ಆ್ಯಪ್ನಗರ

ಕೊಡಗಿನಲ್ಲಿ ಅನಾಥ ಸಾಕು ಪ್ರಾಣಿಗಳ ರಕ್ಷಣೆ

ಮಂಗಳೂರಿನಿಂದ ಆಗಮಿಸಿದ ಅನಿಮಲ್‌ ಕೇರ್‌ ಸೆಂಟರ್‌ನ ಸದಸ್ಯರು ಜಿಲ್ಲೆಯಲ್ಲಿ ಅನಾಥವಾಗಿರುವ ಸಾಕು ಪ್ರಾಣಿಗಳನ್ನು ಆರೈಕೆ ಮಾಡುತ್ತಿದ್ದಾರೆ.

Vijaya Karnataka 5 Sep 2018, 7:52 am
ಮಡಿಕೇರಿ: ಮಂಗಳೂರಿನಿಂದ ಆಗಮಿಸಿದ ಅನಿಮಲ್‌ ಕೇರ್‌ ಸೆಂಟರ್‌ನ ಸದಸ್ಯರು ಜಿಲ್ಲೆಯಲ್ಲಿ ಅನಾಥವಾಗಿರುವ ಸಾಕು ಪ್ರಾಣಿಗಳನ್ನು ಆರೈಕೆ ಮಾಡುತ್ತಿದ್ದಾರೆ.
Vijaya Karnataka Web kodagu pets


ಕೊಡಗಿನಲ್ಲಿ ಮಹಾಮಳೆಗೆ ಮನೆಗಳನ್ನು ಕಳೆದುಕೊಂಡ ಮಂದಿ ಗ್ರಾಮಗಳನ್ನು ತೊರೆದು ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸಾಕಿದ್ದ ಪ್ರಾಣಿಗಳು ಅನಾಥವಾಗಿದ್ದು, ಅವುಗಳನ್ನು ಪತ್ತೆ ಹಚ್ಚಿ ಆಹಾರ ನೀಡುವ ಕಾರ್ಯಕ್ಕೆ ಮಂಗಳೂರಿನ ಅನಿಮಲ್‌ ಕೇರ್‌ ಸೆಂಟರ್‌ನ ತಂಡ ಜಿಲ್ಲೆಯ ವಿವಿಧೆಡೆಗಳಲ್ಲಿ ಸುತ್ತಾಡುತ್ತಿದೆ. ಇಬ್ಬರು ವೈದ್ಯರು ಹಾಗೂ ನಾಲ್ವರು ಕಾರ್ಯಕರ್ತರು ತಂಡದಲ್ಲಿದ್ದು, ಒಂದು ವಾರದಿಂದ ಈ ಕಾರ್ಯ ಮಾಡುತ್ತಿದ್ದಾರೆ. ಹಸಿವಿನಿಂದ ಬಳಲುತ್ತಿರುವ ಪ್ರಾಣಿಗಳಿಗೆ ಅಹಾರ ನೀಡುತ್ತಿದ್ದಾರೆ. ಗಾಯಗೊಂಡಿರುವ ಅಥವಾ ನಿತ್ರಾಣವಾಗಿರುವ ಪ್ರಾಣಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಅಲ್ಲಿ ಬದುಕಲು ಸಾಧ್ಯವೇ ಇಲ್ಲ ಎನ್ನುವಂತಹ ಪ್ರಾಣಿಗಳನ್ನು ತಮ್ಮ ವಾಹನಗಳಲ್ಲಿ ಮಂಗಳೂರಿಗೆ ಕೊಂಡೊಯ್ಯುತ್ತಿದ್ದಾರೆ. ಈಗಾಗಲೇ ಸಾಕಷ್ಟು ಪ್ರಾಣಿಗಳನ್ನು ರಕ್ಷಿಸಲಾಗಿದೆ ಎಂದು ತಂಡದ ಸದಸ್ಯರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ