ಆ್ಯಪ್ನಗರ

ಪೊನ್ನಂಪೇಟೆ ಸಮೀಪ ಐರಾವತ ಬಸ್‌ ಪಲ್ಟಿ, ಎಲ್ಲರು ಅಪಾಯದಿಂದ ಪಾರು

ಮೈಸೂರಿನಿಂದ ಕೇರಳಕ್ಕೆ ಹೊರಟಿದ್ದ ಐರಾವತ ಬಸ್‌ ಗುರುವಾರ ಮಧ್ಯರಾತ್ರಿ ಪೊನ್ನಂಪೇಟೆ ಸಮೀಪ ಮಾಪಳೆ ತೋಡು ಎಂಬಲ್ಲಿ ಪಲ್ಟಿಯಾಗಿದೆ. ಯಾವುದೇ ಸಾವುನೋವು ಸಂಭವಿಸಿಲ್ಲ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

Vijaya Karnataka Web 10 Jan 2020, 10:38 am
ಕೊಡಗು: ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ಸಮೀಪ ಮಾಪಳೆ ತೋಡು ಎಂಬಲ್ಲಿ ಕೆಎಸ್‌ಆರ್‌ಟಿಸಿಯ ಐರಾವತ ಬಸ್ ಪಲ್ಟಿಯಾಗಿದೆ. ಕೇರಳದ ಕೊಳಿಕ್ಕೊಡ್‌ಗೆ ತೆರಳುತ್ತಿದ್ದ ಮೈಸೂರು ಘಟಕದ ವೋಲ್ವೋ ಬಸ್ ಇದಾಗಿದೆ. ಮಧ್ಯರಾತ್ರಿ 2.30ರ ವೇಳೆಯಲ್ಲಿ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್‌ ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಸ್ಥಳದಲ್ಲಿ ಒಂದೇ ವಾರದ ಅವಧಿಯಲ್ಲಿ ಸಂಭವಿಸಿದ 2ನೇ ಘಟನೆ ಇದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ