ಆ್ಯಪ್ನಗರ

ಮಡಿಕೇರಿ ದಸರಾ: ಪರ್ಯಾಯ ಕವಿಗೋಷ್ಠಿ

ಸರಕಾರಿ ಸಾಂಪ್ರದಾಯಿಕ ದಸರಾ ಆಚರಣೆಗೆ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ್ದರೂ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ರದ್ದುಪಡಿಸಿರುವುದಕ್ಕೆ ಸಾಹಿತ್ಯಿಕ ವಲಯದಲ್ಲಿ ಆಕ್ಷೇಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಅ.16ರಂದು ಪರ್ಯಾಯ ಗೋಷ್ಠಿ ನಡೆಸಲು ನಿರ್ಧರಿಸಲಾಗಿದೆ.

Vijaya Karnataka 12 Oct 2018, 5:00 am
ಮಡಿಕೇರಿ: ಸರಕಾರಿ ಸಾಂಪ್ರದಾಯಿಕ ದಸರಾ ಆಚರಣೆಗೆ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ್ದರೂ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ರದ್ದುಪಡಿಸಿರುವುದಕ್ಕೆ ಸಾಹಿತ್ಯಿಕ ವಲಯದಲ್ಲಿ ಆಕ್ಷೇಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಅ.16ರಂದು ಪರ್ಯಾಯ ಗೋಷ್ಠಿ ನಡೆಸಲು ನಿರ್ಧರಿಸಲಾಗಿದೆ.
Vijaya Karnataka Web madikeri dasara parallel poetsmeet
ಮಡಿಕೇರಿ ದಸರಾ: ಪರ್ಯಾಯ ಕವಿಗೋಷ್ಠಿ


'ಸಂತ್ರಸ್ತರಿಗೆ ಸಾಂತ್ವನ-ಬಂದವರಿಗೆ ತಣ್ಣೀರು' ಘೋಷವಾಕ್ಯದೊಂದಿಗೆ ಪರ್ಯಾಯ ಗೋಷ್ಠಿ ನಡೆಸಲು ತೀರ್ಮಾನಿಸಲಾಗಿದೆ. ಸರಕಾರದ ಅನುದಾನದ ನಡುವೆಯೂ ಪ್ರಧಾನ ಸಮಿತಿ ಕವಿಗೋಷ್ಠಿಯನ್ನು ರದ್ದು ಮಾಡಿರುವುದಕ್ಕೆ ಕವಿಗೋಷ್ಠಿ ಉಪ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆಯಲ್ಲದೇ, ಇದು ಸಾಹಿತ್ಯ ಕ್ಷೇತ್ರಕ್ಕೆ ಮಾಡುವ ಅವಮಾನ ಎಂದು ಖಂಡಿಸಿದೆ.

ಈಚೆಗೆ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌ ಅವರು ದಸರಾಕ್ಕೆ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ. ಅದ್ಧೂರಿ ಇಲ್ಲದೆ ಸಾಂಪ್ರದಾಯಿಕ ದಸರಾ ಆಚರಣೆ ಮಾಡಿ ಎಂದು ಹೇಳಿದ್ದರು. ಸರಕಾರ 50 ಲಕ್ಷ ರೂ. ಮಡಿಕೇರಿಗೆ ಹಾಗೂ 25 ಲಕ್ಷ ರೂ. ಗೋಣಿಕೊಪ್ಪಲುವಿಗೆ ಬಿಡುಗಡೆ ಮಾಡಿರುವುದನ್ನು ಕವಿಗೋಷ್ಠಿ ಸಮಿತಿ ಸ್ವಾಗತಿಸುತ್ತದೆ. ಆದರೆ, ಪ್ರಧಾನ ಸಮಿತಿ ಕವಿಗೋಷ್ಠಿಯನ್ನು ರದ್ದುಪಡಿಸಿದೆ. ಕವಿಗೋಷ್ಠಿಯ ಮೂಲಕ ಸಂತ್ರಸ್ತರಿಗೆ ಧೈರ್ಯ ತುಂಬುವ ಕಾರ್ಯ ಆಗಬೇಕಿತ್ತು. ಇದೇ ವಿಷಯದಲ್ಲಿ ಈ ವರ್ಷ ಕವಿಗೋಷ್ಠಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಏಕಾಏಕಿಯಾಗಿ ರದ್ದುಪಡಿಸಿರುವುದು ಸರಿಯಲ್ಲ, ಎಂದು ಸುದ್ದಿಗೋಷ್ಠಿಯಲ್ಲಿ ಕವಿಗೋಷ್ಠಿ ಪದಾಧಿಕಾರಿಗಳು ಹೇಳಿದರು.

50 ಲಕ್ಷ ರೂ.ಗಳಲ್ಲಿ ದಶಮಂಟಪಗಳಿಗೆ ತಲಾ 2 ಲಕ್ಷ ರೂ. ಹಾಗೂ ಕರಗಗಳಿಗೆ ತಲಾ 1.5 ಲಕ್ಷ ರೂ. ನೀಡಲು ನಿರ್ಧರಿಸಿರುವುದನ್ನು ಸ್ವಾಗತಿಸುತ್ತೇವೆ. ಆದರೆ, ಉಳಿದ ಹಣದಲ್ಲಿ ಕವಿಗೋಷ್ಠಿಗೆ ಪುಟ್ಟ ಅನುದಾನ ನೀಡಬಹುದಿತ್ತು. ಕೊನೆಯ ಎರಡು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದಾರೆ. ಅಲ್ಲದೇ, ಎರಡು ದಿನದ ವೇದಿಕೆಗೆ ಹಾಗೂ ಲೈಟಿಂಗ್ಸ್‌ಗೆ 8 ಲಕ್ಷ ರೂ. ವೆಚ್ಚ ಮಾಡುತ್ತಾರೆ. ಆದರೆ, ಕವಿಗೋಷ್ಠಿಗೆ ನೀಡಲು ಅನುದಾನ ಇಲ್ಲದಿರುವುದು ಖಂಡನೀಯ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ದಸರಾಕ್ಕೆ ಹಣ ಬಿಡುಗಡೆಯಾಗುತ್ತಿದೆ. ಅದರ ಉದ್ದೇಶ ಕೂಡ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವಂತಹದ್ದು. ಆದರೆ, ಕವಿಗೋಷ್ಠಿಯನ್ನು ಇದರಿಂದ ಯಾವ ಕಾರಣಕ್ಕೆ ಹೊರಗಿಟ್ಟಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ಕವಿಗೋಷ್ಠಿಯಿಂದಾಗಿ ಸಾಕಷ್ಟು ಯುವ ಕವಿಗಳಿಗೆ ಪ್ರೋತ್ಸಾಹ ಲಭ್ಯವಾಗಿದೆ. ಇದರ ಮಹತ್ವ ಕೆಲವರಿಗೆ ತಿಳಿದಿಲ್ಲ ಎಂದು ವಿಷಾದಿಸಿದರು.

ಈ ಹಿನ್ನೆಲೆಯಲ್ಲಿ ಅಕ್ಟೋಬರ್‌ 16ರಂದು ಪರ್ಯಾಯ ಕವಿಗೋಷ್ಠಿ ನಡೆಯಲಿದೆ. ಅಂದು ಬೆಳಗ್ಗೆ 10.30ಕ್ಕೆ ಬಾಲಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 'ದಸರಾ ಸಮಿತಿ ಅನುದಾನ ರಹಿತ' ಎಂಬ ಟ್ಯಾಗ್‌ಲೈನ್‌ ಬಳಸಲಾಗುತ್ತದೆ. 'ಸಂತ್ರಸ್ತರಿಗೆ ಸಾಂತ್ವಾನ' ವಿಷಯವನ್ನು ಇಡಲಾಗಿದೆ. ಸುಮಾರು 25 ಕವಿಗಳು ಅಂದು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕವನ ವಾಚಿಸುತ್ತಾರೆ. ಸಾಹಿತಿ ಹಾಗೂ ಸಂತ್ರಸ್ತರೂ ಆಗಿರುವ ನಾಗೇಶ್‌ ಕಾಲೂರು ಅಧ್ಯಕ್ಷ ತೆ ವಹಿಸುತ್ತಾರೆ. ಕವಿ ಹಾಗೂ ಸಂತ್ರಸ್ತ ಕುಡೆಕಲ್‌ ಸಂತೋಷ್‌ ಉದ್ಘಾಟನೆ ಮಾಡುತ್ತಾರೆ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಾರೆ. ಜಿಲ್ಲಾಧಿಕಾರಿಗಳನ್ನು ಆಹ್ವಾನಿಸಲಾಗುತ್ತಿದೆ ಎಂದರು.

ಕವಿಗೋಷ್ಠಿಯಲ್ಲಿ ಆಹ್ವಾನ ಪತ್ರಿಕೆ, ಸ್ಮರಣಿಕೆ, ಗೌರವಧನ, ಕಾಫಿ-ಟೀ ಹಾಗೂ ಮಧ್ಯಾಹ್ನದ ಊಟ ಇರುವುದಿಲ್ಲ. ಯಾರಿಂದಲೂ ಹಣ ಸಂಗ್ರಹ ಮಾಡುವುದಿಲ್ಲ. ಅನುದಾನ ನೀಡದ ಕಾರಣಕ್ಕಾಗಿ ಬಂದವರಿಗೆ ಪ್ರತಿಭಟನೆಯ ಸಂಕೇತವಾಗಿ 'ತಣ್ಣೀರು' ವಿತರಿಸಲಾಗುವುದು. ಗುರುವಾರ ನಡೆದ ಸಮಿತಿ ತುರ್ತು ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.

ನಿಕಟ ಪೂರ್ವ ಅಧ್ಯಕ್ಷ ಕುಡೆಕಲ್‌ ಸಂತೋಷ್‌ ಮಾತನಾಡಿ, ಕವಿಗೋಷ್ಠಿಯನ್ನು ರದ್ದುಪಡಿಸಿರುವುದು ಆಕ್ಷೇಪಾರ್ಹ. ಇದನ್ನು ಸಂತ್ರಸ್ತರಿಗೆ ಸಾಂತ್ವನ ತುಂಬಲು ಬಳಸಿಕೊಳ್ಳಬೇಕಿತ್ತು. ಸರಕಾರದಿಂದ 50 ಲಕ್ಷ ರೂ. ಬಿಡುಗಡೆಯಾಗಿದ್ದರೂ ಅನುದಾನ ಬಿಡುಗಡೆಯಾಗದಿರುವುದು ಖಂಡನೀಯ ಎಂದರು.

ಗೋಷ್ಠಿಯಲ್ಲಿ ಕವಿಗೋಷ್ಠಿ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಎನ್‌.ನಾಸೀರ್‌, ಪದಾಧಿಕಾರಿಗಳಾದ ವಿN್ನೕಶ್‌ ಭೂತನಕಾಡು, ಕಿಶೋರ್‌ ರೈ ಕತ್ತಲೆಕಾಡು, ಮನು ಮುಂತಾದವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ