ಆ್ಯಪ್ನಗರ

ಸರ್ಕಾರದ ಸಾಲ ಸಂಪರ್ಕ ಕಾರ್ಯಕ್ರಮದ ಹೆಸರಲ್ಲಿ ಆನ್‌ಲೈನ್ ವಂಚನೆ..!

ನಕಲಿ ಕರೆಗಳ ಮೂಲಕ ವಂಚಿಸುವ ಪ್ರಕರಣದ ಬಗ್ಗೆ ಎಚ್ಚರಿಕೆ ವಹಿಸಬೇಕು. ನಕಲಿ ಫೋನ್ ಕರೆಗಳ ಮೂಲಕ ಬ್ಯಾಂಕ್ ಅಧಿಕಾರಿಗಳೆಂದು ನಂಬಿಸಿ ವಂಚಿಸುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಬ್ಯಾಂಕ್ ಗ್ರಾಹಕರು ಎಷ್ಟೇ ಎಚ್ಚರಿಕೆ ವಹಿಸಿದರೂ ಮೋಸ ಹೋಗುವುದು ಮಾತ್ರ ನಿಂತಿಲ್ಲ.

Lipi 25 Oct 2021, 8:47 pm

ಹೈಲೈಟ್ಸ್‌:

  • ಸಾಲ ಕೊಡಿಸುವ ಕರೆ ಬರಬಹುದು.. ಗ್ರಾಹಕರೇ ಎಚ್ಚರ..!
  • ನಿಮ್ಮ ಬ್ಯಾಂಕ್ ಮಾಹಿತಿ ಹಂಚಿಕೊಳ್ಳಬೇಡಿ
  • ಕರೆ ಮಾಡಿದಾಗ ಯಾರಿಗೂ ಒಟಿಪಿ ನೀಡಬೇಡಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web online fraud
ಸಾಂದರ್ಭಿಕ ಚಿತ್ರ
ಕೊಡಗು: ರಾಜ್ಯಾದ್ಯಂತ ಅಕ್ಟೋಬರ್ ತಿಂಗಳಿನಲ್ಲಿ ಸಾಲ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕೊಡಗು ಜಿಲ್ಲೆಯಲ್ಲಿ ದಿನಾಂಕ 22-10-2021 ರಂದು ಈ ಕಾರ್ಯಕ್ರಮ ನಡೆದಿದೆ. ಆದರೆ ಕಾರ್ಯಕ್ರಮದ ನಂತರ ಹಲವಾರು ಗ್ರಾಹಕರಿಗೆ ಪೋನ್ ಮೂಲಕ ಸಂಪರ್ಕಿಸಿ ಸಾಲ ಕೊಡಿಸುವ ವಿಚಾರ ಪ್ರಸ್ತಾಪ ಮಾಡುತ್ತಾ ಪಾನ್ ಕಾರ್ಡ್, ಆಧಾರ ಕಾರ್ಡ್, ವೋಟರ್ ಐ ಡಿ, ರೇಷನ್ ಕಾರ್ಡ್, ವಿದ್ಯುತ್ ಬಿಲ್, ಬ್ಯಾಂಕ್ ಪಾಸ್ ಬುಕ್, ಗ್ಯಾಸ್ ಬುಕಿಂಗ್ ಪ್ರತಿ ಹಾಗೂ ಎರಡು ಪಾಸ್ ಪೋರ್ಟ್ ಸೈಜ್ ಪೋಟೋಗಳನ್ನು ವಾಟ್ಸಪ್ ಮೂಲಕ ಕಳಿಸಲು ಹೇಳುತ್ತಿದ್ದಾರೆ. ದಿಲ್ಲಿಯಲ್ಲಿ ಸಾಲ ಮಂಜೂರಾತಿ ಮಾಡಿದ ನಂತರ ಗ್ರಾಹಕರಿಗೆ ಸಂಸ್ಕರಣಾ ಶುಲ್ಕವನ್ನು ತೆಗೆದುಕೊಳ್ಳುವ ಸಾಲದ ಮೇಲೆ 3,500/-ದಿಂದ 10,000/-ರೂಗಳ ವರೆಗೆ ಹಣ ಕಳಿಸಲು ತಿಳಿಸಿ ಮೋಸ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹಾಸನದಲ್ಲಿ ಹೆಚ್ಚುತ್ತಿವೆ ಆನ್‌ಲೈನ್‌ ದೋಖಾ: ಜಿಲ್ಲೆಯಲ್ಲಿ 31 ಪ್ರಕರಣ ದಾಖಲು! ಲಕ್ಕಿಡಿಪ್‌ ಹೆಸರಲ್ಲಿ ₹14 ಲಕ್ಷ ವಂಚನೆ
ಈ ಕುರಿತು ಮಾಹಿತಿ ನೀಡಿದ ಕೊಡಗು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ಮುಖ್ಯಸ್ಥರಾದ ಆರ್. ಕೆ. ಬಾಲಚಂದ್ರ, ಇಂತಹ ಹಲವಾರು ಘಟನೆಗಳು ಕಳೆದ ಎರಡು ದಿನಗಳಿಂದ ಕೊಡಗಿನಲ್ಲಿ ನಡೆಯುತ್ತಿದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರ ವಹಿಸಬೇಕಿದೆ. ನಕಲಿ ಕರೆಗಳ ಮೂಲಕ ವಂಚಿಸುವ ಪ್ರಕರಣದ ಬಗ್ಗೆ ಎಚ್ಚರಿಕೆ ವಹಿಸಬೇಕು. ನಕಲಿ ಫೋನ್ ಕರೆಗಳ ಮೂಲಕ ಬ್ಯಾಂಕ್ ಅಧಿಕಾರಿಗಳೆಂದು ನಂಬಿಸಿ ವಂಚಿಸುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಬ್ಯಾಂಕ್ ಗ್ರಾಹಕರು ಎಷ್ಟೇ ಎಚ್ಚರಿಕೆ ವಹಿಸಿದರೂ ಮೋಸ ಹೋಗುವುದು ಮಾತ್ರ ನಿಂತಿಲ್ಲ ಎಂದು ಹೇಳಿದರು.

ಫೇಸ್‌ಬುಕ್, ವಾಟ್ಸಪ್, ನಕಲಿ ಕರೆಗಳ ಮೂಲಕ ವಂಚಿಸುವ ಪ್ರಕರಣದ ಬಗ್ಗೆ ಎಚ್ಚರಿಕೆ ವಹಿಸದಿದ್ದಲ್ಲಿ ವಂಚನೆಗೊಳಗಾಗುವುದು ಖಚಿತ ಎಂದರು. ಕೇಂದ್ರ ಸರ್ಕಾರ ಘೋಷಿಸಿರುವ ಸಾಲ ಸಂಪರ್ಕ ಯೋಜನೆಯ ನಿರ್ಧಾರದ ದುರುಪಯೋಗ ಪಡೆದುಕೊಂಡು ಗ್ರಾಹಕರನ್ನು ವಂಚಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ಮುಖ್ಯಸ್ಥರಾದ ಆರ್. ಕೆ. ಬಾಲಚಂದ್ರ ಗ್ರಾಹಕರಿಗೆ ಕೋರಿದ್ದಾರೆ.

ಆನ್‌ಲೈನ್‌ ಕ್ರೈಂ ಬಗ್ಗೆ ನಿಮಿಷದಲ್ಲೇ ದೂರು ನೀಡುವುದು ಹೇಗೆ?..ಎಲ್ಲರೂ ತಿಳಿಯಲೇಬೇಕು!
ಸಾಲ ಸಂಪರ್ಕ ಯೋಜನೆಯ ಹೆಸರಿನಲ್ಲಿ ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ಯಾರಾದರೂ ಕರೆ ಮಾಡಿ ತಮ್ಮ ಮೊಬೈಲ್ ಸಂಖ್ಯೆಗೆ ಬಂದಿರುವ ಒಂದು ಬಾರಿಯ ರಹಸ್ಯ ಸಂಖ್ಯೆ (ಒ.ಟಿ.ಪಿ) ಹಂಚಿಕೊಳ್ಳುವಂತೆ ಕೇಳಿದರೆ ಅದಕ್ಕೆ ಪ್ರತಿಕ್ರಿಯೆ ನೀಡಬೇಡಿ ಎಂದು ತಿಳಿಸಿದ ಆರ್. ಕೆ. ಬಾಲಚಂದ್ರ, ಈ ಕುರಿತು ಬ್ಯಾಂಕ್‌ಗಳಿಂದ ಎಸ್‌ಎಂಎಸ್ ಹಾಗೂ ಇಮೇಲ್ ಕಳುಹಿಸುವ ಮೂಲಕ ಗ್ರಾಹಕರಿಗೆ ತಿಳುವಳಿಕೆ ಮೂಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು. ಯಾವುದೇ ಕಾರಣಕ್ಕೂ ಬ್ಯಾಂಕಿಂಗ್ ವಹಿವಾಟಿಗೆ ಸಂಬಂಧಿಸಿದ ಓ.ಟಿ.ಪಿ., ಡೆಬಿಟ್ ಕಾರ್ಡ್ ಹಿಂಭಾಗದಲ್ಲಿರುವ ಸಿ.ವಿ.ವಿ., ಪಿನ್, ಆನ್‌ಲೈನ್ ಬ್ಯಾಂಕಿಂಗ್ ಪಾಸ್‌ವರ್ಡ್ ಅಥವಾ ಪಿನ್‌ ಅನ್ನು ಯಾರೊಂದಿಗೂ ಹಂಚಿಕೊಳ್ಳದಿರಿ ಎಂದು ಸ್ಪಷ್ಟ ಸೂಚನೆ ನೀಡಿದೆ ಎಂದರು.

ಅನಿರೀಕ್ಷಿತವಾಗಿ ಒಂದು ಕಾಲ್ ಬರುತ್ತದೆ. ಅದರಲ್ಲಿ ಹೀಗೆ ಹೇಳುತ್ತಾರೆ, ಸರ್ಕಾರದ ಕಡೆಯಿಂದ ಸಾಲ ಸಂಪರ್ಕದ ಯೋಜನೆಯಲ್ಲಿ ಹಣ ನೀಡುತ್ತಿದ್ದೇವೆ, ಇಲ್ಲವೇ ಪ್ರಧಾನ ಮಂತ್ರಿಗಳ ಜನ್‌ಧನ್ ಖಾತೆಗೆ ಹಣ ಬರುತ್ತದೆ. ನಿಮಗೆ ಒಂದು ಓ.ಟಿ.ಪಿ. ಬರುತ್ತದೆ. ಆ ಓ.ಟಿ.ಪಿ. ನಮಗೆ ಹೇಳಿದ ತಕ್ಷಣ ನಿಮ್ಮ ಖಾತೆಗೆ ಹಣ ಜಮೆ ಆಗುತ್ತೆ ಎಂದು ವಂಚಿಸುವ ಸಾಧ್ಯತೆ ಇದೆ. ಓ.ಟಿ.ಪಿ.ಯನ್ನು ಕಾಲ್ ಮಾಡಿದವರಿಗೆ ನೀಡಿದರೆ, ಆಗ ನಿಮ್ಮ ಖಾತೆಯಲ್ಲಿರುವ ಹಣವೆಲ್ಲಾ ಅವರ ಖಾತೆಗಳಿಗೆ ವರ್ಗಾಯಿಸಲ್ಪಡುತ್ತದೆ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮುಖ್ಯಸ್ಥ ಆರ್. ಕೆ. ಬಾಲಚಂದ್ರ ಎಚ್ಚರಿಸಿದ್ದಾರೆ.

‘ಮನೆಯಲ್ಲೇ ಕುಳಿತು ಆ್ಯಪ್‌ ಮೂಲಕ ಹಣ ಗಳಿಸಿ’ ಮಾತಿಗೆ ಮರುಳಾಗುವ ಮುನ್ನ ಎಚ್ಚರ! ಯಾಮಾರಿದ್ರೆ ಚೊಂಬು ಪಕ್ಕಾ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ