ಕೊಡಗು: ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ಸಮೀಪ ಮಾಪಳೆ ತೋಡು ಎಂಬಲ್ಲಿ ಕೆಎಸ್ಆರ್ಟಿಸಿಯ ಐರಾವತ ಬಸ್ ಪಲ್ಟಿಯಾಗಿದೆ. ಕೇರಳದ ಕೊಳಿಕ್ಕೊಡ್ಗೆ ತೆರಳುತ್ತಿದ್ದ ಮೈಸೂರು ಘಟಕದ ವೋಲ್ವೋ ಬಸ್ ಇದಾಗಿದೆ. ಮಧ್ಯರಾತ್ರಿ 2.30ರ ವೇಳೆಯಲ್ಲಿ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಬಸ್ನಲ್ಲಿದ್ದ ಎಲ್ಲ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಸ್ಥಳದಲ್ಲಿ ಒಂದೇ ವಾರದ ಅವಧಿಯಲ್ಲಿ ಸಂಭವಿಸಿದ 2ನೇ ಘಟನೆ ಇದಾಗಿದೆ.
ಪೊನ್ನಂಪೇಟೆ ಸಮೀಪ ಐರಾವತ ಬಸ್ ಪಲ್ಟಿ, ಎಲ್ಲರು ಅಪಾಯದಿಂದ ಪಾರು
ಮೈಸೂರಿನಿಂದ ಕೇರಳಕ್ಕೆ ಹೊರಟಿದ್ದ ಐರಾವತ ಬಸ್ ಗುರುವಾರ ಮಧ್ಯರಾತ್ರಿ ಪೊನ್ನಂಪೇಟೆ ಸಮೀಪ ಮಾಪಳೆ ತೋಡು ಎಂಬಲ್ಲಿ ಪಲ್ಟಿಯಾಗಿದೆ. ಯಾವುದೇ ಸಾವುನೋವು ಸಂಭವಿಸಿಲ್ಲ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
Vijaya Karnataka Web 10 Jan 2020, 10:38 am