ಆ್ಯಪ್ನಗರ

ಕೊಡಗು: ಬೀಗ ಹಾಕಿ ಮನೆಗೆ ಬೆಂಕಿ ಇಟ್ಟ ಪಾನಮತ್ತ ವ್ಯಕ್ತಿ, 6 ವರ್ಷದ ಬಾಲಕಿ ಸೇರಿ ಆರು ಮಂದಿ ಸಜೀವ ದಹನ

ಪಾನಮತ್ತ ವ್ಯಕ್ತಿಯ ದುಷ್ಕೃತ್ಯಕ್ಕೆ 6 ಮಂದಿ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕಾನೂರು ಗ್ರಾಮದಲ್ಲಿ ನಡೆದಿದೆ. ಮನೆಯ ಹೊರಗಿನಿಂದ ಬೀಗ ಹಾಕಿ ಬೆಂಕಿ ಕೊಟ್ಟಿದ್ದಾನೆ. ಘಟನೆಯಲ್ಲಿ ಆರು ವರ್ಷದ ಮಗು ಸೇರಿ ಆರು ಮಂದಿ ಸಾವನಪ್ಪಿದ್ದಾರೆ.

Vijaya Karnataka Web 3 Apr 2021, 11:52 am
ಕೊಡಗು: ಪಾನಮತ್ತ ವ್ಯಕ್ತಿಯ ದುಷ್ಕೃತ್ಯಕ್ಕೆ 6 ಮಂದಿ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕಾನೂರು ಗ್ರಾಮದಲ್ಲಿ ನಡೆದಿದೆ. ಬೋಜ ಎಂಬಾತ ಕಿಡಿಗೇಡಿ ಮದ್ಯ ಸೇವಿಸಿ ಬಂದು ಎರವರ ಮಂಜು ಎನ್ನುವವರ ಮನೆ ಬಾಗಿಲಿಗೆ ಹಾಕಿ ಬೆಂಕಿ ಹಚ್ಚಿದ್ದಾನೆ. ಇದರಿಂದಾಗಿ ಮನೆಯೊಳಗೆ ನಿದ್ರಿಸುತ್ತಿದ್ದವರು ಬೆಂಕಿಗೆ ಸಜೀವ ದಹನವಾಗಿ ಹೋಗಿದ್ದಾರೆ.
Vijaya Karnataka Web fire 1
Representative image


ಒಟ್ಟು ಎಂಟು ಜನರ ಪೈಕಿ ಮೂವರು ಸಜೀವ ದಹನವಾಗಿದ್ದು, ಮೂವರು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಇನ್ನುಳಿದ ಇಬ್ಬರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಂಠಪೂರ್ತಿ ಕುಡಿದುಬಂದ ಬೋಜ ಮನೆಯ ಹೊರಗಿನಿಂದ ಬೆಂಕಿ ಹಚ್ಚಿದ ವೇಳೆ ಮನೆಯೊಳಗಿದ್ದವರು ನಿದ್ರಿಸುತ್ತಿದ್ದರು.

ಆತ ಹೊರಗಿನಿಂದ ಬಾಗಿಲು ಹಾಕಿ ಬೆಂಕಿ ಹಚ್ಚಿದ ಪರಿಣಾಮ ಬೇಬಿ(45), ಸೀತಾ(40), ಪ್ರಾರ್ಥನಾ(6) ಸಜೀವ ದಹನವಾಗಿದ್ದು, ವಿಶ್ವಾಸ್(3), ವಿಶ್ವಾಸ್(6), ಪ್ರಕಾಶ್(7) ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಭಾಗ್ಯ (40) ಪಾಚೆ (60) ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಡಗಿಗೆ ಅಂತರ್ಜಲ ಅಲರ್ಟ್; 10 ವರ್ಷಗಳಲ್ಲಿ ಗ್ರೌಂಡ್ ವಾಟರ್ ಸರಾಸರಿ 2.99 ಮೀಟರ್ ಕುಸಿತ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ