ಆ್ಯಪ್ನಗರ

ಕೊಡಗು ಜಿಲ್ಲೆಗೆ ಆಗಮನಕ್ಕೆ ಜಿಲ್ಲಾಡಳಿತ ಅನುಮತಿ: ಸ್ಥಳೀಯರಿಗೆ ಕೊರೊನಾ ತಗುಲುವ ಆತಂಕ!

ಜಿಲ್ಲಾಡಳಿತ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಕೊಡಗು ಜಿಲ್ಲೆಗೆ ಬರುವ ಜನರಿಗೆ ಪಾಸ್‌ ನೀಡಿರುವುದರಿಂದ ಸ್ಥಳೀಯ ಜನರು ಕೊರೊನಾ ತಗುಲುವ ಆತಂಕದಲ್ಲಿದ್ದಾರೆ.

Vijaya Karnataka Web 6 May 2020, 1:50 pm
ಕೊಡಗು: ಲಾಕ್‌ಡೌನ್‌ ಮುಂದುವರಿಕೆ ಮಧ್ಯೆ ಕೊಡಗು ಜಿಲ್ಲಾಡಳಿತ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಕೊಡಗು ಜಿಲ್ಲೆಗೆ ಬರುವವರಿಗೆ ಮತ್ತು ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಹೋಗುವವರಿಗೆ ಅನುಮತಿ ಪಾಸ್‌ ನೀಡಿದೆ.
Vijaya Karnataka Web corona


ಜಿಲ್ಲೆಯ ಕೊಪ್ಪ, ಸಂಪಾಜೆ ಮತ್ತು ಶಿರಂಗಾಲ ಪೊಲೀಸ್‌ ಮತ್ತು ಆರೋಗ್ಯ ಇಲಾಖೆಯ ತಪಾಸಣೆ ಗೇಟ್‌ ಮೂಲಕ ಬರುವವರಿಗೆ ಮತ್ತು ಹೋಗುವವರಿಗೆ ಅವಕಾಶ ಕಲ್ಪಿಸಿದೆ. ಕೊಡಗು ಜಿಲ್ಲೆ ಗ್ರೀನ್‌ ಜೋನ್‌ ಆಗಿದ್ದರೂ ಇದೀಗ ಜಿಲ್ಲಾಡಳಿತ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಕೊಡಗು ಜಿಲ್ಲೆಗೆ ಬರುವ ಜನರಿಗೆ ಪಾಸ್‌ ನೀಡಿರುವುದರಿಂದ ಸ್ಥಳೀಯ ಜನ ಕೊರೊನಾ ತಗುಲುವ ಆತಂಕದಲ್ಲಿದ್ದಾರೆ.

ಜಿಲ್ಲೆಯ ನಿವಾಸಿಗಳು ಹೊರ ಜಿಲ್ಲೆಗಳಲ್ಲಿ ನೆಲಸಿದ್ದು, ಈಗ ತವರು ಜಿಲ್ಲೆಗೆ ಬರುವವರಿಗೆ 14 ದಿನ ಕ್ವಾರಂಟೈನ್‌ನಲ್ಲಿಟ್ಟು ಕೈಗೆ ಸೀಲ್‌ ಹಾಕಿದ್ದರೂ ಕ್ವಾರಂಟೈನ್‌ ಅವಧಿ ಪೂರೈಸಿದವರಿಗೆ ಕೊರೊನಾ ವೈರಸ್‌ ಏನಾದರೂ ಕಾಣಿಸಿಕೊಂಡರೆ ಅಕ್ಕಪಕ್ಕದವರು ಆತಂಕ ಪಡಬೇಕಾಗುತ್ತದೆ. ಜಿಲ್ಲಾಡಳಿತ ಲಾಕ್‌ಡೌನ್‌ ಮುಗಿಯುವವರೆಗೂ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುವವರಿಗೆ ಅನುಮತಿ ನೀಡಬಾರದಿತ್ತು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಕೊಡಗು-ಹಾಸನ ಜಿಲ್ಲೆ ಗಡಿಭಾಗದಲ್ಲಿರುವ ಹಿಪ್ಪಲಿ ಪೊಲೀಸ್‌ ಮತ್ತು ಆರೋಗ್ಯ ಇಲಾಖೆ ತಪಾಸಣೆ ಗೇಟ್‌ ಮೂಲಕ ಮಂಗಳವಾರ ಮಧ್ಯಾಹ್ನದ ವೇಳೆಗೆ ಬೆಂಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಿಂದ ಒಟ್ಟು 28 ಮಂದಿ ಕೊಡಗು ಜಿಲ್ಲೆಯ ಶನಿವಾರಸಂತೆ ವ್ಯಾಪ್ತಿಯ ಊರುಗಳಿಗೆ ಅನುಮತಿ ಪತ್ರ ಪಡೆದು ಬಂದಿದ್ದಾರೆ.

ಒಟ್ಟಿನಲ್ಲಿ ಜಿಲ್ಲಾಡಳಿತ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುವವರಿಗೆ ಅನುಮತಿ ಕೊಟ್ಟಿರುವುದು ಸ್ಥಳೀಯರಲ್ಲಿಆತಂಕ ಮನೆ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ