ಆ್ಯಪ್ನಗರ

ಮುಳ್ಳುಸೋಗೆಯಲ್ಲಿ ಬೈಕ್‌ಗೆ ಟಿಪ್ಪರ್ ಡಿಕ್ಕಿಯಾಗಿ ಕೇರಳ ಯುವಕ ಸಾವು

ಸಮೀಪದ ಮುಳ್ಳುಸೋಗೆಯಲ್ಲಿ ಬೈಕ್‌ಗೆ ಟಿಪ್ಪರ್ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಮೃತಪಟ್ಟರು. ಕುಶಾಲನಗರ ಕೂಡಿಗೆ ರಾಜ್ಯ ಹೆದ್ದಾರಿಯ ಮುಳ್ಳುಸೋಗೆ ಗ್ರಾಮದ ತಿರುವಿನಲ್ಲಿ ಲಾರಿ ಯನ್ನು ಹಿಂದಿಕ್ಕುವ ಭರದಲ್ಲಿ ಬೈಕ್ ಲಾರಿಯ ಚಕ್ರಕ್ಕೆ ಸಿಲುಕಿದೆ. ಪರಿಣಾಮ ಬೈಕ್ ಸವಾರ, ಕೇರಳದ ಕಣ್ಣನೂರಿನ ಪ್ರಭಾಕರ್ ಎಂಬುವವರ ಪುತ್ರ ಜಿಜಿನ್ (20) ಕೊನೆಯುಸಿರೆಳೆದರು.

Vijaya Karnataka 11 Mar 2020, 12:18 am
ಕುಶಾಲನಗರ: ಸಮೀಪದ ಮುಳ್ಳುಸೋಗೆಯಲ್ಲಿ ಬೈಕ್‌ಗೆ ಟಿಪ್ಪರ್ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಮೃತಪಟ್ಟರು.
Vijaya Karnataka Web kerala youth dies as tipper collides with bike
ಮುಳ್ಳುಸೋಗೆಯಲ್ಲಿ ಬೈಕ್‌ಗೆ ಟಿಪ್ಪರ್ ಡಿಕ್ಕಿಯಾಗಿ ಕೇರಳ ಯುವಕ ಸಾವು

ಕುಶಾಲನಗರ ಕೂಡಿಗೆ ರಾಜ್ಯ ಹೆದ್ದಾರಿಯ ಮುಳ್ಳುಸೋಗೆ ಗ್ರಾಮದ ತಿರುವಿನಲ್ಲಿ ಲಾರಿ ಯನ್ನು ಹಿಂದಿಕ್ಕುವ ಭರದಲ್ಲಿ ಬೈಕ್ ಲಾರಿಯ ಚಕ್ರಕ್ಕೆ ಸಿಲುಕಿದೆ. ಪರಿಣಾಮ ಬೈಕ್ ಸವಾರ, ಕೇರಳದ ಕಣ್ಣನೂರಿನ ಪ್ರಭಾಕರ್ ಎಂಬುವವರ ಪುತ್ರ ಜಿಜಿನ್ (20) ಕೊನೆಯುಸಿರೆಳೆದರು.

ಮೃತ ಯುವಕ ಬೆಂಗಳೂರಿನ ಹೆಬ್ಬಾಳಿನ ಕಾಲೇಜೊಂದರ ಬಿಬಿಎ ವಿದ್ಯಾರ್ಥಿಯಾಗಿದ್ದುಘಿ, 6 ಮಂದಿಯ ತಂಡ ಕೊಡಗು ಜಿಲ್ಲೆಗೆ ದ್ವಿಚಕ್ರ ವಾಹನಗಳಲ್ಲಿ ಪ್ರವಾಸಕ್ಕೆ ಬಂದಿದ್ದರು.

ಸ್ಧಳಕ್ಕೆ ಕುಶಾಲನಗರ ವೃತ ನಿರೀಕ್ಷಕ ಮಹೇಶ್ ಮತ್ತು ಸಂಚಾರಿ ಪೊಲೀಸ್ ಠಾಣಾಧಿಕಾರಿ ಅಚ್ಚಮ್ಮ ಭೇಟಿ ನೀಡಿ ಪರಿಶೀಲಿಸಿದರು. ಲಾರಿ ಚಾಲಕನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ