ಆ್ಯಪ್ನಗರ

ಜಿಪಂ ಸದಸ್ಯೆ ಬಿಜೆಪಿಯ ಕವಿತಾ ಪ್ರಭಾಕರ್‌ ಸದಸ್ಯತ್ವ ರದ್ದು

ಭಾಗಮಂಡಲ ಕ್ಷೇತ್ರದ ಜಿಪಂ ಸದಸ್ಯೆ ಬಿಜೆಪಿಯ ಕವಿತಾ ಪ್ರಭಾಕರ್‌ ಸದಸ್ಯತ್ವ ರದ್ದು ಮಾಡಿ ಮಡಿಕೇರಿ ಹಿರಿಯ ಸಿವಿಲ್‌ ನ್ಯಾಯಾಲಯ ಆದೇಶಿಸಿದೆ.

Vijaya Karnataka 5 Dec 2018, 5:00 am
ಮಡಿಕೇರಿ: ಭಾಗಮಂಡಲ ಕ್ಷೇತ್ರದ ಜಿಪಂ ಸದಸ್ಯೆ ಬಿಜೆಪಿಯ ಕವಿತಾ ಪ್ರಭಾಕರ್‌ ಸದಸ್ಯತ್ವ ರದ್ದು ಮಾಡಿ ಮಡಿಕೇರಿ ಹಿರಿಯ ಸಿವಿಲ್‌ ನ್ಯಾಯಾಲಯ ಆದೇಶಿಸಿದೆ.
Vijaya Karnataka Web membership cancellation
ಜಿಪಂ ಸದಸ್ಯೆ ಬಿಜೆಪಿಯ ಕವಿತಾ ಪ್ರಭಾಕರ್‌ ಸದಸ್ಯತ್ವ ರದ್ದು


ಕವಿತಾ ಪತಿ ಪ್ರಭಾಕರ್‌ ಗುತ್ತಿಗೆದಾರರಾಗಿದ್ದು, ಜಿಪಂ ಕಾಮಗಾರಿಗಳನ್ನು ನಿರ್ವಹಿಸಿದ ಬಗ್ಗೆ ಕವಿತಾ ಎದುರು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ದೇವಂಗೋಡಿ ತಿಲಕ ಸುಬ್ರಾಯ ನ್ಯಾಯಾಲಯಕ್ಕೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯಿದæ ಕಲಂ 167 (ಎಚ್‌) ಪ್ರಕಾರ ಜಿಪಂ ಸದಸ್ಯರು ಜಿಪಂ ನೀಡಲಾಗುವ ಯಾವುದೇ ಗುತ್ತಿಗೆಯಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷ ಹಿತಾಸಕ್ತಿ ಹೊಂದಿರಬಾರದು ಎನ್ನುವ ನಿಯಮದ ಉಲ್ಲಂಘನೆ ಆಧಾರದಲ್ಲಿ ಮಡಿಕೇರಿ ಹಿರಿಯ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ್‌ ದೂರುದಾರರ ಪರ ತೀರ್ಪು ನೀಡಿದ್ದು, ಸದಸ್ಯರಾಗಿ ಮುಂದುವರಿಯಲು ಕವಿತಾ ಪ್ರಭಾಕರ್‌ ಅರ್ಹರಲ್ಲ ಎಂದಿರುವುದಲ್ಲದæೕ, ತಿಲಕ ಸುಬ್ರಾಯ ಅವರನ್ನು ಚುನಾಯಿತ ಅಭ್ಯರ್ಥಿ ಎಂದು ಘೋಷಿಸಿ ಆದೇಶಿಸಿದ್ದಾರೆ. ದೂರುದಾರರ ಪರ ವಕೀಲ ಎಂ.ಎ. ನಿರಂಜನ ವಾದ ಮಂಡಿಸಿದ್ದರು.

ನಾನು ನಾಮ ಪತ್ರ ಸಲ್ಲಿಸುವಾಗಲೇ ತಿಲಕ ಅವರು ಈ ವಿಷಯ ಪ್ರಸ್ತಾಪಿಸಿದ್ದರು. ನನ್ನ ಪತಿ ಪ್ರಥಮ ದರ್ಜೆ ಗುತ್ತಿಗೆದಾರ ಎನ್ನುವುದನ್ನೂ ಚುನಾವಣೆ ಸಂದರ್ಭ ತಿಳಿಸಿದ್ದೆ. ಈಗ ಬಂದಿರುವ ತೀರ್ಪಿನ ವಿರುದ್ಧ ಮತ್ತೆ ನ್ಯಾಯಾಲಯದ ಮೊರೆ ಹೋಗಲಾಗುವುದು.

-ಕವಿತಾ ಪ್ರಭಾಕರ್‌, ಜಿಪಂ ಸದಸ್ಯೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ