ಆ್ಯಪ್ನಗರ

ರೈಲ್ವೆ ಯೋಜನೆಗೆ ವಿರೋಧ:ರ‌್ಯಾಲಿಯಲ್ಲಿ ಭಾಗಿ

ಕೊಡಗು ಜಿಲ್ಲೆಯಲ್ಲಿ ರೈಲ್ವೆ ಯೋಜನೆ ರೂಪಿಸುವ ಪ್ರಸ್ತಾವನೆ ವಿರುದ್ಧ ಫೆ.19ರಂದು ಮೈಸೂರಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನಾ ರ‌್ಯಾಲಿಗೆ ಟಿ.ಶೆಟ್ಟಿಗೇರಿಯ ಮೂಂದ್‌ನಾಡ್ ಕೊಡವ ಸಮಾಜದಿಂದ ಬೆಂಬಲ ನೀಡಲಾಗುವುದು ಎಂದು ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ತಿಳಿಸಿದ್ದಾರೆ.

Vijaya Karnataka 17 Feb 2018, 5:15 am
ಶ್ರೀಮಂಗಲ: ಕೊಡಗು ಜಿಲ್ಲೆಯಲ್ಲಿ ರೈಲ್ವೆ ಯೋಜನೆ ರೂಪಿಸುವ ಪ್ರಸ್ತಾವನೆ ವಿರುದ್ಧ ಫೆ.19ರಂದು ಮೈಸೂರಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನಾ ರ‌್ಯಾಲಿಗೆ ಟಿ.ಶೆಟ್ಟಿಗೇರಿಯ ಮೂಂದ್‌ನಾಡ್ ಕೊಡವ ಸಮಾಜದಿಂದ ಬೆಂಬಲ ನೀಡಲಾಗುವುದು ಎಂದು ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ತಿಳಿಸಿದ್ದಾರೆ.
Vijaya Karnataka Web opposition to railway project participate in rally
ರೈಲ್ವೆ ಯೋಜನೆಗೆ ವಿರೋಧ:ರ‌್ಯಾಲಿಯಲ್ಲಿ ಭಾಗಿ


ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯ ಮೂಲಕ ರೂಪಿಸಿದ ಹೈಟೆನ್ಷನ್ ವಿದ್ಯುತ್ ಮಾರ್ಗದಿಂದ ಪರಿಸರದ ಮೇಲೆ ದುಷ್ಟರಿಣಾಮ ಬೀರಿದೆ. ಇದರಿಂದ ದ.ಕೊಡಗಿನ ಬಹುಭಾಗದಲ್ಲಿ ಕಾಫಿ, ಕರಿಮೆಣಸು ಫಸಲು ಕುಸಿತವಾಗಿದೆ. ಅಲ್ಲದೆ, ವಾತಾವರಣ ದಲ್ಲಿ ಉಷ್ಣಾಂಶ ಏರಿಕೆಯಾಗಿದೆ ಎಂದು ಹೇಳಿದರು.

ಹೈಟೆನ್ಷನ್ ಮಾರ್ಗದಿಂದ 54 ಸಾವಿರ ಮರಗಳು ಹನನವಾಗಿದೆ. ರೈಲ್ವೆ ಮಾರ್ಗ ಹಮ್ಮಿಕೊಂಡರೆ, ಸುಮಾರು 5 ಲಕ್ಷ ಮರ ನಾಶವಾಗುವ ಸಾಧ್ಯತೆ ಇದೆ. ಈ ಯೋಜನೆ ಯನ್ನು ತಡೆಗಟ್ಟಲು ಕೊಡಗು ರೈಲ್ವೆ ವಿರೋಧಿ ಹೋರಾಟ ವೇದಿಕೆ ವತಿಯಿಂದ ಕರೆದಿರುವ ಪ್ರತಿಭಟನೆಗೆ ಸಮಾಜದಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.

ಈ ಯೋಜನೆ ಜಿಲ್ಲೆಗೆ ಬೇಕಿಲ್ಲ. ರೈಲ್ವೆ ಯೋಜನೆ ತಡೆಗಟ್ಟಲು ಪ್ರತಿಯೊಬ್ಬರು ಕೈಜೋಡಿಸುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಸಮಾಜದ ಕಾರ್ಯದರ್ಶಿ ಮನ್ನೇರ ರಮೇಶ್, ನಾಡ್‌ತಕ್ಕರಾದ ಹರೀಶ್ ಅಪ್ಪಯ್ಯ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ