ಆ್ಯಪ್ನಗರ

ದೇವಿಯ ಮುಖವಾಡ, ಚಿನ್ನಾಭರಣ ಕಳವು

ಮಡಿಕೇರಿಯ ಭಗವತಿ ನಗರದಲ್ಲಿರುವ ಕರವಲೆ ಶ್ರೀ ಮಹಿಷ ಮರ್ಧಿನಿ ಭಗವತಿ ದೇವಾಲಯದಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ.

Vijaya Karnataka 10 Dec 2019, 5:00 am
ಮಡಿಕೇರಿ: ಮಡಿಕೇರಿಯ ಭಗವತಿ ನಗರದಲ್ಲಿರುವ ಕರವಲೆ ಶ್ರೀ ಮಹಿಷ ಮರ್ಧಿನಿ ಭಗವತಿ ದೇವಾಲಯದಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ.
Vijaya Karnataka Web jewelry stolen
ದೇವಿಯ ಮುಖವಾಡ, ಚಿನ್ನಾಭರಣ ಕಳವು


ಭಾನುವಾರ ರಾತ್ರಿ ಕಳ್ಳರು ದೇವಾಲಯದ ಮುಖ್ಯದ್ವಾರದ ಬೀಗವನ್ನು ಮುರಿದು ಒಳನುಗ್ಗಿ ಗರ್ಭಗುಡಿಯಲ್ಲಿದ್ದ ಬಾಗಿಲನ್ನೂ ಒಡೆದು 7 ಲಕ್ಷ ರೂ. ಮೌಲ್ಯದ ದೇವರ ಚಿನ್ನದ ಆಭರಣ, ತಾಳಿ, ಮುಖವಾಡ, ಗಣಪತಿಯ ಬೆಳ್ಳಿ ಕವಚ, ಹುಂಡಿಯನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.

ಅರ್ಚಕರು ಸೇರಿದಂತೆ ಯಾವುದೇ ವ್ಯಕ್ತಿಗಳು ದೇವಾಲಯದ ಸಮೀಪ ಇರುವುದಿಲ್ಲ ಎಂಬುದನ್ನು ಅರಿತ ಕಳ್ಳರು ಸಮಯ ಸಾಧಿಸಿ ಕಳ್ಳತನ ಮಾಡಿದ್ದಾರೆ. ಭಾನುವಾರ ರಾತ್ರಿ ಘಟನೆ ನಡೆದಿದೆಯಾದರೂ ಬೆಳಗಿನ ಜಾವ ಅರ್ಚಕರು ಬಂದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಮುಂಜಾನೆ ದೇವಾಲಯಕ್ಕೆ ಎಂದಿನಂತೆ ಪೂಜೆ ಸಲ್ಲಿಸಲು ಬಂದ ಅರ್ಚಕ ಸುಭಾಶ್‌ರಿಗೆ ಮುಖ್ಯ ದ್ವಾರದ ಬೀಗದ ಕೀಲಿಕೈಯನ್ನು ಮುರಿದಿರುವುದು ಕಂಡುಬಂದಿದೆ. ಒಳನೋಡಿದಾಗ ಗರ್ಭಗುಡಿಯಲ್ಲಿ ದೇವಿಯ ಮೈಮೇಲಿದ್ದ ಚಿನ್ನದ ಆಭರಣ ಕಾಣೆಯಾಗಿತ್ತು. ಅರ್ಚಕರು ಕೂಡಲೇ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂತೋಷ್‌ ಕಾರ್ಯಪ್ಪ ಹಾಗೂ ಸುತ್ತಮುತ್ತಲಿನವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ದೇವಾಲಯ ಸಮಿತಿಯವರು ಹಾಗೂ ಭಗವತಿ ನಗರ ನಿವಾಸಿಗಳು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು, ಶ್ವಾನ ದಳ, ಬೆರಳಚ್ಚು ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಮಡಿಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ