೊಡಗು ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮಸ್ಥರು.
ಮಳೆಗಾಲ ಈಗಾಗಲೇ ಆರಂಭವಾಗಿದ್ದು, ರಸ್ತೆಗಳೆಲ್ಲಾ ಕೊಚ್ಚೆ ಗುಂಡಿಯಂತಾಗಿದೆ. ಹೀಗಿದ್ದರೂ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ರಸ್ತೆ ಕಾಮಗಾರಿ ಕುರಿತು ಕಿಂಚಿತ್ತೂ ಗಮನಹರಿಸಿಲ್ಲ. ರಾತ್ರಿ ವೇಳೆ ಕಾಡಾನೆ ಉಪಟಳ ಕೂಡ ಅಧಿಕವಾಗಿ ರುವುದರಿಂದ ವಾಹನ ಸವಾರರು ಹಾಗೂ ಗ್ರಾಮಸ್ಥರಿಗೆ ನರಕಯಾತನೆಯಾಗಿದೆ. -ಹರೀಶ್, ಗ್ರಾಮಸ್ಥರು.
ತೇಲಪಂಡ ಕವನ್ ಕಾರ್ಯಪ್ಪ ಸೋಮವಾರಪೇಟೆ: ಇಲ್ಲಿಗೆ ಸಮೀಪದ ಅಬ್ಬೂರುಕಟ್ಟೆಯಿಂದ ಯಲಕನೂರು ಹೊಸಳ್ಳಿ ಗ್ರಾಮದ ಮೂಲಕ ಕಣಿವೆಗೆ ಸಂಪರ್ಕಿಸುವ ರಸ್ತೆ ಕಾಮಗಾರಿ ವರ್ಷವಾದರೂ ಪೂರ್ಣಗೊಂಡಿಲ್ಲ. ಪರಿಣಾಮ ಗ್ರಾಮಸ್ಥರು ಹಾಗೂ ವಾಹನ ಸವಾರರು ನಿತ್ಯ ಪರದಾಡುವಂತಾಗಿದೆ !
ಕೋಟಿ 5 ರೂ.ವೆಚ್ಚದಲ್ಲಿ ಸುಮಾರು 5.29 ಕಿಲೋ ಮೀಟರ್ ಉದ್ದದ ಈ ರಸ್ತೆ ಕಳೆದ ಹಲವು ವರ್ಷ ಗಳಿಂದ ಸಂಪೂರ್ಣ ಹದಗೆಟ್ಟಿರುವುದರ ಬಗ್ಗೆ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಸ್ತೆಯನ್ನು ‘ನಮ್ಮ ಊರು ನಮ್ಮ ರಸ್ತೆ’ ಯೋಜನೆಯಡಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 5.23 ಕೋಟಿ ರೂ. ವೆಚ್ಚದ ಕಾಮಗಾರಿಗೆ ಯೋಜನೆ ರೂಪಿಸಲಾಗಿತ್ತು. ಅದರಂತೆ ಜೂನ್ 25, 2015ರಂದು ಮಡಿಕೇರಿ ವಿಧಾನಸಭೆ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದರು.
ಈ ಯೋಜನೆಯ ಒಪ್ಪಂದದ ಪ್ರಕಾರ 2016ರ ಮೇ 24ರಂದು ರಸ್ತೆ ಸಾರ್ವಜನಿಕ ಸೇವೆಗೆ ಲಭ್ಯವಾಗಬೇಕಿತ್ತು. ಆದರೆ ಗುತ್ತಿಗೆದಾರರು ಕಡಿಮೆ ಪ್ರಮಾಣದಲ್ಲಿ ನೌಕರರನ್ನು ನಿಯೋಜಿಸಿದ್ದರಿಂದ ಕಾಮಗಾರಿಯು ಮಂದಗತಿಯಲ್ಲಿ ಸಾಗಿದೆ. ಇನ್ನು ಈಗಾಗಲೇ ಮಳೆಗಾಲ ಆರಂಭವಾಗಿದ್ದು, ವಾಹನ ಸವಾರರ ಪರಿಸ್ಥಿತಿ ತೀರಾ ಶೋಚನೀಯವಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.
ಈಗಾಗಲೇ ರಸ್ತೆಯ ಎರಡೂ ಬದಿಗಳಲ್ಲಿ ಬೇಲಿ ತೆರವುಗೊಳಿಸಿ ವಿಸ್ತರಿಸಲಾಗಿದೆ. ಇದ್ದ ಹಳೆಯ ಡಾಂಬರು ರಸ್ತೆಯನ್ನು ಕಿತ್ತು ಹಾಕಿರುವುದರಿಂದ ಬಹುತೇಕ ಕಡೆಗಳಲ್ಲಿ ಕೆಸರಿನ ಗುಂಡಿಗಳಾಗಿವೆ. ಈ ಭಾಗದ ವಿದ್ಯಾರ್ಥಿಗಳು ಕುಶಾಲನಗರ, ಸೋಮವಾರಪೇಟೆ ಹಾಗೂ ಶನಿವಾರಸಂತೆ ಪ್ರದೇಶಗಳಲ್ಲಿನ ಶಾಲಾ ಕಾಲೇಜುಗಳಿಗೆ ಇದೇ ರಸ್ತೆಯನ್ನು ಅವಲಂಬಿಸಬೇಕಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ವಿ.ಎಂ.ವಿಜಯ್ರ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಗುತ್ತಿಗೆದಾರರು ರಸ್ತೆ ಕಾಮಗಾರಿಯನ್ನು ಒಂದು ವರ್ಷದಲ್ಲಿ ಮುಗಿಸಬೇಕಾಗಿತ್ತು. ಆದರೆ ಇನ್ನೂ ಕೇವಲ ಶೇ.20 ರಿಂದ 30ರಷ್ಟು ಕಾಮಗಾರಿ ಮಾತ್ರ ಮುಗಿದಿದೆ. ಸೂಕ್ತ ಸಮಯದಲ್ಲಿ ಕಾಮಗಾರಿ ಮುಗಿಯದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗು ಶಾಲಾ ವಿದ್ಯಾರ್ಥಿ ಗಳಿಗೆೆ ತೊಂದರೆಯಾಗಿದೆ. ಈಗಾಗಲೇ ಮಳೆ ಕೂಡ ಆರಂಭವಾ ಗಿದ್ದು, ಮುಂದಿನ ದಿನಗಳಲ್ಲಿ ರಸ್ತೆಯಲ್ಲಿ ಸಂಚರಿಸುವುದೇ ತ್ರಾಸದಾಯಕ ಎಂದು ಗ್ರಾಮಸ್ಥರಾದ ಮೋಹನ್ ಆರೋಪಿಸುತ್ತಾರೆ.
ಒಟ್ಟಾರೆ ಜನರ ಅನುಕೂಲಕ್ಕಾಗಿ ಸರ್ಕಾರ ಉತ್ತಮ ರಸ್ತೆಯನ್ನು ಕಲ್ಪಿಸಲು ಮುಂದಾಗಿದ್ದರೂ, ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ನಿಗದಿತ ಸಮಯದಲ್ಲಿ ಜನರ ಸೇವೆಗೆ ಲಭ್ಯವಾಗುತ್ತಿಲ್ಲ. ಒಟ್ಟಿನಲ್ಲಿ ಜನರು ನೂತನ ರಸ್ತೆಗಿಂತ ಹಳೆಯ ರಸ್ತೆಯೇ ಸಾಕಿತ್ತೆಂದು ನಿತ್ಯ ಗೊಣಗಾಡುತ್ತಿರುವುದು ಸಾಮಾನ್ಯವಾಗಿದೆ.
ಕ್ಷೇತ್ರದ ಶಾಸಕರು, ನೂತನವಾಗಿ ಚುನಾಯಿತರಾಗಿರುವ ತಾಲೂಕು ಪಂಚಾಯಿತಿ , ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿ ಕುರಿತು ಚಿಂತನೆ ನಡೆಸಬೇಕಾಗಿದೆ.
ರಸ್ತೆ ಕಾಮಗಾರಿ ನಿಗದಿಪಡಿಸಿದ ಗುಣಮಟ್ಟದಲ್ಲಿ ಹಾಗೂ ವೇಗದಲ್ಲಿ ಸಾಗುತ್ತಿಲ್ಲ. ಮಳೆಗಾಲ ಆರಂಭ ವಾಗಿರುವ ಹಿನ್ನೆಲೆಯಲ್ಲಿ ಅಪೂರ್ಣ ರಸ್ತೆ ಕಾಮಗಾರಿ ಯಿಂದ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಕಾಮಗಾರಿಗೆ ಹಳೆಯ ರಸ್ತೆಯ ಕಲ್ಲನ್ನು ಕಿತ್ತು ಅದನ್ನು ಕ್ರಶಿಂಗ್ ಮಾಡಿಸಿ ಬಳಸಲು ಮುಂದಾಗಿರುವುದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ.
-ವಿ.ಎಂ.ವಿಜಯ, ಮಾಜಿ ಅಧ್ಯಕ್ಷರು, ಕೊಡಗು ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮಸ್ಥರು.
ಮಳೆಗಾಲ ಈಗಾಗಲೇ ಆರಂಭವಾಗಿದ್ದು, ರಸ್ತೆಗಳೆಲ್ಲಾ ಕೊಚ್ಚೆ ಗುಂಡಿಯಂತಾಗಿದೆ. ಹೀಗಿದ್ದರೂ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ರಸ್ತೆ ಕಾಮಗಾರಿ ಕುರಿತು ಕಿಂಚಿತ್ತೂ ಗಮನಹರಿಸಿಲ್ಲ. ರಾತ್ರಿ ವೇಳೆ ಕಾಡಾನೆ ಉಪಟಳ ಕೂಡ ಅಧಿಕವಾಗಿ ರುವುದರಿಂದ ವಾಹನ ಸವಾರರು ಹಾಗೂ ಗ್ರಾಮಸ್ಥರಿಗೆ ನರಕಯಾತನೆಯಾಗಿದೆ. -ಹರೀಶ್, ಗ್ರಾಮಸ್ಥರು.