ಆ್ಯಪ್ನಗರ

ಕೊಡಗು: ಅಧಿಕ ಭಾರದ ವಾಹನ ನಿರ್ಬಂಧ

ಜಿಲ್ಲೆಯಲ್ಲಿ ಮಳೆಗಾಲ ಮುಗಿಯುವ ತನಕ ವಾಹನದ ನೋಂದಣಿ ತೂಕ 16,200 ಕೆಜಿಗಿಂತಲೂ ಅಧಿಕ ಭಾರದ ಸರಕು ಸಾಗಣೆ ವಾಹನ, ಮಲ್ಟಿ ಆ್ಯಕ್ಸಲ್‌ ಟ್ರಕ್‌ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Vijaya Karnataka 12 Jun 2019, 5:00 am
ಮಳೆ ಹಿನ್ನೆಲೆ: ಇಂದಿನಿಂದ ಆ.8ರವರೆಗೆ ನಿರ್ಬಂಧ ಜಾರಿ: ಡಿಸಿ
Vijaya Karnataka Web kodagu high weight vehicle restriction
ಕೊಡಗು: ಅಧಿಕ ಭಾರದ ವಾಹನ ನಿರ್ಬಂಧ


ಮಡಿಕೇರಿ:
ಜಿಲ್ಲೆಯಲ್ಲಿ ಮಳೆಗಾಲ ಮುಗಿಯುವ ತನಕ ವಾಹನದ ನೋಂದಣಿ ತೂಕ 16,200 ಕೆಜಿಗಿಂತಲೂ ಅಧಿಕ ಭಾರದ ಸರಕು ಸಾಗಣೆ ವಾಹನ, ಮಲ್ಟಿ ಆ್ಯಕ್ಸಲ್‌ ಟ್ರಕ್‌ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದಲ್ಲಿ ರಸ್ತೆಯ ಸ್ಥಿತಿ ಹದಗೆಡುತ್ತದೆ. ಅಧಿಕ ಭಾರ ತುಂಬಿದ ವಾಹನಗಳು ನಿತ್ಯ ಸಂಚರಿಸುವುದರಿಂದ ರಸ್ತೆಯ ಬದಿಗಳ ಮಣ್ಣು ಕುಸಿದು ವಾಹನ ಸಂಚಾರಕ್ಕೆ ತೊಂದರೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಜೀವ ಮತ್ತು ಆಸ್ತಿ ರಕ್ಷ ಣೆಯ ಉದ್ದೇಶದಿಂದ ಬುಧವಾರ (ಜೂ.12) ರಿಂದ ಆಗಸ್ಟ್‌ 8ರ ತನಕ ಈ ನಿರ್ಬಂಧ ಜಾರಿಯಲ್ಲಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಿರ್ಬಂಧಿತ ವಾಹನಗಳು

- ಎಲ್ಲ ರೀತಿಯ ಮರದ ದಿಮ್ಮಿ ಮತ್ತು ಮರಳು ಸಾಗಣೆ ವಾಹನಗಳು

- ವಾಹನದ ನೋಂದಣಿ ತೂಕ 16,200 ಕೆಜಿಗಿಂತ ಅಧಿಕ ಭಾರದ ಸರಕು ಸಾಗಣೆ ವಾಹನಗಳು

- ಭಾರಿ ವಾಹನಗಳಾದ ಬುಲೆಟ್‌ ಟ್ಯಾಂಕರ್‌ಗಳು, ಶಿಪ್‌ ಕಾರ್ಗೊ ಕಂಟೈನರ್‌ಗಳು, ಮಲ್ಟಿ ಆ್ಯಕ್ಸಲ್‌ ವಾಹನಗಳು

ನಿರ್ಬಂಧದಿಂದ ವಿನಾಯಿತಿ

- ಅಡುಗೆ ಅನಿಲ ಮತ್ತು ಇಂಧನ ಸಾಗಣೆ ವಾಹನ.

- ಹಾಲು ಪೂರೈಕೆ ವಾಹನ

-ಸರಕಾರಿ ಕೆಲಸದ ನಿಮಿತ್ತ ಉಪಯೋಗಿಸುವ ವಾಹನ

-ಶಾಲಾ, ಕಾಲೇಜು ಮತ್ತು ಸಾರ್ವಜನಿಕ ಪ್ರಯಾಣಿಕರ ವಾಹನ (ಮಲ್ಟಿ ಆ್ಯಕ್ಸಲ್‌ ಬಸ್‌ಗಳು ಸೇರಿದಂತೆ).

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ