ಆ್ಯಪ್ನಗರ

ಮಾಕುಟ್ಟ ಹೆದ್ದಾರಿ: ಸಂಚಾರಕ್ಕೆ ಅವಕಾಶ ನೀಡಿ ಆಟೋರಿಕ್ಷಾ ಮಾಲೀಕರು, ಚಾಲಕರ ಆಗ್ರಹ

ಭೂಕುಸಿತವಾಗಿದ್ದ ಮಾಕುಟ್ಟ ಅಂತರರಾಜ್ಯ ಹೆದ್ದಾರಿಯ ತಾತ್ಕಾಲಿಕ ದುರಸ್ತಿ ಬಳಿಕ ಜು.7ರಿಂದ ಲಘು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಕಾರು, ಜೀಪು, ದ್ವಿಚಕ್ರ, ಮತ್ತು ತ್ರಿ ಚಕ್ರ ವಾಹನಗಳ ಸಂಚಾರಕ್ಕೆ ಮುಕ್ತವಾಗಿಸಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

Vijaya Karnataka 24 Jul 2018, 5:00 am
ವಿರಾಜಪೇಟೆ: ಭೂಕುಸಿತವಾಗಿದ್ದ ಮಾಕುಟ್ಟ ಅಂತರರಾಜ್ಯ ಹೆದ್ದಾರಿಯ ತಾತ್ಕಾಲಿಕ ದುರಸ್ತಿ ಬಳಿಕ ಜು.7ರಿಂದ ಲಘು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಕಾರು, ಜೀಪು, ದ್ವಿಚಕ್ರ, ಮತ್ತು ತ್ರಿ ಚಕ್ರ ವಾಹನಗಳ ಸಂಚಾರಕ್ಕೆ ಮುಕ್ತವಾಗಿಸಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
Vijaya Karnataka Web makukta highway allow autorickshaw
ಮಾಕುಟ್ಟ ಹೆದ್ದಾರಿ: ಸಂಚಾರಕ್ಕೆ ಅವಕಾಶ ನೀಡಿ ಆಟೋರಿಕ್ಷಾ ಮಾಲೀಕರು, ಚಾಲಕರ ಆಗ್ರಹ


ಆದರೆ, ವಿರಾಜಪೇಟೆ ನಗರ ಠಾಣೆ ಪೊಲೀಸರು ಆಟೊರಿಕ್ಷಾ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಮಾಲೀಕರ ಮತ್ತು ಚಾಲಕರ ಪರವಾಗಿ ಶರತ್‌ ಪತ್ರಿಕಾಗೋಷ್ಠಿಯಲ್ಲಿ ದೂರಿದ್ದಾರೆ.

''ಈಗ ಬಸ್‌ ಸಂಚಾರ ಇಲ್ಲದ ಕಾರಣ ಗಡಿಯಾದ ಕೂಟುಹೊಳೆಯಿಂದ ಕೇರಳ ಭಾಗದ ಜೀಪುಗಳು ಜನರನ್ನು ವಿರಾಜಪೇಟೆಗೆ ಕರೆ ತರುತ್ತಿವೆ. ವಿರಾಜಪೇಟೆ ಕಡೆಯಿಂದ ಸಹ ಬಿಳಿ ಹಾಗೂ ಹಳದಿ ನಾಮಫಲಕದ ಜೀಪು ಜನರನ್ನು ಸಾಗಿಸುತ್ತಿದ್ದು, ಪ್ರತಿಯೊಬ್ಬರಿಂದ ತಲಾ ನೂರು ರೂ. ಪಡೆಯುತ್ತಿವೆ. ಇದಕ್ಕೆ ನಮ್ಮ ಯಾವುದೇ ತಕರಾರು ಇಲ್ಲ , ಬಿಳಿ ನಾಮ ಫಲಕದ ವಾಹನದಲ್ಲಿ ತೆರಳವವರಿಗೆ ಏನಾದರೂ ಅನಾಹುತವಾದರೆ ಸೂಕ್ತ ಪರಿಹಾರ ಯಾರು ನೀಡುತ್ತಾರೆ? ಅವಘಡಕ್ಕೆ ಯಾರು ಹೊಣೆಯಾಗುತ್ತಾರೆ ಎಂದು ಪೊಲೀಸರು ಹೇಳಬೇಕು. ನಾವು ಯಾರನ್ನು ದೂಷಿಸುವುದಿಲ್ಲ. ನಮಗೆ ನಮ್ಮ ಸಂಚಾರ ವ್ಯಾಪ್ತಿಯ ಅರಿವಿದೆ. ಆದರೆ, ವಿಶೇಷ ಸಂದರ್ಭದಲ್ಲಿ ಆ ಮಿತಿ ದಾಟಿ ಓಡಾಡಲು ಅವಕಾಶ ಮಾಡಿಕೊಟ್ಟರೆ ನಮಗೂ ಅನುಕೂಲ, ಜನರಿಗೂ ಅನೂಕೂಲ. ನಾವು ಮಳೆಗಾಲ ದಿನದಲ್ಲಿ ಸೂಕ್ತ ಬಾಡಿಗೆ ಇಲ್ಲದೆ ಜೀವನ ನಿರ್ವಹಣೆ ಕಷ್ಟದಿಂದ ಮಾಡುವಂತಾಗಿದೆ. ಆದರಿಂದ ಕೊಡಗಿನ ಗಡಿಯವರಗೆ ಸಂಚರಿಸಲು ನಮಗೆ ಅವಕಾಶ ನೀಡಿದರೆ ಸಾಕು.

ಮುಂದೆ ರಸ್ತೆ ದುರಸ್ತಿಯಾಗಿ ಬಸ್‌ ಸಂಚಾರ ಆರಂಭವಾದ ಬಳಿಕ ನಾವು ಸಂಚಾರ ನಿಲ್ಲಿಸುತ್ತೇವೆ. ಹಾಗಾಗಿ ನಮಗೂ ಮುಕ್ತವಾಗಿ ಸಂಚರಿಸಲು ಅವಕಾಶ ನೀಡಿ ಎಂದು ಇಲಾಖೆಯನ್ನು ಕೋರುತ್ತೇವೆ. ಆದರೆ, ಇಲಾಖೆ ಇದಕ್ಕೆ ಇಂದಿನವರೆಗೆ ಸಮ್ಮತಿ ನೀಡಿಲ್ಲ. ಇನ್ನಾದರು ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕಾಳಜಿ ವಹಿಸುವಂತೆ ಕೋರಲಾಗುವುದು,'' ಎಂದು ತಿಳಿಸಿದ್ದಾರೆ.

ಚಾಲಕ ಮತ್ತು ಮಾಲೀಕರಾದ ನಿಧೀಶ್‌, ಗೋವಿ, ಕಿಶೋರ್‌ ರಂಜಿತ್‌ ಹಾಜರಿದ್ದರು.


ಆಟೊರಿಕ್ಷಾಗಳಿಗೆ 8 ಕಿ.ಮೀ. ವ್ಯಾಪ್ತಿಯ ನಿಬಂಧನೆ ಇದೆ. ಅದರೊಳಗೆ ಮಾತ್ರ ಸಂಚರಿಸಬೇಕು. ಮಾಕುಟ್ಟ ಗಡಿಯವರೆಗೆ ಅನುಮತಿ ನೀಡಲು ಸಾಧ್ಯವಿಲ್ಲ . ಅವರಿಗೆ ಅನುಮತಿ ಬೇಕೆಂದರೆ ಸಾರಿಗೆ ಇಲಾಖೆಯಿಂದ ಪಡೆಯಲಿ.

-ಸಂತೋಷ್‌ ಕಶ್ಯಪ್‌, ಠಾಣಾಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ