ಆ್ಯಪ್ನಗರ

ಮುಂಗಾರು ಮಳೆ ಮುನ್ನೆಚ್ಚರಿಕೆ: ಕೊಡಗು ಜಿಲ್ಲೆಗೆ 25 ಮಂದಿಯ ಎನ್‌ಡಿಆರ್‌ಎಫ್‌ ತುಕಡಿ ಆಗಮನ

ಎನ್‌ಡಿಆರ್‌ಎಫ್‌ ಬೆಟಾಲಿಯನ್ ಈಗ ಅಂಫಾನ್ ಚಂಡಮಾರುತ ಕಾರ್ಯ ಮುಗಿಸಿ ಕೊಡಗು ಜಿಲ್ಲೆಗೆ ಆಗಮಿಸಿದೆ. ಕಮಾಂಡಿಂಗ್ ಆಫೀಸರ್ ಆರ್‌ಕೆ ಉಪಾಧ್ಯಾಯ ನೇತೃತ್ವದ ತಂಡ ರಕ್ಷಣಾ ಕಾರ್ಯಾಚರಣೆಯ ಪರಿಕರಗಳೊಂದಿಗೆ ಮಡಿಕೇರಿಯಲ್ಲಿ ಬೀಡುಬಿಟ್ಟಿದೆ.

Vijaya Karnataka Web 2 Jun 2020, 4:58 pm
ಮಡಿಕೇರಿ: ನಿಸರ್ಗ ಚಂಡಮಾರುತ ಪ್ರಭಾವ ಹಾಗೂ ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
Vijaya Karnataka Web ಎನ್‌ಡಿಆರ್‌ಎಫ್‌ ತಂಡ
ಎನ್‌ಡಿಆರ್‌ಎಫ್‌ ತಂಡ


ಚಂಡಮಾರುತ, ಮುಂಗಾರು ಮಳೆಯ ಪರಿಸ್ಥಿತಿ ನಿಭಾಯಿಸಲು ಮಡಿಕೇರಿಗೆ ಈಗ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡ ಆಗಮಿಸಿದೆ.

ಭೂ ಕುಸಿತ, ಪ್ರವಾಹ, ಕಟ್ಟಡ ಧ್ವಂಸ ಮತ್ತಿತರ ತುರ್ತು ಸೇವೆಗಾಗಿ ಈ ತಂಡ ಆಗಮಿಸಿದೆ. ಮಳೆಗಾಲ ಹಿನ್ನೆಲೆ ಜಿಲ್ಲಾಡಳಿತ ಕೋರಿಕೆ ಮೇರೆಗೆ ಈ ತಂಡ ಆಂಧ್ರ ಪ್ರದೇಶದಿಂದ ಆಗಮಿಸಿದೆ.

ಎನ್‌ಡಿಆರ್‌ಎಫ್‌ ಬೆಟಾಲಿಯನ್ ಈಗ ಅಂಫಾನ್ ಚಂಡಮಾರುತ ಕಾರ್ಯ ಮುಗಿಸಿ ಕೊಡಗು ಜಿಲ್ಲೆಗೆ ಆಗಮಿಸಿದೆ. ಕಮಾಂಡಿಂಗ್ ಆಫೀಸರ್ ಆರ್‌ಕೆ ಉಪಾಧ್ಯಾಯ ನೇತೃತ್ವದ ತಂಡ ರಕ್ಷಣಾ ಕಾರ್ಯಾಚರಣೆಯ ಪರಿಕರಗಳೊಂದಿಗೆ ಮಡಿಕೇರಿಯಲ್ಲಿ ಬೀಡುಬಿಟ್ಟಿದೆ.

ಮಡಿಕೇರಿಯ ಮೈತ್ರಿ ಹಾಲ್‌ನಲ್ಲಿ ವಾಸ್ತವ್ಯ ಮಾಡಲಿದ್ದು, ಮಳೆಗಾಲದ ಕೊನೆವರೆಗೆ ಜಿಲ್ಲೆಯಲ್ಲೇ ಈ ತಂಡ ಇರಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ