ಆ್ಯಪ್ನಗರ

Kodagu Flood Relief Fund: ಕೊಡಗು ಪ್ರವಾಹ ಸಂತ್ರಸ್ಥರಿಗೆ ಸರಕಾರದಿಂದ ಆರ್ಥಿಕ ನೆರವು ಬಿಡುಗಡೆ - ಸಿಎಂ

ಕೊಡಗು ​ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ಸರಕಾರ ಹಲವು ಕ್ರಮ ತೆಗೆದುಕೊಂಡಿದೆ ಎಂದು ಗರಗಂದೂರಿನಲ್ಲಿ ಸಿಎಂ ಕುಮಾರಸ್ವಾಮಿ ತಿಳಿಸಿದರು. ನಂತರ ಮಾತನಾಡಿದ ಸಿಎಂ , ಸಂತ್ರಸ್ತರಿಗೆ ಸರಕಾರ ಹಲವು ಕ್ರಮ ತೆಗೆದುಕೊಂಡಿದೆ. ಸರಕಾರದ ಆರ್ಥಿಕ ನೆರವು ಬಿಡುಗಡೆ ಆಗಿದೆ. 50 ಸಾವಿರ ರೂ. ಪರಿಹಾರ ನೇರವಾಗಿ ಸಂತ್ರಸ್ತರ ಖಾತೆಗೆ ಹಾಕಲಾಗುವುದು ಎಂದು ತಿಳಿಸಿದರು.

Vijaya Karnataka Web 7 Dec 2018, 4:04 pm
ಕೊಡಗು: ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ಸರಕಾರ ಹಲವು ಕ್ರಮ ತೆಗೆದುಕೊಂಡಿದೆ ಎಂದು ಗರಗಂದೂರಿನಲ್ಲಿ ಸಿಎಂ ಕುಮಾರಸ್ವಾಮಿ ತಿಳಿಸಿದರು. ಸರಕಾರದ ಆರ್ಥಿಕ ನೆರವು ಬಿಡುಗಡೆ ಆಗಿದೆ. ತಿಂಗಳಿಗೆ 10 ಸಾವಿರದಂತೆ 1 ಲಕ್ಷ ರೂ. ಬಾಡಿಗೆ ಹಣ ಕೊಡಲಾಗುವುದು. ಅಲ್ಲದೆ, 2 ಬೆಡ್ರೂಮ್‌ ಮನೆ ಕೊಡಲಾಗುವುದು ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
Vijaya Karnataka Web kumaraswamy...


ಕೊಡಗಿನ ಗರಗಂದೂರಿಗೆ ಆಗಮಿಸಿದ ಬಳಿಕ
ಪೊಲೀಸರಿಂದ ಸಿಎಂ ಕುಮಾರಸ್ವಾಮಿ ಗೌರವ ವಂದನೆ ಸ್ವೀಕರಿಸಿದರು. ನಂತರ ಮಾತನಾಡಿದ ಸಿಎಂ , ಸಂತ್ರಸ್ತರಿಗೆ ಸರಕಾರ ಹಲವು ಕ್ರಮ ತೆಗೆದುಕೊಂಡಿದೆ. ಸರಕಾರದ ಆರ್ಥಿಕ ನೆರವು ಬಿಡುಗಡೆ ಆಗಿದೆ. 50 ಸಾವಿರ ರೂ. ಪರಿಹಾರ ನೇರವಾಗಿ ಸಂತ್ರಸ್ತರ ಖಾತೆಗೆ ಹಾಕಲಾಗುವುದು ಎಂದು ತಿಳಿಸಿದರು.

ಪೊಲೀಸರಿಂದ ಧ್ವಜ ವಂದನೆ ಸ್ವೀಕರಿಸಿದ ಸಿಎಂ


ಇನ್ನು, ಪರಿಹಾರ ಕಾರ್ಯದಲ್ಲಿ ಗೊಂದಲ ಸೃಷ್ಟಿ ಆಗುತ್ತಿದೆ. ಉಸ್ತುವಾರಿ ಸಚಿವ, ಡಿಸಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೊಡಗು ಘಟನೆಯನ್ನು ಸರಕಾರ ವಿಶೇಷ ಪ್ರಕರಣ ಎಂದು ಪರಿಗಣಿಸಿದೆ. ಬೆಳೆ ಪರಿಹಾರಕ್ಕೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಎಲ್ಲರಿಗೂ ಪರಿಹಾರ ನೀಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.

ಅಲ್ಲದೆ, ಕೇಂದ್ರ ಕೊಟ್ಟ 546 ಕೋಟಿ ರೂ. ಕೊಡಗಿಗೆ ಮಾತ್ರವಲ್ಲ, 8 ಜಿಲ್ಲೆಗೆ ಹಂಚುವಂತೆ ಕೇಂದ್ರದ ಮಾರ್ಗಸೂಚಿ ಇದೆ. ಕೇಂದ್ರ ಸರಕಾರ ಕೊಟ್ಟ ಹಣದಲ್ಲಿ ರಾಜಕೀಯ ಬೇಡ. ಕೊಡಗಿಗೆ ಅಂತ ಸಂಗ್ರಹ ಆದ ಸಂಪೂರ್ಣ ಹಣ ಕೊಡಗಿಗೇ ವಿನಿಯೋಗ ಮಾಡಲಾಗುವುದು. ಸರ್ಕಾರಿ ನೌಕರರ 103 ಕೋಟಿ ಸೇರಿ 180 ಕೋಟಿ ಸಂಗ್ರಹ ಆಗಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ