ಆ್ಯಪ್ನಗರ

ಕೊರಿಯರ್‌ನಲ್ಲಿ ಬಂದ ತೀರ್ಥ ಸೇವಿಸಿ ಸಾವು

ಕೊಲೆಗೆ ಸಂಚು ರೂಪಿಸಿ ತೀರ್ಥದ ನೆಪದಲ್ಲಿ ವಿಷ ಕಳುಹಿಸಿರಬಹುದೆಂದು ಶಂಕಿಸಲಾಗಿದೆ.

Vijaya Karnataka 6 Aug 2019, 10:41 am
ಸೋಮವಾರಪೇಟೆ: ತಾಲೂಕಿನ ತಣ್ಣೀರುಹಳ್ಳ ಗ್ರಾಮದಲ್ಲಿ ಕೊರಿಯರ್‌ನಲ್ಲಿ ಬಂದ ದ್ರಾವಣವನ್ನು ದೇವರ ತೀರ್ಥವೆಂದು ಸೇವಿಸಿದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
Vijaya Karnataka Web Death


ಪಟ್ಟಣದ ಹೋಟೆಲ್‌ವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಸುರೇಶ್‌(38) ಮೃತರು.

ಭಾನುವಾರ ಹೊಟೇಲ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಸುರೇಶ್‌ ಹೆಸರಿಗೆ ಕೊರಿಯರ್‌ನಲ್ಲಿ ಪಾರ್ಸಲ್‌ ಬಂದಿದ್ದು, ಅದನ್ನು ಮನೆಗೆ ತಂದಿದ್ದರು. ಕಾಸರಗೋಡು
ವಿಷ್ಣುಮೂರ್ತಿ ಮಂತ್ರ ದೇವಾಲಯದಿಂದ ತೀರ್ಥ ಬಂದಿದ್ದು, ಅದನ್ನು ಸೇವಿಸುವುದಾಗಿ ಪತ್ನಿ ಬಳಿ ತಿಳಿಸಿದ್ದರು. ನಂತರ ಸೇವಿಸಿ ಮಲಗಿದ್ದರು. ಕೆಲವು ಸಮಯದ ನಂತರ ನೋಡಿದಾಗ ಪತಿ ಮೃತಪಟ್ಟಿದ್ದರು ಎಂದು ಪತ್ನಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಠಾಣಾಧಿಕಾರಿ ಶಿವಶಂಕರ್‌ ತನಿಖೆ ಕೈಗೊಂಡಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆದು, ಶರೀರದ ಅಂಗಾಂಗಗಳನ್ನು ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೊಲೆ ಮಾಡುವ ಉದ್ದೇಶದಿಂದ ಕಾಸರಗೋಡಿನಿಂದ ವಿಷ ಪೂರಿತ ದ್ರಾವಣವನ್ನು ಕೊರಿಯರ್‌ ಮೂಲಕ ಕಳುಹಿಸಿರಬಹುದು ಎಂದು ಶಂಕಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ