ಆ್ಯಪ್ನಗರ

ಮಡಿಕೇರಿ-ಮೈಸೂರು ರಸ್ತೆ ಮುಕ್ತ ಮುಕ್ತ

ಅತಿವೃಷ್ಟಿಯಿಂದಾಗಿ ಕೊಡಗಿನ ಬಹುತೇಕ ರಸ್ತೆಗಳು ಕುಸಿದು ಹೋಗಿವೆ. ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನು ಕನಿಷ್ಠ ಎರಡು ತಿಂಗಳು ಸಂಚಾರ ಸಾಧ್ಯವಿಲ್ಲ ಎಂದು ಸ್ವತಃ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದ್ದಾರೆ.

Vijaya Karnataka 22 Aug 2018, 8:38 am
ಮಡಿಕೇರಿ: ಅತಿವೃಷ್ಟಿಯಿಂದಾಗಿ ಕೊಡಗಿನ ಬಹುತೇಕ ರಸ್ತೆಗಳು ಕುಸಿದು ಹೋಗಿವೆ. ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನು ಕನಿಷ್ಠ ಎರಡು ತಿಂಗಳು ಸಂಚಾರ ಸಾಧ್ಯವಿಲ್ಲ ಎಂದು ಸ್ವತಃ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದ್ದಾರೆ.
Vijaya Karnataka Web Revanna


ಮಡಿಕೇರಿಯಿಂದ ಸಂಪಾಜೆ ತನಕ ಸುಮಾರು 19 ಕಡೆಗಳಲ್ಲಿ ಭೂಕುಸಿತವಾಗಿದ್ದು, ಕೆಲವು ಕಡೆಗಳಲ್ಲಿ 100 ಮೀಟರ್‌ ತನಕ ಗುಡ್ಡದ ಮಣ್ಣು ತುಂಬಿದೆ. ಇವುಗಳನ್ನು ತೆಗೆದಷ್ಟೂ ಮತ್ತೆ ಜಾರುತ್ತಿದೆ. ಈ ಹಿನ್ನೆಲೆಯಲ್ಲಿ ಲಘು ವಾಹನಗಳ ಸಂಚಾರಕ್ಕೂ ಎರಡರಿಂದ ಮೂರು ತಿಂಗಳು ಬೇಕಾಗಬಹುದು. ಮಂಗಳೂರು ಸಂಪರ್ಕಕ್ಕೆ ಇದ್ದ ಮತ್ತೊಂದು ಮಾರ್ಗ ಭಾಗಮಂಡಲ-ಕರಿಕೆ-ಸುಳ್ಯ ಕೂಡ ಅಪಾಯಕಾರಿಯಾಗಿದೆ. ಇಲ್ಲಿ ನಿತ್ಯ ಭೂಕುಸಿತವಾಗಿರುವುದರಿಂದ ಲಘುವಾಹನ ಕೂಡ ಅಪಾಯಕಾರಿಯಾಗಿದೆ.

ಸೋಮವಾರಪೇಟೆ -ಸಕಲೇಶಪುರ ಕೂಡ ಸಂಪರ್ಕ ಕಡಿತ ಗೊಂಡಿದೆ. ಇಲ್ಲಿ ಸುಮಾರು ಎರಡು ಕಿ.ಮೀ. ತನಕ ರಸ್ತೆ ಕುಸಿದು ಹೋಗಿದ್ದು, ಇದನ್ನು ಸರಿಪಡಿಸಲು ತಿಂಗಳುಗಳ ಕಾಲ ಬೇಕಾಗ ಬಹುದು. ಮಡಿಕೇರಿ- ಸೋಮವಾರಪೇಟೆ ರಸ್ತೆಯ ಹಟ್ಟಿ ಹೊಳೆ-ಮಾದಾಪುರದಲ್ಲಿ ಕೂಡ ಸದ್ಯಕ್ಕೆ ಸಂಚಾರ ಸಾಧ್ಯವಿಲ್ಲ. ಹುಣಸೂರು-ಗೋಣಿಕೊಪ್ಪಲು ಹೆದ್ದಾರಿ ಅಪಾಯಕಾರಿಯಾಗಿದೆ. ಕುಟ್ಟದ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿನ ಸೇತುವೆ ಶಿಥಿಲಗೊಂಡಿದ್ದು, ರಸ್ತೆ ಕುಸಿಯುತ್ತಿದೆ. ಭಾರಿ ವಾಹನ ನಿಷೇಧಿಸಿದ್ದರೂ, ಇರುವ ವಾಹನಗಳು ಬರುತ್ತಿದ್ದು, ಯಾವುದೇ ಸಮಯದಲ್ಲಿ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ