ಆ್ಯಪ್ನಗರ

ಯತ್ನಾಳ್ ಮಾತಿಗೆ ನಾವ್ಯಾರು ಬೆಲೆ‌ಕೊಡಲ್ಲ, ಅವರ ಹೆಸರನ್ನು ಶಿಸ್ತುಸಮಿತಿಗೆ ಕಳುಹಿಸಿದ್ದೇವೆ; ಈಶ್ವರಪ್ಪ

ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟವರ ಸಹಕಾರದಿಂದ ಸರ್ಕಾರ ರಚನೆಯಾಗಿದೆ. ಅವರ ಸಹಕಾರ ಸಿಕ್ಕಿದಾಗ ಸಚಿವ ಸ್ಥಾನದ ಭರವಸೆ ಕೊಟ್ಟಿದ್ವಿ, ಅದನ್ನು ಈಡೇರಿಸಬೇಕಾದ ಅಗತ್ಯ ಇದೆ. ಕೊಡಗಿನ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ‌ ಎಂಬ ಬೇಸರ ನನಗೂ ಇದೆ. ಮುಂದಿನ ದಿನದಲ್ಲಿ ಅವಕಾಶ ಸಿಗಬಹುದು. ವಿಸ್ತರಣೆ/ಪುನಾರಚನೆ ಬಗ್ಗೆ ವರಿಷ್ಟರು ತೀರ್ಮಾನ ಕೈಗೊಳ್ಳುತ್ತಾರೆ. ಬಿಎಸ್ ಯಡಿಯೂರಪ್ಪನವರಿಗೆ ಇದೊಂದು ಸವಾಲಿನ ಕೆಲಸ ಎಂದು ಈಶ್ವರಪ್ಪ ಹೇಳಿದರು.

Vijaya Karnataka Web 11 Jan 2021, 1:57 pm
ಕೊಡಗು: ಯತ್ನಾಳ್ ಅವರ ಹೆಸರನ್ನು ಶಿಸ್ತು ಸಮಿತಿಗೆ ಕಳುಹಿಸಿದ್ದೇವೆ. ಅವರ ಮಾತಿಗೆ ನಾವ್ಯಾರು ಬೆಲೆ‌ಕೊಡಲ್ಲ ಎಂದು ಪಂಚಾಯತ್‌ ರಾಜ್‌ ಸಚಿವ ಕೆಎಸ್‌ ಈಶ್ವರಪ್ಪ ಹೇಳಿದ್ದಾರೆ.
Vijaya Karnataka Web ks eshwarappa


ಮಡಿಕೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ. ಚುನಾವಣೆ ಬಂದಾಗೆಲ್ಲ ಆ ರೀತಿ ಸಿದ್ದರಾಮಯ್ಯ ಹೇಳ್ತಾರೆ. ಸಂಕ್ರಾಂತಿ ವೇಳೆ‌ ಬದಲಾವಣೆ ಆಗುತ್ತೆ ಅನ್ನುತ್ತಿದ್ದಾರೆ, ಇದು ಸಿದ್ದರಾಮಯ್ಯ‌ನವರದ್ದು ಹಗಲುಗನಸು, ಸಿಎಂ ಸ್ಥಾನದ ಬಗ್ಗೆ ಸಿದ್ದರಾಮಯ್ಯ ತೀರ್ಮಾನ ಮಾಡೋಕಾಗಲ್ಲ ಎಂದರು.

ಭಾರತದಲ್ಲಿ ತಿಂದರಷ್ಟೇ ಗೋವು ಮಾತೆಯೇ? ವಿದೇಶಗಳಿಗೆ ರಫ್ತಾಗುತ್ತಿರೋ ಗೋವುಗಳು ಮಾತೆಯಲ್ಲವೇ?; ಸಿದ್ದರಾಮಯ್ಯ
ಕೊಡವರು ಗೋಮಾಂಸ ತಿನ್ನುತ್ತಾರೆಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಗೋವಿನ ಶಾಪಕ್ಕೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಗೋವಿನ ಬಗ್ಗೆ ಮಾತನಾಡಿಯೇ ಚಾಮುಂಡೇಶ್ವರಿಯಲ್ಲಿ ಕೂಡಾ ಸೋಲನುಭವಿಸಿದ್ದಾರೆ. ಗೋಮಾತೆ ಬಗ್ಗೆ ಹೀಗೆ ಮಾತಾಡ್ತಿದ್ದರೆ ಯಾವ ಚುನಾವಣೆಯಲ್ಲೂ ಗೆಲ್ಲೋಕಾಗಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ.

‘ನೀವು ಬಿಜೆಪಿಗೆ ಮತ ಹಾಕಿದ್ದೀರಿ, ಆದರೆ ಅವರು ಏನು ಮಾಡಿದ್ದಾರೆ’- ಡಿಕೆಶಿ ಪ್ರಶ್ನೆ
ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ಮಾಡಿ ಅಂತ ಜನಾದೇಶ ಕೊಡ್ತಾರೆ, ಆದ್ರೆ ಪೂರ್ಣ ಬಹುಮತ ಕೊಡಲ್ಲ. ಹೀಗಾಗಿ ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟವರ ಸಹಕಾರದಿಂದ ಸರ್ಕಾರ ರಚನೆಯಾಗಿದೆ. ಅವರ ಸಹಕಾರ ಸಿಕ್ಕಿದಾಗ ಸಚಿವ ಸ್ಥಾನದ ಭರವಸೆ ಕೊಟ್ಟಿದ್ವಿ, ಅದನ್ನು ಈಡೇರಿಸಬೇಕಾದ ಅಗತ್ಯ ಇದೆ. ಕೊಡಗಿನ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ‌ ಎಂಬ ಬೇಸರ ನನಗೂ ಇದೆ. ಮುಂದಿನ ದಿನದಲ್ಲಿ ಅವಕಾಶ ಸಿಗಬಹುದು. ವಿಸ್ತರಣೆ/ಪುನಾರಚನೆ ಬಗ್ಗೆ ವರಿಷ್ಟರು ತೀರ್ಮಾನ ಕೈಗೊಳ್ಳುತ್ತಾರೆ. ಬಿಎಸ್ ಯಡಿಯೂರಪ್ಪನವರಿಗೆ ಇದೊಂದು ಸವಾಲಿನ ಕೆಲಸ ಎಂದು ಹೇಳಿದರು.

ಡಿಕೆಶಿ ಸಲಹೆಯಂತೆ ಯುವ ಕಾಂಗ್ರೆಸ್‌ ಚುನಾವಣೆಯಿಂದ ಹಿಂದಕ್ಕೆ ಸರಿದ ಮಿಥುನ್‌ ರೈ..!
ಇನ್ನು ಕುರುಬ ಸಮಾವೇಶಕ್ಕೆ ನನ್ನನ್ನು ಕರೆಯಲಿಲ್ಲ‌ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಈಶ್ವರಪ್ಪ, ಅದೇನು ನಮ್ಮನೆ ಮದ್ವೆನಾ? ಮದ್ವೆ ಆಗಿದ್ರೆ ಅವರನ್ನು ಹೋಗಿ ಕರೆಯಬಹುದಿತ್ತು. ನಿರಂಜನಾಪುರಿ ಸ್ವಾಮೀಜಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದಾರೆ. ಆದ್ರೆ ಸಿದ್ದರಾಮಯ್ಯ ಯಾರೂ ನನ್ನ ಕರೆದಿಲ್ಲ ಅಂದಿದ್ದಾರೆ. ಸಿದ್ದರಾಮಯ್ಯ ಸುಳ್ಳಿನ ಸರದಾರ, ಸುಳ್ಳು ಹೇಳೋದ್ರಲ್ಲಿ ನೋಬೆಲ್ ಪ್ರಶಸ್ತಿ ಕೊಡಬೇಕು. ಎಲ್ಲವೂ ನನ್ನಿಂದಲೇ ಆಗಬೇಕೆಂಬ ಧೋರಣೆ ಅವರದ್ದು, ಅದನ್ನು ಸಿದ್ದರಾಮಯ್ಯ ಬದಲಾವಣೆ ಮಾಡಿಕೊಳ್ಳಬೇಕು ಎಂದು ಸಚಿವ ಈಶ್ವರಪ್ಪ ಸಿದ್ದರಾಮಯ್ಯಗೆ ಸಲಹೆ‌ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ