ಸುನಿಲ್ ಪೊನ್ನೇಟಿ ಮಡಿಕೇರಿ
ಮಡಿಕೇರಿ: ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ಕೊಡುವ ನಗರದ ಪ್ರಮುಖ ಪ್ರವಾಸಿ ತಾಣ ರಾಜಾಸೀಟ್ನಲ್ಲಿ ಅಲ್ಲಲ್ಲಿ ಬಿದ್ದಿದ್ದ ಕಸವನ್ನು ಮಕ್ಕಳೇ ಸ್ವಚ್ಛಗೊಳಿಸಿ ಗಾಂಧಿಗಿರಿ ಮೆರೆದಿದ್ದಾರೆ. 'ದಯವಿಟ್ಟು ಎಲ್ಲೆಂದರಲ್ಲಿ ಕಸ ಸುರಿಯಬೇಡಿ..ಸ್ವಚ್ಛ ಕೊಡಗಿಗೆ ಸಹಕರಿಸಿ' ಎಂದು ಪ್ರವಾಸಿಗರ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ. ಪುಟಾಣಿಗಳ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮಂಗಳವಾರ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಜೆ ಇದ್ದ ಕಾರಣ ನಗರದ ರಾಘವೇಂದ್ರ ದೇವಸ್ಥಾನ ಬಳಿಯ ಕಲಾನಗರ ಯುವಕ ಸಂಘದ ಅಧ್ಯಕ್ಷ ಅಪ್ಪು ಮಹೇಶ್ ತಮ್ಮ ಏರಿಯಾದ ಮಕ್ಕಳನ್ನು ರಾಜಾಸೀಟ್ಗೆ ಪಿಕ್ನಿಕ್ ಕರೆದುಕೊಂಡು ಬಂದಿದ್ದರು. ಎಲ್ಲರೂ 6ನೇ ತರಗತಿ ಒಳಗಿನ ಪುಟಾಣಿಗಳು. ಉದ್ಯಾನವನದಲ್ಲಿ ಸುತ್ತಾಡುತ್ತಾ ಫೋಟೋಗಳನ್ನು ತೆಗೆಯುತ್ತಿದ್ದ ವೇಳೆ ಎಲ್ಲೆಂದರಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯ, ಕಸವನ್ನು ಮಕ್ಕಳು ನೋಡಿದ್ದಾರೆ.
ತಮ್ಮೂರಿನ ಪ್ರಸಿದ್ಧ ಪ್ರವಾಸಿತಾಣದಲ್ಲಿ ಈ ರೀತಿಯ ಅಶುಚಿತ್ವ ಗಮನಿಸಿದ ಮಕ್ಕಳು ಅದನ್ನು ಸ್ವಚ್ಛ ಮಾಡುವ ಬಗ್ಗೆ ತಮ್ಮ ತಮ್ಮಲ್ಲಿ ಮಾತಾಡಿಕೊಂಡು, ಪಿಕ್ನಿಕ್ ಕರೆದುಕೊಂಡು ಬಂದಿದ್ದ ಮಹೇಶ್ ಗಮನಕ್ಕೆ ತಂದಿದ್ದಾರೆ. ಮಕ್ಕಳ ಕಾಳಜಿಗೆ ಸ್ಪಂದಿಸಿದ ಮಹೇಶ್ ಕೂಡಲೇ ಮೆಡಿಕಲ್ ಶಾಪ್ಗೆ ತೆರಳಿ ಗ್ಲೌಸ್, ಮಾಸ್ಕ್ ಖರೀದಿಸಿ ತಂದು ಸುರಕ್ಷತಾ ಕ್ರಮಗಳೊಂದಿಗೆ ಸ್ವಚ್ಛತಾ ಕಾರ್ಯಕ್ಕೆ ಸಹಕರಿಸಿದ್ದಾರೆ.
ಸುಮಾರು 2 ಗಂಟೆಗಳ ಕಾಲ ಉದ್ಯಾನವನದಲ್ಲಿ ಅಡ್ಡಾಡಿದ 10 ಮಂದಿ ಪುಟಾಣಿಗಳು ಮಹೇಶ್ ಸಹಕಾರದಿಂದ ತ್ಯಾಜ್ಯ ಸಂಗ್ರಹಿಸಿ ಕಸದ ಬುಟ್ಟಿಗೆ ಹಾಕಿದ್ದಾರೆ. ರಜಾದಿನವಾದ ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ರಾಜಾಸೀಟ್ಗೆ ಬಂದಿದ್ದರು. ಸ್ವಚ್ಛತೆಯನ್ನು ಮರೆತು ವರ್ತಿಸುತ್ತಿದ್ದ ಕೆಲ ಪ್ರವಾಸಿಗರಿಗೆ 'ಕಸವನ್ನು ಕಸದ ಬುಟ್ಟಿಗೇ ಹಾಕಿ. ಪ್ಲೀಸ್... ಕೊಡಗನ್ನು ಶುಚಿಯಾಗಿ ಇಡಲು ಸಹಕರಿಸಿ' ಎಂದು ಈ ಮಕ್ಕಳೇ ಮನವಿ ಮಾಡಿಕೊಂಡು ಸ್ವಚ್ಛ ಕೊಡಗಿನ ಬಗ್ಗೆ ಜಾಗೃತಿಯನ್ನೂ ಮೂಡಿಸಿದರು.
ಪ್ರವಾಸಿಗರು ಸ್ವಚ್ಛತೆ ಕಾಪಾಡಿ
ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ರಾಜಾಸೀಟ್ನಲ್ಲಿ ಪ್ರವಾಸಿಗರ ದುರ್ವರ್ತನೆ ಬಗ್ಗೆ ಸ್ಥಳೀಯರ ಆಕ್ಷೇಪವಿದೆ. ಅಲ್ಲಲ್ಲಿ ಕಸದ ಬುಟ್ಟಿಗಳಿದ್ದರೂ ಪ್ಲಾಸ್ಟಿಕ್ ತ್ಯಾಜ್ಯ ಸೇರಿದಂತೆ ಕಸವನ್ನು ಎಲ್ಲೆಂದರಲ್ಲಿ ಎಸೆದು ಸುಂದರ ಉದ್ಯಾನವನವನ್ನು ಹಾಳು ಮಾಡುತ್ತಾರೆ ಎನ್ನುವುದು ಸಾಮಾನ್ಯ ಆರೋಪ. ಇಂತಹವರ ಕಣ್ಣು ತೆರೆಸುವ ಕೆಲಸವನ್ನು ನಗರದ ಮಕ್ಕಳು ಮಾಡಿರುವ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜಾಸೀಟ್ನಲ್ಲಿ ನಮ್ಮ ಏರಿಯಾದ ಮಕ್ಕಳು ಮಾದರಿ ಕೆಲಸ ಮಾಡಿದ್ದಾರೆ. ಸ್ವಚ್ಛತೆ ಮರೆಯುವ ಪ್ರವಾಸಿಗರಿಗೆ ಪಾಠವನ್ನೂ ಕಲಿಸಿದ್ದಾರೆ.
ಅಪ್ಪು ಮಹೇಶ್, ಅಧ್ಯಕ್ಷ, ಕಲಾನಗರ ಯುವಕ ಸಂಘ
ಮಡಿಕೇರಿ: ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ಕೊಡುವ ನಗರದ ಪ್ರಮುಖ ಪ್ರವಾಸಿ ತಾಣ ರಾಜಾಸೀಟ್ನಲ್ಲಿ ಅಲ್ಲಲ್ಲಿ ಬಿದ್ದಿದ್ದ ಕಸವನ್ನು ಮಕ್ಕಳೇ ಸ್ವಚ್ಛಗೊಳಿಸಿ ಗಾಂಧಿಗಿರಿ ಮೆರೆದಿದ್ದಾರೆ.
ಮಂಗಳವಾರ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಜೆ ಇದ್ದ ಕಾರಣ ನಗರದ ರಾಘವೇಂದ್ರ ದೇವಸ್ಥಾನ ಬಳಿಯ ಕಲಾನಗರ ಯುವಕ ಸಂಘದ ಅಧ್ಯಕ್ಷ ಅಪ್ಪು ಮಹೇಶ್ ತಮ್ಮ ಏರಿಯಾದ ಮಕ್ಕಳನ್ನು ರಾಜಾಸೀಟ್ಗೆ ಪಿಕ್ನಿಕ್ ಕರೆದುಕೊಂಡು ಬಂದಿದ್ದರು. ಎಲ್ಲರೂ 6ನೇ ತರಗತಿ ಒಳಗಿನ ಪುಟಾಣಿಗಳು. ಉದ್ಯಾನವನದಲ್ಲಿ ಸುತ್ತಾಡುತ್ತಾ ಫೋಟೋಗಳನ್ನು ತೆಗೆಯುತ್ತಿದ್ದ ವೇಳೆ ಎಲ್ಲೆಂದರಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯ, ಕಸವನ್ನು ಮಕ್ಕಳು ನೋಡಿದ್ದಾರೆ.
ತಮ್ಮೂರಿನ ಪ್ರಸಿದ್ಧ ಪ್ರವಾಸಿತಾಣದಲ್ಲಿ ಈ ರೀತಿಯ ಅಶುಚಿತ್ವ ಗಮನಿಸಿದ ಮಕ್ಕಳು ಅದನ್ನು ಸ್ವಚ್ಛ ಮಾಡುವ ಬಗ್ಗೆ ತಮ್ಮ ತಮ್ಮಲ್ಲಿ ಮಾತಾಡಿಕೊಂಡು, ಪಿಕ್ನಿಕ್ ಕರೆದುಕೊಂಡು ಬಂದಿದ್ದ ಮಹೇಶ್ ಗಮನಕ್ಕೆ ತಂದಿದ್ದಾರೆ. ಮಕ್ಕಳ ಕಾಳಜಿಗೆ ಸ್ಪಂದಿಸಿದ ಮಹೇಶ್ ಕೂಡಲೇ ಮೆಡಿಕಲ್ ಶಾಪ್ಗೆ ತೆರಳಿ ಗ್ಲೌಸ್, ಮಾಸ್ಕ್ ಖರೀದಿಸಿ ತಂದು ಸುರಕ್ಷತಾ ಕ್ರಮಗಳೊಂದಿಗೆ ಸ್ವಚ್ಛತಾ ಕಾರ್ಯಕ್ಕೆ ಸಹಕರಿಸಿದ್ದಾರೆ.
ಸುಮಾರು 2 ಗಂಟೆಗಳ ಕಾಲ ಉದ್ಯಾನವನದಲ್ಲಿ ಅಡ್ಡಾಡಿದ 10 ಮಂದಿ ಪುಟಾಣಿಗಳು ಮಹೇಶ್ ಸಹಕಾರದಿಂದ ತ್ಯಾಜ್ಯ ಸಂಗ್ರಹಿಸಿ ಕಸದ ಬುಟ್ಟಿಗೆ ಹಾಕಿದ್ದಾರೆ. ರಜಾದಿನವಾದ ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ರಾಜಾಸೀಟ್ಗೆ ಬಂದಿದ್ದರು. ಸ್ವಚ್ಛತೆಯನ್ನು ಮರೆತು ವರ್ತಿಸುತ್ತಿದ್ದ ಕೆಲ ಪ್ರವಾಸಿಗರಿಗೆ 'ಕಸವನ್ನು ಕಸದ ಬುಟ್ಟಿಗೇ ಹಾಕಿ. ಪ್ಲೀಸ್... ಕೊಡಗನ್ನು ಶುಚಿಯಾಗಿ ಇಡಲು ಸಹಕರಿಸಿ' ಎಂದು ಈ ಮಕ್ಕಳೇ ಮನವಿ ಮಾಡಿಕೊಂಡು ಸ್ವಚ್ಛ ಕೊಡಗಿನ ಬಗ್ಗೆ ಜಾಗೃತಿಯನ್ನೂ ಮೂಡಿಸಿದರು.
ಪ್ರವಾಸಿಗರು ಸ್ವಚ್ಛತೆ ಕಾಪಾಡಿ
ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ರಾಜಾಸೀಟ್ನಲ್ಲಿ ಪ್ರವಾಸಿಗರ ದುರ್ವರ್ತನೆ ಬಗ್ಗೆ ಸ್ಥಳೀಯರ ಆಕ್ಷೇಪವಿದೆ. ಅಲ್ಲಲ್ಲಿ ಕಸದ ಬುಟ್ಟಿಗಳಿದ್ದರೂ ಪ್ಲಾಸ್ಟಿಕ್ ತ್ಯಾಜ್ಯ ಸೇರಿದಂತೆ ಕಸವನ್ನು ಎಲ್ಲೆಂದರಲ್ಲಿ ಎಸೆದು ಸುಂದರ ಉದ್ಯಾನವನವನ್ನು ಹಾಳು ಮಾಡುತ್ತಾರೆ ಎನ್ನುವುದು ಸಾಮಾನ್ಯ ಆರೋಪ. ಇಂತಹವರ ಕಣ್ಣು ತೆರೆಸುವ ಕೆಲಸವನ್ನು ನಗರದ ಮಕ್ಕಳು ಮಾಡಿರುವ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜಾಸೀಟ್ನಲ್ಲಿ ನಮ್ಮ ಏರಿಯಾದ ಮಕ್ಕಳು ಮಾದರಿ ಕೆಲಸ ಮಾಡಿದ್ದಾರೆ. ಸ್ವಚ್ಛತೆ ಮರೆಯುವ ಪ್ರವಾಸಿಗರಿಗೆ ಪಾಠವನ್ನೂ ಕಲಿಸಿದ್ದಾರೆ.
ಅಪ್ಪು ಮಹೇಶ್, ಅಧ್ಯಕ್ಷ, ಕಲಾನಗರ ಯುವಕ ಸಂಘ