ಮಡಿಕೇರಿ
ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ಕರೆ ನೀಡಿದ್ದ ಬಂದ್ಗೆ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದ ಹಿನ್ನೆಲೆ ಬೆಂಬಲ ವ್ಯಕ್ತವಾಗಲಿಲ್ಲ. ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಕೆಲವು ಸಂಘಟನೆಗಳು ಜಿಲ್ಲೆಯ ನಾನಾ ಭಾಗದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದವು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ದರ ಏರಿಕೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರೆ, ಜೆಡಿಎಸ್ ಮತ್ತು ಬಹುಜನ ಸಮಾಜ ಪಾರ್ಟಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಸಂದರ್ಭ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾನಿರತರು, ಬೆಲೆ ಏರಿಕೆ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಂದ್ಗೆ ಖಾಸಗಿ ಬಸ್ ಮಾಲೀಕರ ಸಂಘ ಬೆಂಬಲ ಸೂಚಿಸಿದ್ದರಿಂದ ಖಾಸಗಿ ಬಸ್ಗಳು ಸಂಚಾರ ನಡೆಸಲಿಲ್ಲ. ಇದರಿಂದ ಕೆಲ ಸಾರ್ವಜನಿಕರು, ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ಸರಕಾರಿ ಬಸ್ಗಳು ಕೊಡಗಿನಲ್ಲಿ ಎಂದಿನಂತೆ ಸಂಚಾರ ನಡೆಸಿದವು. ಮಡಿಕೇರಿಯಿಂದ ಕುಶಾಲನಗರದವರೆಗೆ ಮಾತ್ರ ಸರಕಾರಿ ಬಸ್ ಸಂಚರಿಸಿತು. ಕೊಡಗಿನಿಂದ ಮೈಸೂರು, ಬೆಂಗಳೂರು ಕಡೆ ಯಾವುದೇ ಸರಕಾರಿ ಬಸ್ ಸಂಚರಿಸಲಿಲ್ಲ. ಮೂರ್ನಾಡು, ವಿರಾಜಪೇಟೆ, ಭಾಗಮಂಡಲದಲ್ಲಿ ಮಿನಿ ಬಸ್ ಸಂಚಾರ ನಡೆಸಿದವು. ಶಾಲಾ- ಕಾಲೇಜು ಎಂದಿನಂತೆ ಕಾರ್ಯನಿರ್ವಹಿಸಿದವು. ಅಂಗಡಿ ಮಳಿಗೆಯಲ್ಲೂ ವ್ಯಾಪಾರ ವಹಿವಾಟು ಎಂದಿನಂತೆ ನಡೆಯಿತು.
ಕುಶಾಲನಗರದಲ್ಲಿ ಜೆಡಿಎಸ್ನಿಂದ ಕೊಪ್ಪ ಅರಣ್ಯ ತಪಾಸಣಾ ಗೇಟ್ ಬಳಿ ಸಾಂಕೇತಿಕ ಪ್ರತಿಭಟನೆ ನಡೆಯಿತು. ವಿರಾಜಪೇಟೆಯಲ್ಲೂ ಕಾಂಗ್ರೆಸ್ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ಆಟೋ ರಿಕ್ಷಾ ಸ್ಥಗಿತ: ಭಾರತ್ ಬಂದ್ಗೆ ನಾಪೋಕ್ಲುವಿನಲ್ಲಿ ಆಟೋ ರಿಕ್ಷಾಗಳು ಸ್ಥಗಿತಗೊಂಡು ಬಂದ್ಗೆ ಬೆಂಬಲ ವ್ಯಕ್ತ ಪಡಿಸಿದವು. ಇದರಿಂದ ನಗರದಲ್ಲಿ ನಾಗರಿಕರು ಪರದಾಡುವಂತಾಯಿತು. ಉಳಿದಂತೆ ಜನಜೀವನ ಎಂದಿನಂತೆ ಇತ್ತು.
ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ಕರೆ ನೀಡಿದ್ದ ಬಂದ್ಗೆ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದ ಹಿನ್ನೆಲೆ ಬೆಂಬಲ ವ್ಯಕ್ತವಾಗಲಿಲ್ಲ. ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಕೆಲವು ಸಂಘಟನೆಗಳು ಜಿಲ್ಲೆಯ ನಾನಾ ಭಾಗದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದವು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ದರ ಏರಿಕೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರೆ, ಜೆಡಿಎಸ್ ಮತ್ತು ಬಹುಜನ ಸಮಾಜ ಪಾರ್ಟಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಸಂದರ್ಭ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾನಿರತರು, ಬೆಲೆ ಏರಿಕೆ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಂದ್ಗೆ ಖಾಸಗಿ ಬಸ್ ಮಾಲೀಕರ ಸಂಘ ಬೆಂಬಲ ಸೂಚಿಸಿದ್ದರಿಂದ ಖಾಸಗಿ ಬಸ್ಗಳು ಸಂಚಾರ ನಡೆಸಲಿಲ್ಲ. ಇದರಿಂದ ಕೆಲ ಸಾರ್ವಜನಿಕರು, ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ಸರಕಾರಿ ಬಸ್ಗಳು ಕೊಡಗಿನಲ್ಲಿ ಎಂದಿನಂತೆ ಸಂಚಾರ ನಡೆಸಿದವು. ಮಡಿಕೇರಿಯಿಂದ ಕುಶಾಲನಗರದವರೆಗೆ ಮಾತ್ರ ಸರಕಾರಿ ಬಸ್ ಸಂಚರಿಸಿತು. ಕೊಡಗಿನಿಂದ ಮೈಸೂರು, ಬೆಂಗಳೂರು ಕಡೆ ಯಾವುದೇ ಸರಕಾರಿ ಬಸ್ ಸಂಚರಿಸಲಿಲ್ಲ. ಮೂರ್ನಾಡು, ವಿರಾಜಪೇಟೆ, ಭಾಗಮಂಡಲದಲ್ಲಿ ಮಿನಿ ಬಸ್ ಸಂಚಾರ ನಡೆಸಿದವು. ಶಾಲಾ- ಕಾಲೇಜು ಎಂದಿನಂತೆ ಕಾರ್ಯನಿರ್ವಹಿಸಿದವು. ಅಂಗಡಿ ಮಳಿಗೆಯಲ್ಲೂ ವ್ಯಾಪಾರ ವಹಿವಾಟು ಎಂದಿನಂತೆ ನಡೆಯಿತು.
ಕುಶಾಲನಗರದಲ್ಲಿ ಜೆಡಿಎಸ್ನಿಂದ ಕೊಪ್ಪ ಅರಣ್ಯ ತಪಾಸಣಾ ಗೇಟ್ ಬಳಿ ಸಾಂಕೇತಿಕ ಪ್ರತಿಭಟನೆ ನಡೆಯಿತು. ವಿರಾಜಪೇಟೆಯಲ್ಲೂ ಕಾಂಗ್ರೆಸ್ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ಆಟೋ ರಿಕ್ಷಾ ಸ್ಥಗಿತ: ಭಾರತ್ ಬಂದ್ಗೆ ನಾಪೋಕ್ಲುವಿನಲ್ಲಿ ಆಟೋ ರಿಕ್ಷಾಗಳು ಸ್ಥಗಿತಗೊಂಡು ಬಂದ್ಗೆ ಬೆಂಬಲ ವ್ಯಕ್ತ ಪಡಿಸಿದವು. ಇದರಿಂದ ನಗರದಲ್ಲಿ ನಾಗರಿಕರು ಪರದಾಡುವಂತಾಯಿತು. ಉಳಿದಂತೆ ಜನಜೀವನ ಎಂದಿನಂತೆ ಇತ್ತು.