ಆ್ಯಪ್ನಗರ

ಕುಲ್ಲೇಟಿರ ಕಪ್‌: ಕ್ವಾರ್ಟರ್‌ ಫೈನಲ್‌ಗೆ ಮಾಜಿ ಚಾಂಪಿಯನ್‌ ಪಳಂಗಂಡ

ಕೊಡವ ಕುಟುಂಬಗಳ ನಡುವೆ ನಾಪೋಕ್ಲು ಚೆರಿಯಪರಂಬು ಬಳಿಯ ಜನರಲ್‌ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಲ್ಲೇಟಿರ ಹಾಕಿ ಹಬ್ಬದಲ್ಲಿ ಮಾಜಿ ಚಾಂಪಿಯನ್‌ ಪಳಂಗಂಡ, ಸೋಮೆಯಂಡ, ಚೇಂದಂಡ ತಂಡಗಳು ಗೆಲುವು ಸಾಧಿಸಿ ಕ್ವಾರ್ಟರ್‌ ಫೈನಲ್‌ ಹಂತಕ್ಕೆ ಪ್ರವೇಶ ಪಡೆದುಕೊಂಡಿವೆ.

Vijaya Karnataka 17 May 2018, 5:00 am
ನಾಪೋಕ್ಲು: ಕೊಡವ ಕುಟುಂಬಗಳ ನಡುವೆ ನಾಪೋಕ್ಲು ಚೆರಿಯಪರಂಬು ಬಳಿಯ ಜನರಲ್‌ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಲ್ಲೇಟಿರ ಹಾಕಿ ಹಬ್ಬದಲ್ಲಿ ಮಾಜಿ ಚಾಂಪಿಯನ್‌ ಪಳಂಗಂಡ, ಸೋಮೆಯಂಡ, ಚೇಂದಂಡ ತಂಡಗಳು ಗೆಲುವು ಸಾಧಿಸಿ ಕ್ವಾರ್ಟರ್‌ ಫೈನಲ್‌ ಹಂತಕ್ಕೆ ಪ್ರವೇಶ ಪಡೆದುಕೊಂಡಿವೆ.
Vijaya Karnataka Web kulletira cup palanganda enters quarter final
ಕುಲ್ಲೇಟಿರ ಕಪ್‌: ಕ್ವಾರ್ಟರ್‌ ಫೈನಲ್‌ಗೆ ಮಾಜಿ ಚಾಂಪಿಯನ್‌ ಪಳಂಗಂಡ


ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ಪಳಂಗಂಡ ತಂಡವು ಮುರುವಂಡ ತಂಡದ ವಿರುದ್ಧ ಟೈಬ್ರೇಕರ್‌ನಲ್ಲಿ ಗೆಲುವು ಸಾಧಿಸಿತು. ನಿಗದಿತ ಅವಧಿಯಲ್ಲಿ ಎರಡು ತಂಡಗಳು ಬಿರುಸುನಿಂದ ಆಡಿ ನೋಡುಗರ ಮನ ತಲ್ಲಣಿಸಿದವು. 2-2 ಗೋಲುಗಳ ಸಮಬಲ ಸಾಧಿಸಿದವು. ನಂತರ ಪಂದ್ಯದ ನಿಯಮದಂತೆ ಟೈಬ್ರೇಕರ್‌ ಪಳಂಗಂಡ ತಂಡ 4-5 ಗೋಲುಗಳಿಂದ ವಿಜಯ ಸಾಧಿಸಿ ಕ್ವಾರ್ಟರ್‌ ಫೈನಲ್‌ ಹಂತಕ್ಕೆ ಅರ್ಹತೆಗಳಿಸಿತು.

ನಂತರದ ಪಂದ್ಯದಲ್ಲಿ ಸೋಮೆಯಂಡ ತಂಡವು ಚೇಂದಿರ ತಂಡವನ್ನು 1-0 ಗೋಲುಗಳಿಂದ ಮಣಿಸಿ, ಕ್ವಾರ್ಟರ್‌ ಫೈನಲ್‌ ಹಂತಕ್ಕೆ ಇದೇ ಮೊದಲ ಬಾರಿ ಪ್ರವೇಶವನ್ನು ಪಡೆದುಕೊಂಡಿತು. ಸೋಮೆಯಂಡ ಪರ ಅಪ್ಪಯ್ಯ ಗೋಲುಗಳಿಸಿ ತಂಡವನ್ನು ಕ್ವಾರ್ಟರ್‌ ಫೈನ್‌ ಫೈನಲ್‌ ಹಂತಕ್ಕೆ ತಂದರು.

ಬಳಿಕ ನಡೆದ ಪಂದ್ಯದಲ್ಲಿ ಚೇಂದಂಡ ತಂಡವು ಮುಕ್ಕಾಟೀರ (ಬೊಂದ ) ತಂಡವನ್ನು 2-0 ಗೋಲುಗಳಿಂದ ಸೋಲಿಸಿ ಕ್ವಾರ್ಟರ್‌ ಫೈನಲ್‌ ಹಂತ ಪ್ರವೇಶಿಸಿತು. ಚೇಂದಂಡ ಪರ ಸೋನು 1, ಮುಖೇಶ್‌ 1 ಗೋಲು ಬಾರಿಸಿ ತಂಡದ ಗೆಲುವಿಗೆ ಕಾರಣರಾದರು.

ನಂತರದ ಪಂದ್ಯವು ಕೂತಂಡ ಮತ್ತು ಕುಲ್ಲೇಟಿರ ತಂಡಗಳ ನಡುವೆ ನಡೆಯಬೇಕಾಗಿತ್ತು.ಆದರೆ, ಮಳೆಯ ಕಾರಣ ಆಟವನ್ನು ಮುಂದುಡಲಾಯಿತು. ಇದರಲ್ಲಿ ಗೆದ್ದ ತಂಡವು ಕ್ವಾರ್ಟರ್‌ ಫೈನಲ್‌ ತಲುಪಲಿದೆ.
ಇಂದಿನಿಂದ ಕ್ವಾರ್ಟರ್‌ ಫೈನಲ್‌

ಬೆ.8.30ಕ್ಕೆ ಪರದಂಡ - ಬೊವ್ವೇರಿಯಂಡ

ಬೆ.10.00ಕ್ಕೆ ಅಂಜಪರುವಂಡ - ಚೇಪ್ಪುಡೀರ

ಬೆ.11.00ಕ್ಕೆ ಪಳಂಗಂಡ - ಮತ್ತು ಕುಲ್ಲೇಟಿರ, ಕೂತಂಡ ಗೆದ್ದ ತಂಡದ ಪರ

ಮ.12.00ಕ್ಕೆ ಸೊಮೇಯಂಡ - ಚೇಂದಂಡ


ತಾಂತ್ರಿಕ ವರ್ಗದ ದಕ್ಷತೆ

22ನೇ ವರ್ಷದ ಕೊಡವ ಕುಟುಂಬಗಳ ಕುಲ್ಲೇಟಿರ ಹಾಕಿ ಹಬ್ಬದಲ್ಲಿ ಪಂದ್ಯಗಳು ಸುಗಮವಾಗಿ ನಡೆಯಲು ತಾಂತ್ರಕಿ ವರ್ಗದ ಶ್ರಮ ಕಾರಣ. ಕಳೆದ 21 ವರ್ಷಗಳಿಂದ ಹಾಕಿ ಹಬ್ಬ ನಡೆದು ಬರುತ್ತಿರುವುದು ತಾಂತ್ರಿಕ ವರ್ಗದ ಪರಿಶ್ರಮದಿಂದ ಎಂದರೆ ತಪ್ಪಾಗಲಾರದು. 22ನೇ ವರ್ಷದ ಕೊಡವ ಕುಟುಂಬಗಳ ಸಾರಥ್ಯವನ್ನು ಕುಲ್ಲೇಟಿರ ಕುಟುಂಬದವರು ವಹಿಸಿದ್ದರೂ, ಪಂದ್ಯದ ತಾಂತ್ರಿಕ ವರ್ಗದ ನಿರ್ದೇಶಕರಾಗಿ ಬಡಕಡ ಸುರೇಶ್‌ ಬೆಳ್ಯಪ್ಪ ನೇತೃತ್ವದಲ್ಲಿ 47 ಜನರ ತಂಡವು ಏಪ್ರಿಲ್‌ 15 ರಿಂದ ಫೈನಲ್‌ವರೆಗೆ ಸುಮಾರು 35 ದಿನಗಳ ಕಾಲ ನಿರಂತರ ಸೇವೆ ಸಲ್ಲಿಸುತ್ತಿದೆ. ಇದುವರೆಗೂ ಯಾವುದೇ ಅಡಚಣೆ ಇಲ್ಲದೇ ಕಾರ್ಯವನ್ನು ನಿರ್ವಹಿಸಿರುವುದು ಇವರ ದಕ್ಷ ತೆಗೆ ಸಾಕ್ಷಿ ಯಾಗಿದೆ

ತಾಂತ್ರಿಕ ವರ್ಗದ ಡೈರೆಕ್ಟರ್‌ ಆಗಿ ಬಡಕಡ ಸುರೇಶ್‌ ಬೆಳ್ಯಪ್ಪ, ತೀರ್ಪುಗಾರರ ಚೇರ್ಮನ್‌ ಆಗಿ ಬಿ.ಎ. ಚಂಗಪ್ಪ ಮತ್ತು ತೀರ್ಪುಗಾರರಾಗಿ ರೋಷನ್‌ , ಸೋಮಣ್ಣ, ಪವನ್‌, ಕೀರ್ತಿ, ನಾಣಯ್ಯ, ನಾಚಪ್ಪ, ಗಣಪತಿ, ದೀಲನ್‌, ಬೋಪಯ್ಯ, ಚೆಂಗಪ್ಪ, ಗಿರೀಶ್‌, ಅಪ್ಪಚ್ಚು , ಕಾರ್ತೀಕ್‌, ಪೊನ್ನಣ್ಣ, ಸುಬ್ಬಯ್ಯ, ಬಿದ್ದಪ್ಪ, ಬೋಸ್‌ ಚೆಂಗಪ್ಪ, ಸರತ್‌ ಸುಬ್ಬಯ್ಯ, ಆಕಾಶ್‌ ಚಂಗಪ್ಪ, ದೀನಾ ಪೂವಯ್ಯ, ಕುಶಾಲಪ್ಪ, ಅಪ್ಪಣ್ಣ, ವಿಶಾಲ್‌, ಸಂತೋಷ್‌, ದರ್ಶನ್‌, ಬೀಫಿನ್‌, ಚಿಟ್ಟೀಯಪ್ಪ, ಅಯ್ಯಣ್ಣ, ತೀಷ್ಮಾ, ಪ್ರೀತು, ಭಾಗ್ಯಶ್ರೀ, ಹರ್ಷಿತಾ, ಕೃಪನ್‌, ಯಶಸ್ವಿ, ಸಚಿನ್‌, ಗಗನ್‌, ಮುತ್ತಪ್ಪ, ಅಯ್ಯಪ್ಪ, ಮಿಲನ್‌, ಯಾಶ್ವೀನ್‌, ನಾಚಪ್ಪ, ಪಳಂಗಪ್ಪ, ಮುತ್ತಣ್ಣ, ತರುಣ್‌, ನಿದೀಪ್‌ ನಂಜಪ್ಪ, ಚೀರಣ್‌ ಕಾರ್ಯನಿರ್ವಹಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ