ಆ್ಯಪ್ನಗರ

ಶಸ್ತ್ರಾಸ್ತ್ರ ದುರ್ಬಳಕೆ ಸಲ್ಲ: ಎಸ್ಪಿ

ಸ್ವಯಂರಕ್ಷ ಣೆ ಹೆಸರಿನಲ್ಲಿ ಸಶ್ತ್ರಾಸ್ತ್ರಗಳ ದುರ್ಬಳಕೆ ಸಲ್ಲದು ಎಂದು ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಪಿ.ಸುಮನ್‌ ಡಿ. ಪನ್ನೇಕರ್‌ ಹೇಳಿದರು.

Vijaya Karnataka 16 Jan 2019, 5:00 am
ಕುಶಾಲನಗರ
Vijaya Karnataka Web no weapon abuse sp
ಶಸ್ತ್ರಾಸ್ತ್ರ ದುರ್ಬಳಕೆ ಸಲ್ಲ: ಎಸ್ಪಿ


ಸ್ವಯಂರಕ್ಷ ಣೆ ಹೆಸರಿನಲ್ಲಿ ಸಶ್ತ್ರಾಸ್ತ್ರಗಳ ದುರ್ಬಳಕೆ ಸಲ್ಲದು ಎಂದು ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಪಿ.ಸುಮನ್‌ ಡಿ. ಪನ್ನೇಕರ್‌ ಹೇಳಿದರು.

ಗಾಯತ್ರಿ ಸಭಾಂಗಣದಲ್ಲಿ ವಾಸವಿ ಯುವತಿಯರ ಸಂಘ ಹಾಗೂ ರೋಟರಿ ಇನ್ನರ್‌ ವೀಲ್‌ ಕ್ಲಬ್‌ ಆಶ್ರಯದಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ 6 ದಿನಗಳ ನಾಗರಿಕ ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಶ್ತ್ರಾಸ್ತ್ರಗಳ ಬಳಕೆ ಬಗ್ಗೆ ನಾಗರಿಕರು ಅರಿವು ಹೊಂದುವುದು ಅಗತ್ಯ. ದೇಶದ ಸೇನೆಗಳಲ್ಲಿ ತುರ್ತು ಪರಿಸ್ಥಿತಿ ಎದುರಾದ ಸಂದರ್ಭ ಇಂತಹ ತರಬೇತಿ ಶಿಬಿರಗಳಲ್ಲಿ ಕಲಿತ ವಿದ್ಯೆಗಳು ಸಹಕಾರಿಯಾಗಲಿವೆ. ಕೆಲವು ವಿದೇಶಗಳಲ್ಲಿ ನಾಗರಿಕರು ಕಡ್ಡಾಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸುವ ವ್ಯವಸ್ಥೆಯಿದ್ದು, ನಾಗರಿಕರು ಸೈನಿಕರಾಗಿ ಸೇವೆ ಸಲ್ಲಿಸುತ್ತಾರೆ. ಭಾರತೀಯರು ಇದಕ್ಕೆ ಹೊರತಾಗಬಾರದು ಎಂಬ ಉದ್ದೇಶದಿಂದ ತರಬೇತಿ ನೀಡಲಾಗುತ್ತದೆ ಎಂದರು. ತೀರಾ ಅನಿವಾರ್ಯ ಎನಿಸಿದ ಸಂದರ್ಭ, ಪ್ರಾಣಕ್ಕೆ ಸಂಚಕಾರವಿರುವ ಮಂದಿ ಮಾತ್ರ ಆತ್ಮರಕ್ಷ ಣೆಗೆ ಬಂದೂಕುಗಳನ್ನು ಬಳಸಬೇಕಿದೆ. ಕೇವಲ ಸ್ವಯಂ ರಕ್ಷ ಣೆ ಹೆಸರಿನಲ್ಲಿ ಬಂದೂಕಗಳ ಬಳಕೆ ಮಾಡಬಾರದು ಎಂದರು.

ಶಿಬಿರದಲ್ಲಿ ಪಾಲ್ಗೊಂಡಿದ್ದ 44 ಮಂದಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಶಿಬಿರಾರ್ಥಿಗಳು ಎಸ್ಪಿ ಸುಮನ್‌ ಅವರನ್ನು ಸನ್ಮಾನಿಸಿ ಗೌರವಿಸಿದರು.

ವಾಸವಿ ಯುವತಿಯರ ಸಂಘದ ಅಧ್ಯಕ್ಷ ಶ್ರೀ ಲಕ್ಷ್ಮಿ ರವಿಚಂದ್ರ ಮತ್ತು ಇನ್ನರ್‌ ವೀಲ್‌ ಕ್ಲಬ್‌ ಅಧ್ಯಕ್ಷೆ ಸುನೀತಾ ಮಹೇಶ್‌ ಅಧ್ಯಕ್ಷ ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಿವೈಎಸ್ಪಿ ಮುರಳೀಧರ್‌, ಪಟ್ಟಣ ಪಂಚಾಯಿತಿ ಸದಸ್ಯ ಅಮೃತ್‌ರಾಜ್‌, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್‌.ಸತ್ಯನಾರಾಯಣ, ಇನ್ನರ್‌ ವೀಲ್‌ ಕ್ಲಬ್‌ ಚಾರ್ಟರ್‌ ಪ್ರೆಸಿಡೆಂಟ್‌ ಆರತಿ ಎಚ್‌.ಶೆಟ್ಟಿ, ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಶೋಭಾ ಸತ್ಯ, ವಾಸವಿ ಯುವಜನ ಸಂಘದ ಅಧ್ಯಕ್ಷ ನಾಗಪ್ರವೀಣ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ