ಸೋಮವಾರಪೇಟೆ: ಶಾಂತಳ್ಳಿ ಶ್ರೀಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರೆ ಮತ್ತು 59ನೇ ಮಹಾರಥೋತ್ಸವ ಅಂಗವಾಗಿ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದಿಂದ ಜಿಲ್ಲಾ ಮಟ್ಟದ ಮಹಿಳೆಯರ ಥ್ರೋಬಾಲ್, ಅಂತರ್ಜಿಲ್ಲಾ ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿ ನಡೆಯಿತು.
ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಜಿಲ್ಲೆಯ ಹೊರಭಾಗಗಳಿಂದಲೂ ತಂಡಗಳು ಭಾಗವಹಿಸಿದ್ದವು. ಮಹಿಳೆಯರ ಥ್ರೋಬಾಲ್ ಪಂದ್ಯಾಟದಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ ತಂಡಗಳು ಆಗಮಿಸಿದ್ದವು.
ಅಂತರ್ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಸಬ್ ಜೂನಿಯರ್ ಕಬಡ್ಡಿ ತಂಡದ ಆಟಗಾರ್ತಿ ರಂಜಿತಾ ಚಾಲನೆ ನೀಡಿದರು. ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಉಪಾಧ್ಯಕ್ಷ ಮಂಜೂರು ತಮ್ಮಣ್ಣಿ, ಪ್ರಮುಖರಾದ ಕೆ.ಕೆ.ಮುತ್ತಣ್ಣ, ಹಿರಿಯ ಕಬಡ್ಡಿ ಆಟಗಾರ ಎಸ್.ಆರ್.ಉತ್ತಯ್ಯ, ಪ್ರಕಾಶ್, ಸಂಘದ ಅಧ್ಯಕ್ಷ ಬಿ.ಡಿ. ನಿರಂಜನ್, ಖಜಾಂಚಿ ಲಿಖಿತ್ ಇತರರಿದ್ದರು.