ಆ್ಯಪ್ನಗರ

ಬೆಳ್ಳಿಬಟ್ಟಲಿನ ಕಬಡ್ಡಿ ಪಂದ್ಯಾವಳಿಗೆ ಚಾಲನೆ

ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅಭಿಮಾನಿಗಳ ಸಂಘದಿಂದ ಪಟ್ಟಣದ ಸಾಕಮ್ಮ ಬಂಗಲೆಯ ಸಮೀಪದ ಮೈದಾನದಲ್ಲಿ ಆಯೋಜಿಸಿರುವ 32ನೇ ವರ್ಷದ ರಾಜ್ಯಮಟ್ಟದ ಬೆಳ್ಳಿಬಟ್ಟಲಿನ ಕಬಡ್ಡಿ ಪಂದ್ಯಾವಳಿಗೆ ಕುಸುಬೂರು ಎಸ್ಟೇಟ್‌ ವ್ಯವಸ್ಥಾಪಕರಾದ ಶುಕ್ರವಾರ ಕುಶಾಲಪ್ಪ ಚಾಲನೆ ನೀಡಿದರು.

Vijaya Karnataka 22 Dec 2018, 5:00 am
ಸೋಮವಾರಪೇಟೆ: ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅಭಿಮಾನಿಗಳ ಸಂಘದಿಂದ ಪಟ್ಟಣದ ಸಾಕಮ್ಮ ಬಂಗಲೆಯ ಸಮೀಪದ ಮೈದಾನದಲ್ಲಿ ಆಯೋಜಿಸಿರುವ 32ನೇ ವರ್ಷದ ರಾಜ್ಯಮಟ್ಟದ ಬೆಳ್ಳಿಬಟ್ಟಲಿನ ಕಬಡ್ಡಿ ಪಂದ್ಯಾವಳಿಗೆ ಕುಸುಬೂರು ಎಸ್ಟೇಟ್‌ ವ್ಯವಸ್ಥಾಪಕರಾದ ಶುಕ್ರವಾರ ಕುಶಾಲಪ್ಪ ಚಾಲನೆ ನೀಡಿದರು.
Vijaya Karnataka Web MDK-MDK21SPT1 -


ನಂತರ ಅವರು ಮಾತನಾಡಿ, ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಇಂದು ಜನಪ್ರಿಯ ಕ್ರೀಡೆಯಾಗಿದೆ. ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಲು ಇಂತಹ ಕ್ರೀಡಾಕೂಟಗಳ ಅವಶ್ಯಕತೆಯಿದೆ. ಕಳೆದ 32 ವರ್ಷಗಳಿಂದ ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಸದಸ್ಯರು ಪಂದ್ಯಾವಳಿ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

ನಂತರ ನಡೆದ ಪ್ರೌಢಶಾಲೆ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಬೇಳೂರು ವೀರರಾಜೇಂದ್ರ ಪ್ರೌಢಶಾಲೆಯ ತಂಡ, ಭಗತ್‌ಸಿಂಗ್‌ ತಣ್ಣೀರುಹಳ್ಳ ತಂಡವನ್ನು ಸೋಲಿಸಿ, ಪ್ರಶಸ್ತಿ ಮುಡಿಗೇರಿಸಿಕೊಂಡಿತು. ವಿಜೇತ ತಂಡ 26 ಅಂಕಗಳನ್ನು ಗಳಿಸಿದರೆ, ದ್ವಿತೀಯ ಸ್ಥಾನ ಪಡೆದ ತಂಡ 9 ಅಂಕಗಳನ್ನು ಪಡೆಯಿತು.

ಪ್ರಾಥಮಿಕ ಶಾಲೆಯ ಬಾಲಕರ ವಿಭಾಗದಲ್ಲಿ ಸಿದ್ದಾಪುರ ತಂಡ, ರಾಕ್‌ಸ್ಟಾರ್‌ ಸೋಮವಾರಪೇಟೆ ತಂಡವನ್ನು 18-06 ಅಂಕಗಳ ಅಂತರದಲ್ಲಿ ಸೋಲಿಸಿ, ಪ್ರಶಸ್ತಿ ಪಡೆಯಿತು. ಫೈನಲ್‌ ಪಂದ್ಯಾಟವನ್ನು ಕಸಾಪ ತಾಲೂಕು ಅಧ್ಯಕ್ಷ ಎಸ್‌.ಡಿ.ವಿಜೇತ್‌ ಕಾಫಿ ಬೆಳೆಗಾರ ಡಿ.ಪಿ.ಲೋಕೇಶ್‌ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ವಕೀಲರಾದ ಎಚ್‌.ಸಿ.ನಾಗೇಶ್‌, ಬೇಳೂರು ಗ್ರಾಪಂ ಸದಸ್ಯರಾದ ಯೋಗೇಂದ್ರ, ಬಸವರಾಜು, ತೀರ್ಪುಗಾರರಾದ ಸತೀಶ್‌, ಭದ್ರು, ಇಸಾಕ್‌ ಕರ್ಕಳ್ಳಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ