ಆ್ಯಪ್ನಗರ

ಚುನಾವಣೆ ಗೆಲುವಿಗೆ ಬಡವರೇ ಕಾರಣ: ಅಪ್ಪಚ್ಚು

ವಿಧಾನಸಭೆ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಿಂದ ಜಯಗಳಿಸಿದ ಎಂ.ಪಿ.ಅಪ್ಪಚ್ಚು ರಂಜನ್‌ ಅವರು ಇಲ್ಲಿನ ಕಾರ್ಯಕರ್ತರಿಗೆ ಅಭಿನಂದನಾ ಸಭೆ ಆಯೋಜಿಸಿದ್ದರು.

Vijaya Karnataka 25 Jun 2018, 5:00 am
ಸುಂಟಿಕೊಪ್ಪ: ವಿಧಾನಸಭೆ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಿಂದ ಜಯಗಳಿಸಿದ ಎಂ.ಪಿ.ಅಪ್ಪಚ್ಚು ರಂಜನ್‌ ಅವರು ಇಲ್ಲಿನ ಕಾರ್ಯಕರ್ತರಿಗೆ ಅಭಿನಂದನಾ ಸಭೆ ಆಯೋಜಿಸಿದ್ದರು.
Vijaya Karnataka Web poor people being reason for election win
ಚುನಾವಣೆ ಗೆಲುವಿಗೆ ಬಡವರೇ ಕಾರಣ: ಅಪ್ಪಚ್ಚು


ಮೀನಾಕ್ಷ ಮ್ಮ ಮಂಜುನಾಥಯ್ಯ ಕಲ್ಯಾಣ ಮಂಟಪÜದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯ ಸಂದರ್ಭ ಕಾರ್ಯಕರ್ತರು ರಾತ್ರಿ, ಹಗಲೆನ್ನದೇ ಮನೆಮನೆಗೆ ತೆರಳಿ ನನಗೆ ಮತವನ್ನು ಯಾಚಿಸಿ ಗೆಲುವಿಗೆ ಕಾರಣಕರ್ತರಾಗಿದ್ದಾರೆ. ಆ ನಿಟ್ಟಿನಲ್ಲಿ ನಾನು ಅವರ ಸೇವೆಗೆ ಸದಾ ಸಿದ್ಧನಾಗಿದ್ದೇನೆ ಎಂದು ತಿಳಿಸಿದರು.

ಈ ಬಾರಿಯ ಚುನಾವಣೆಯಲ್ಲಿ ನಮ್ಮವರೇ ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತ ಬಿಜೆಪಿಯನ್ನು ಸೋಲಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ, ಅವರಿಗೆ ಮುಖಭಂಗವಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಕೆಲವು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಮತ ನೀಡದಂತೆ ಅಪಪ್ರಚಾರ ಮಾಡಿದ್ದು, ಅದು ಅವರ ಗೌರವಕ್ಕೆ ತಕ್ಕುದಲ್ಲ ಎಂದರು.

ನಾನು 5 ಬಾರಿ ಜಯಗಳಿಸಲು ಬಡವರೇ ಕಾರಣರಾಗಿದ್ದು, ಬಡವರ ಓಟಿನಿಂದಲೇ ನಾನು ಜಯಗಳಿಸಿದ್ದೇನೆ. ಕಾರ್ಯಕರ್ತರೊಂದಿಗೆ ಉತ್ತಮ ಹೊಂದಾಣಿಕೆಯಿಂದ ಅಭಿವೃದ್ಧಿಯತ್ತ ಗಮನ ಹರಿಸುವುದಾಗಿ ಅವರು ಭರವಸೆ ನೀಡಿದರು.

ಬಿಜೆಪಿ ಮುಖಂಡ ಯಂಕನ ಕರುಂಬಯ್ಯ ಮಾತನಾಡಿ, ಶಾಸಕರಾಗಿ 5 ಬಾರಿ ಆಯ್ಕೆ ಆಗಿರುವುದಕ್ಕೆ ಅವರಲ್ಲಿರುವ ಹೊಂದಾಣಿಕೆ, ಭೇದಭಾವವಿಲ್ಲದ ಒಡನಾಟ, ಪ್ರತಿ ಗ್ರಾಮದಲ್ಲೂ ಮಾಡಿರುವ ಅಭಿವೃದ್ಧಿ ಕಾರ್ಯ ಕಾರಣ. ಇನ್ನು ಮುಂದೆಯೂ ಈ ಕ್ಷೇತ್ರದ ಅಭಿವೃದ್ಧಿಯನ್ನು ಧರ್ಮ, ಜಾತಿ ಮರೆತು ಮಾಡಲಿ ಎಂದು ತಿಳಿಸಿದರು.

ತಾ.ಪಂ.ಸದಸ್ಯೆ ಓಡಿಯಪ್ಪನ ವಿಮಲಾವತಿ ಮಾತನಾಡಿದರು. ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಕೊಮರಪ್ಪ, ಹೋಬಳಿ ಅಧ್ಯಕ್ಷ ದಾಸಂಡ ರಮೇಶ್‌, ನಗರ ಘಟಕದ ಅಧ್ಯಕ್ಷ ಪಿ.ಆರ್‌.ಸುನೀಲ್‌ಕುಮಾರ್‌, ವಿಎಸ್‌ಎಸ್‌ಎನ್‌ ಬ್ಯಾಂಕಿನ ಅಧ್ಯಕ್ಷ ಕ್ಲೈವಾ ಪೊನ್ನಪ್ಪ, ಎಸ್‌ಸಿ ಮೋರ್ಚಾ ಅಧ್ಯಕ್ಷ ತೇಜಸ್‌, ನಗರ ಘಟಕದ ಕಾರ್ಯದರ್ಶಿ ಬಿ.ಕೆ.ಪ್ರಶಾಂತ್‌, ಗ್ರಾ.ಪಂ.ಸದಸ್ಯರಾದ ಬಿ.ಎಂ.ಸುರೇಶ್‌, ಸಿ.ಚಂದ್ರ, ಗಿರಿಜಾ, ಹಿರಿಯ ಕಾರ್ಯಕರ್ತರಾದ ಅಶೋಕ್‌ ಶೇಟ್‌, ಬಿ.ಕೆ.ಮೋಹನ್‌, ಧನುಕಾವೇರಪ್ಪ, ಬಿ.ಐ.ಭವಾನಿ, ವಿನೋದ್‌, ರವಿ ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ