ಮಡಿಕೇರಿ: ಭಾರತದ ಸಂಸ್ಕೃತಿ ವಿಶ್ವದಲ್ಲೇ ಶ್ರೇಷ್ಠವಾಗಿದ್ದು, ಕ್ರೀಡೆ ಹಾಗೂ ಯೋಗ ಶಿಕ್ಷ ಣಕ್ಕೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ ಎಂದು ಬೆಂಗಳೂರಿನ ಶಿವಬಾಲಯೋಗಿ ಮಂದಿರದ ಶ್ರೀವಿಶ್ವಾಮಿತ್ರ ಸ್ವಾಮೀಜಿ ತಿಳಿಸಿದ್ದಾರೆ.
ವಾಂಡರರ್ಸ್ ಕ್ರೀಡಾ ಕ್ಲಬ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ 24 ನೇ ವರ್ಷದ ಉಚಿತ ಕ್ರೀಡಾ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹೆತ್ತ ತಾಯಿಯನ್ನು ಪೂಜಿಸುವ ಮತ್ತು ಗುರು ಹಿರಿಯರನ್ನು ಗೌರವಿಸುವ ಗುಣ ಹಾಗೂ ಸಂಸ್ಕೃತಿ ಭಾರತೀಯರಲ್ಲಿದ್ದು, ಇದು ಇತರ ದೇಶಗಳಿಗೆ ಮಾದರಿಯಾಗಿದೆ. ಕ್ರೀಡೆ ಮತ್ತು ಯೋಗಾಭ್ಯಾಸ ದೈಹಿಕ ಬೆಳವಣಿಗೆ ಹಾಗೂ ಮಾನಸಿಕ ಪ್ರಬುದ್ಧತೆಗೆ ಸಹಕಾರಿ ಎಂದರು.
ಸಮಾರಂಭದ ಅಧ್ಯಕ್ಷ ತೆ ವಹಿಸಿ ಮಾತನಾಡಿದ ಅಂತಾರರಾಷ್ಟ್ರೀಯ ಹಿರಿಯ ಹಾಕಿ ಆಟಗಾರ ಮೊಣ್ಣಪ್ಪ, ಕೊಡಗಿನ ಖ್ಯಾತ ಕ್ರೀಡಾ ತರಬೇತುದಾರ ದಿ.ಸಿ.ವಿ.ಶಂಕರ್ ಅವರನ್ನು ಸ್ಮರಿಸಿದರು. ನಾನು ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ಗುರುಗಳಾದ ಶಂಕರ್ ನೀಡಿದ ಸ್ಫೂರ್ತಿಯೇ ಕಾರಣವೆಂದು ತಿಳಿಸಿದರು.
ಮತ್ತೊಬ್ಬ ಕ್ರೀಡಾಪಟು ಎಂ.ಎಸ್.ಬೋಜಣ್ಣ ಮಾತನಾಡಿ, ಕ್ರೀಡೆ ನನಗೆ ಜೀವನದ ಅನುಭವ ಮತ್ತು ಪಾಠವನ್ನು ಕಲಿಸಿದೆ. ಈ ರೀತಿಯ ಶಿಬಿರಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಸತತ ಪರಿಶ್ರಮದಿಂದ ಕ್ರೀಡಾ ಪ್ರತಿಭೆಗಳು ಉತ್ತಮ ಸಾಧನೆ ಮಾಡಬೇಕೆಂದು ಕಿವಿಮಾತು ಹೇಳಿದರು.
ಇದುವರೆಗೆ ನಡೆದ ಶಿಬಿರದಲ್ಲಿ 6 ರಿಂದ 10ವರ್ಷದ ಬಾಲಕ, ಬಾಲಕಿಯರಿಗೆ ಪ್ರತಿದಿನ ಬೆಳಗ್ಗೆ 6.30 ರಿಂದ 9 ಗಂಟೆಯವರೆಗೆ ತರಬೇತಿ ನೀಡಲಾಯಿತು. ಯೋಗ, ಪ್ರಾಣಾಯಾಮ, ಹಾಕಿ, ಅಥ್ಲೆಟಿಕ್ಸ್ ಇನ್ನಿತರ ಕ್ರೀಡಾ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಲಾಯಿತು.
ಯೋಗ, ಪ್ರಾಣಾಯಾಮವನ್ನು ಎಸ್.ಟಿ.ವೆಂಕಟೇಶ್ ಹಾಗೂ ಹಾಕಿ ಆಟದ ಕೌಶಲ್ಯಗಳನ್ನು ಶ್ಯಾಂಪೂಣಚ್ಚ, ಲಕ್ಷ ್ಮಣ್ಸಿಂಗ್, ಅಶೋಕ್ ಅಯ್ಯಪ್ಪ, ಗಣೇಶ್ ಮತ್ತು ಕೋಟೆರ ಮುದ್ದಯ್ಯ ಶಿಬಿರಾರ್ಥಿಗಳಿಗೆ ಉಚಿತವಾಗಿ ಹೇಳಿಕೊಟ್ಟಿದ್ದಾರೆ.
ಕೊಡಗಿನ ಕ್ರೀ್ರಡಾ ಭೀಷ್ಮ ಎಂದು ಖ್ಯಾತಿ ಗಳಿಸಿರುವ ಹಿರಿಯ ತರಬೇತುದಾರ ದಿ.ಸಿ.ವಿ.ಶಂಕರ್ ಅವರ ಜನ್ಮದಿನವಾದ ಏ.1 ರಂದು ಆರಂಭಗೊಂಡ ಶಿಬಿರ ಮೇ 1 ರಂದು ಸಮಾರೋಪಗೊಂಡಿತು. ಸುಮಾರು 86 ಶಿಬಿರಾರ್ಥಿಗಳಿಗೆ ಕೋಟೆಬೆಟ್ಟಕ್ಕೆ ಚಾರಣವನ್ನು ಕೂಡ ಹಮ್ಮ್ಮಿಕೊಳ್ಳಲಾಗಿತ್ತು.
ಈ ಬಾರಿ ಸಿ.ವಿ.ಶಂಕರ್ ಟ್ರೋಫಿಯನ್ನು ವಾಂಡರರ್ಸ್ ಬಾಲಕಿಯರು ಹಾಗೂ ಬಿ.ಕೆ.ಸುಬ್ಬಯ್ಯ ಟ್ರೋಫಿಯನ್ನು ಕುಶಾಲನಗರ ಕ್ಲಬ್ನ ಬಾಲಕರು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಯೋಗ ಶಿಕ್ಷ ಕ ಎಸ್.ಟಿ.ವೆಂಕಟೇಶ್, ಶ್ಯಾಂ ಪೂಣಚ್ಚ, ಅಶೋಕ್ ಅಯ್ಯಪ್ಪ, ಗಣೆæೕಶ್, ಲಕ್ಷ ್ಮಣ್ಸಿಂಗ್, ಆಸಿಫ್, ಪಿ.ಇ.ಕಾಳಯ್ಯ ಪಾರ್ಥಚಂಗಪ್ಪ ಹಾಗೂ ಮುದ್ದಯ್ಯ ಉಪಸ್ಥಿತರಿದ್ದರು. ವೆಂಕಟೇಶ್ ನಿರೂಪಿಸಿ, ಶೇಖರ್ ಸೋಮಣ್ಣ ಸ್ವಾಗತಿಸಿದರು, ತುಷಾರ್ ವಂದಿಸಿದರು.