ಆ್ಯಪ್ನಗರ

ಮೈಸೂರು-ಕುಶಾಲನಗರ ರೈಲ್ವೆ ಮಾರ್ಗ: 1854.62 ಕೋಟಿ ಬಿಡುಗಡೆ

ಕೊಡಗಿನ ಗಡಿಭಾಗದ ತನಕ ರೈಲ್ವೆ ಸಂಪರ್ಕ ಕಲ್ಪಿಸುವ ಮೈಸೂರು-ಕುಶಾಲನಗರ ಮಾರ್ಗದ ಪ್ರಾಥಮಿಕ ಕೆಲಸಗಳಿಗೆ ರೈಲ್ವೆ ಇಲಾಖೆ 1854.62 ಕೋಟಿ ಬಿಡುಗಡೆ ಮಾಡಿದೆ.

Vijaya Karnataka 28 Feb 2019, 5:00 am
ಮಡಿಕೇರಿ: ಕೊಡಗಿನ ಗಡಿಭಾಗದ ತನಕ ರೈಲ್ವೆ ಸಂಪರ್ಕ ಕಲ್ಪಿಸುವ ಮೈಸೂರು-ಕುಶಾಲನಗರ ಮಾರ್ಗದ ಪ್ರಾಥಮಿಕ ಕೆಲಸಗಳಿಗೆ ರೈಲ್ವೆ ಇಲಾಖೆ 1854.62 ಕೋಟಿ ಬಿಡುಗಡೆ ಮಾಡಿದೆ.
Vijaya Karnataka Web mysore kushalanagar railway line 1854 62 crore release
ಮೈಸೂರು-ಕುಶಾಲನಗರ ರೈಲ್ವೆ ಮಾರ್ಗ: 1854.62 ಕೋಟಿ ಬಿಡುಗಡೆ


ಈ ಸಂಬಂಧ ಬುಧವಾರ ಆದೇಶ ಹೊರಡಿಸಿರುವ ರೈಲ್ವೆ ಮಂಡಳಿ ಮೈಸೂರಿನ ಬೆಳಗೊಳದಿಂದ ಕುಶಾಲನಗರ ತನಕದ 87 ಕಿಲೋಮೀಟರ್‌ ಮಾರ್ಗಕ್ಕೆ ಸಂಬಂಧಿಸಿದಂತೆ ವಿವಿಧ ಕಾಮಗಾರಿಗಳಿಗೆ ಈ ಹಣ ಹಂಚಿಕೆ ಮಾಡಿದೆ. ಸಿವಿಲ್‌ ಕಾಮಗಾರಿಗೆ 1723.78 ಕೋಟಿ, ಎಲೆಕ್ಟ್ರಿಕಲ್‌ ಕೆಲಸಗಳಿಗೆ 70.91 ಕೋಟಿ, ಎಸ್‌ ಮತ್ತು ಟಿ ಕೆಲಸಗಳಿಗೆ 59.93 ಕೋಟಿಗಳನ್ನು ಇಲಾಖೆ ಹಂಚಿಕೆ ಮಾಡಿದೆ.

ಈ ಸಂಬಂಧ ಈಗಾಗಲೇ ಸರ್ವೆ ಕಾರ್ಯ ನಡೆದಿದ್ದು, ಕುಶಾಲನಗರ ಪಕ್ಕದ ಕಾವೇರಿ ನದಿ ಅಂಚಿನಲ್ಲಿರುವ ಪಿರಿಯಾಪಟ್ಟಣ ತಾಲೂಕಿನ ಚಿಕ್ಕಹೊಸೂರು ಬಳಿಯ ಗಿರುಗೂರು ತನಕ ರೈಲ್ವೆ ಮಾರ್ಗ ಬರಲಿದೆ. ಕುಶಾಲನಗರ ರೈಲ್ವೆ ನಿಲ್ದಾಣ ಗಿರುಗುರುವಿನಲ್ಲೇ ನಿರ್ಮಾಣ ಆಗಲಿದೆ ಎನ್ನಲಾಗುತ್ತಿದೆ. ಕೊಡಗಿಗೆ ರೈಲು ಯೋಜನೆ ಬರಲು ಪರಿಸರವಾದಿಗಳ ವಿರೋಧ ಇರುವುದರಿಂದ ಈ ಮಾರ್ಗ ಆಗುವುದಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿತ್ತು. ಈ ನಡುವೆ ರೈಲ್ವೆ ಇಲಾಖೆಯ ಈ ಕ್ರಮದಿಂದ ಯೋಜನೆ ಜೀವಂತವಾಗಿದೆ ಎನ್ನುವುದು ಸಾಬೀತಾದಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ