ಆ್ಯಪ್ನಗರ

ಹಾನಗಲ್ಲುಶೆಟ್ಟಳ್ಳಿಯಲ್ಲಿಉರುಳಿಗೆ ಸಿಲುಕಿ ಚಿರತೆ ಬಲಿ

ತಾಲೂಕಿನ ಹಾನಗಲ್ಲು ಶೆಟ್ಟಳ್ಳಿ ಗ್ರಾಮದಲ್ಲಿ ಚಿರತೆ ಉರುಳಿಗೆ ಸಿಲುಕಿ ಬಲಿಯಾಗಿದೆ...

Vijaya Karnataka 6 Jan 2020, 5:00 am
ಸೋಮವಾರಪೇಟೆ : ತಾಲೂಕಿನ ಹಾನಗಲ್ಲು ಶೆಟ್ಟಳ್ಳಿ ಗ್ರಾಮದಲ್ಲಿ ಚಿರತೆ ಉರುಳಿಗೆ ಸಿಲುಕಿ ಬಲಿಯಾಗಿದೆ.
Vijaya Karnataka Web MDK5SPT4_19
ಹಾನಗಲ್ಲುಶೆಟ್ಟಳ್ಳಿಯಲ್ಲಿ ಉರುಳಿಗೆ ಸಿಲುಕಿ ಚಿರತೆ ಬಲಿ


ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಚಂಗಪ್ಪ ಎಂಬವರ ಕಾಫಿ ತೋಟದ ಸನಿಹದ ತೋಡಿನಲ್ಲಿ ಚಿರತೆಯ ಕಳೇಬರ ಭಾನುವಾರ ಮಧ್ಯಾಹ್ನ ಪತ್ತೆಯಾಗಿದ್ದು, ಕುತ್ತಿಗೆಯಲ್ಲಿಉರುಳು ಕಂಡುಬಂದಿದೆ. ಇದು ಸುಮಾರು 4 ವರ್ಷ ಪ್ರಾಯದ ಗಂಡು ಚಿರತೆಯಾಗಿದ್ದು, ಹಿಂದಿನ ರಾತ್ರಿ ಸತ್ತಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.

ಎಸಿಎಫ್‌ ನೆಹರು, ಆರ್‌ಎಫ್‌ಒ ಶಮಾ, ಡಿಆರ್‌ಎಫ್‌ಒ ಮನು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ನಂತರ ಪಟ್ಟಣದ ಪಶುವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದರು. ಚಿರತೆ ಚಿಕ್ಕತೋಳೂರು, ಹಣಕೋಡು, ಸಿದ್ದಲಿಂಗಪುರ ಗ್ರಾಮಗಳಲ್ಲಿ ಸಾಕುನಾಯಿಗಳನ್ನು ಕೊಂದು ಗ್ರಾಮಸ್ಥರಲ್ಲಿಆತಂಕ ಹುಟ್ಟಿಸಿತ್ತು. ಅರಣ್ಯ ಇಲಾಖೆಯವರು ಬೋನ್‌ ಇಟ್ಟು, ಚಿರತೆ ಹಿಡಿಯಲು ಪ್ರಯತ್ನ ಮಾಡಿದ್ದರೂ ಯಶ ಕಂಡಿರಲಿಲ್ಲ. ಇತ್ತೀಚೆಗೆ ಕಾಜೂರು ಟಾಟಾ ಕಾಫಿ ತೋಟದಲ್ಲಿ ಕರುವೊಂದು ಚಿರತೆಗೆ ಬಲಿಯಾಗಿತ್ತು. ಭತ್ತದ ಪೈರನ್ನು ನಾಶಪಡಿಸುವ ಕಾಡುಹಂದಿಗಳಿಗೆ ಇಟ್ಟಿದ್ದ ಉರುಳಿಗೆ ಚಿರತೆ ಬಲಿಯಾಗಿರಬಹುದು ಎಂದು ಹೇಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ