ಶನಿವಾರಸಂತೆ
ಕೊಡಗು ಹಾಗೂ ಕೇರಳದಲ್ಲಿ ಪ್ರಕೃತಿವಿಕೋಪದಿಂದ ಜನರು ತತ್ತರಿಸಿ ಹೋಗಿರುವ ಜತೆಯಲ್ಲಿ ಪ್ರಾಣ, ಮನೆಮಠ, ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಹಿನ್ನೆಲೆಯಲ್ಲಿ ಓಣಂ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು.
ಹೋಬಳಿ ವ್ಯಾಪ್ತಿಯ ಮಾಲಂಬಿ, ಕಣಿವೆಬಸವನಹಳ್ಳಿ, ಹೊಸಗುತ್ತಿ, ಮುಳ್ಳೂರು, ನಿಡ್ತ, ಗೋಪಾಲಪುರ, ಪಟ್ಟಣ, ದುಂಡಳ್ಳಿ ಮುಂತಾದ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಕೇರಳ ಮೂಲದ ಮಲೆಯಾಳಿ ಬಾಂಧವರು ಅನೇಕ ವರ್ಷಗಳಿಂದ ನೆಲಸಿದ್ದಾರೆ. ಪ್ರತಿ ವರ್ಷ ಈ ವ್ಯಾಪ್ತಿಯ ಮಲೆಯಾಳಿ ಬಾಂಧವರು ಓಣಂ ಹಬ್ಬವನ್ನು ಸಡಗರ ಸಂಭ್ರಮದಿಂದ, ಅಕ್ಕಪಕ್ಕದ ಮನೆಯವರನ್ನು ಕರೆದು ಸಾಮೂಹಿಕವಾಗಿ ಆಚರಿಸಿ ಸಂಭ್ರಮ ಪಡುತ್ತಿದ್ದರು. ಆದರೆ, ಈ ವರ್ಷ ಕೊಡಗು ಮತ್ತು ಕೇರಳದ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಿದರು. ಮಲೆಯಾಳಿ ಬಾಂಧವರು ಹಬ್ಬದ ಸಂಪ್ರದಾಯದಂತೆ ತಮ್ಮ, ತಮ್ಮ ಮನೆಗಳಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ತರುವಾಯ ಅಂಗಳದಲ್ಲಿ ಪೂಕಳಂ ( ಹೂ ರಂಗೋಲಿ) ಬಿಡಿಸಿ ಸರಳವಾಗಿ ಆಚರಿಸಿದರು.
ಓಣಂ ಪವಿತ್ರ ಹಬ್ಬವಾಗಿದ್ದು ಪ್ರತಿ ವರ್ಷ ಅಕ್ಕಪಕ್ಕದವರೊಂದಿಗೆ ಸಾಮೂಹಿಕವಾಗಿ ಆಚರಣೆ ಮಾಡುತ್ತಿದ್ದೆವು. ಆದರೆ, ಈ ವರ್ಷ ಕೊಡಗು ಮತ್ತು ಪಕ್ಕದ ಕೇರಳದಲ್ಲಿ ಪ್ರಕೃತಿ ವಿಕೋಪದಿಂದ ಜನರು ಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಸಡಗರ, ಸಂಭ್ರಮದಿಂದ ಮತ್ತು ಸಾಮೂಹಿಕವಾಗಿ ಆಚರಣೆ ಮಾಡದಂತೆ ನಿರ್ಣಯಿಸಿದ್ದೆವು. ಈ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಿದ್ದೇವೆ.
-ಅಚ್ಯುತ್, ತ್ಯಾಗರಾಜ ಕಾಲೋನಿ ನಿವಾಸಿ, ಶನಿವಾರಸಂತೆ
ಕೊಡಗು ಹಾಗೂ ಕೇರಳದಲ್ಲಿ ಪ್ರಕೃತಿವಿಕೋಪದಿಂದ ಜನರು ತತ್ತರಿಸಿ ಹೋಗಿರುವ ಜತೆಯಲ್ಲಿ ಪ್ರಾಣ, ಮನೆಮಠ, ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಹಿನ್ನೆಲೆಯಲ್ಲಿ ಓಣಂ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು.
ಹೋಬಳಿ ವ್ಯಾಪ್ತಿಯ ಮಾಲಂಬಿ, ಕಣಿವೆಬಸವನಹಳ್ಳಿ, ಹೊಸಗುತ್ತಿ, ಮುಳ್ಳೂರು, ನಿಡ್ತ, ಗೋಪಾಲಪುರ, ಪಟ್ಟಣ, ದುಂಡಳ್ಳಿ ಮುಂತಾದ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಕೇರಳ ಮೂಲದ ಮಲೆಯಾಳಿ ಬಾಂಧವರು ಅನೇಕ ವರ್ಷಗಳಿಂದ ನೆಲಸಿದ್ದಾರೆ. ಪ್ರತಿ ವರ್ಷ ಈ ವ್ಯಾಪ್ತಿಯ ಮಲೆಯಾಳಿ ಬಾಂಧವರು ಓಣಂ ಹಬ್ಬವನ್ನು ಸಡಗರ ಸಂಭ್ರಮದಿಂದ, ಅಕ್ಕಪಕ್ಕದ ಮನೆಯವರನ್ನು ಕರೆದು ಸಾಮೂಹಿಕವಾಗಿ ಆಚರಿಸಿ ಸಂಭ್ರಮ ಪಡುತ್ತಿದ್ದರು. ಆದರೆ, ಈ ವರ್ಷ ಕೊಡಗು ಮತ್ತು ಕೇರಳದ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಿದರು. ಮಲೆಯಾಳಿ ಬಾಂಧವರು ಹಬ್ಬದ ಸಂಪ್ರದಾಯದಂತೆ ತಮ್ಮ, ತಮ್ಮ ಮನೆಗಳಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ತರುವಾಯ ಅಂಗಳದಲ್ಲಿ ಪೂಕಳಂ ( ಹೂ ರಂಗೋಲಿ) ಬಿಡಿಸಿ ಸರಳವಾಗಿ ಆಚರಿಸಿದರು.
ಓಣಂ ಪವಿತ್ರ ಹಬ್ಬವಾಗಿದ್ದು ಪ್ರತಿ ವರ್ಷ ಅಕ್ಕಪಕ್ಕದವರೊಂದಿಗೆ ಸಾಮೂಹಿಕವಾಗಿ ಆಚರಣೆ ಮಾಡುತ್ತಿದ್ದೆವು. ಆದರೆ, ಈ ವರ್ಷ ಕೊಡಗು ಮತ್ತು ಪಕ್ಕದ ಕೇರಳದಲ್ಲಿ ಪ್ರಕೃತಿ ವಿಕೋಪದಿಂದ ಜನರು ಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಸಡಗರ, ಸಂಭ್ರಮದಿಂದ ಮತ್ತು ಸಾಮೂಹಿಕವಾಗಿ ಆಚರಣೆ ಮಾಡದಂತೆ ನಿರ್ಣಯಿಸಿದ್ದೆವು. ಈ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಿದ್ದೇವೆ.
-ಅಚ್ಯುತ್, ತ್ಯಾಗರಾಜ ಕಾಲೋನಿ ನಿವಾಸಿ, ಶನಿವಾರಸಂತೆ