ಮಡಿಕೇರಿ: ಖಾಸಗಿ ಬಸ್ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಸಾಕಾನೆ ರೌಡಿ ರಂಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.
ಕೆಲವೇ ದಿನಗಳಲ್ಲಿ ಮೈಸೂರು ದಸರಾದಲ್ಲಿ ಸಹಾಯಕನಾಗಿ ಕಾರ್ಯನಿರ್ವಹಿಸಲು ತೆರಳಬೇಕಿದ್ದ ರೌಡಿ ರಂಗ ಎಂದು ಜನರಿಂದ ಕರೆಯಿಸಿಕೊಳ್ಳುತ್ತಿದ್ದ ಸಾಕಾನೆಗೆ ಕೊಡಗಿನ ಮತ್ತಿಗೋಡು ಆನೆಕ್ಯಾಂಪ್ ರಸ್ತೆ ಬಳಿ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸೊಂಟಕ್ಕೆ ಗಂಭೀರವಾಗಿತ್ತು.
ಕೇರಳದ ಕಣ್ಣಾನೂರಿನಿಂದ ಬೆಂಗಳೂರಿಗೆ ಸೋಮವಾರ ಮುಂಜಾನೆ ತೆರಳುತ್ತಿದ್ದ ಕಲ್ಪಕ ಎಂಬ ಬಸ್ ಡಿಕ್ಕಿ ಹೊಡೆದಿದೆ. ಮತ್ತಿಕಾಡು ಆನೆ ಕ್ಯಾಂಪ್ನ ಮುಖ್ಯರಸ್ತೆಯಲ್ಲಿ ಮುಂಜಾನೆ 2 ಗಂಟೆ ವೇಳೆಗೆ ಈ ಘಟನೆ ಸಂಭವಿಸಿದೆ. ಕತ್ತಲೆಯಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ರಂಗನನ್ನು ಗುರುತಿಸದ ಚಾಲಕ ಡಿಕ್ಕಿ ಹೊಡೆದಿದ್ದಾನೆ.
ರಂಗನನ್ನು ಎಂದಿನಂತೆ ರಾತ್ರಿ ತಿರುಗಾಡಲು ಬಿಡಲಾಗಿತ್ತು. ಇದೀಗ ಆನೆಯ ಸೊಂಟ ಮುರಿದಿದ್ದು, ವೈದ್ಯಾಧಿಕಾರಿ ಡಾ. ಮುಜೀಬ್ ಅವರು ಚಿಕಿತ್ಸೆ ಆರಂಭಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರೌಡಿ ರಂಗ ಸಾವನ್ನಪ್ಪಿದ್ದಾನೆ.
ಘಟನೆ ಸಂಬಂಧ ಖಾಸಗಿ ಬಸ್ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರಂಗನನ್ನು ಮೂರು ವರಷ ಹಿಂದೆ ಬೆಂಗಳೂರು ಬಳಿಯಲ್ಲಿ ಸೆರೆ ಹಿಡಿಯಲಾಗಿತ್ತು. ತಂಟಾಟದಿಂದಾಗಿ ಈತನಿಗೆ ರೌಡಿ ರಂಗ ಎಂದೇ ಜನರು ಪ್ರೀತಿಯಿಂದ ಕರೆಯುತ್ತಿದ್ದರು. ಎರಡು ದಿನಗಳಲ್ಲಿ ಈತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ತೆರಳಬೇಕಿತ್ತು. ದುರ್ಘಟನೆಯಿಂದ ಮತ್ತಿಗೋಡು ಆನೆ ಕ್ಯಾಂಪ್ನ ಸಿಬ್ಬಂದಿ ಆಘಾತಕ್ಕೆ ಒಳಗಾಗಿದ್ದಾರೆ.
ಕೆಲವೇ ದಿನಗಳಲ್ಲಿ ಮೈಸೂರು ದಸರಾದಲ್ಲಿ ಸಹಾಯಕನಾಗಿ ಕಾರ್ಯನಿರ್ವಹಿಸಲು ತೆರಳಬೇಕಿದ್ದ ರೌಡಿ ರಂಗ ಎಂದು ಜನರಿಂದ ಕರೆಯಿಸಿಕೊಳ್ಳುತ್ತಿದ್ದ ಸಾಕಾನೆಗೆ ಕೊಡಗಿನ ಮತ್ತಿಗೋಡು ಆನೆಕ್ಯಾಂಪ್ ರಸ್ತೆ ಬಳಿ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸೊಂಟಕ್ಕೆ ಗಂಭೀರವಾಗಿತ್ತು.
ಕೇರಳದ ಕಣ್ಣಾನೂರಿನಿಂದ ಬೆಂಗಳೂರಿಗೆ ಸೋಮವಾರ ಮುಂಜಾನೆ ತೆರಳುತ್ತಿದ್ದ ಕಲ್ಪಕ ಎಂಬ ಬಸ್ ಡಿಕ್ಕಿ ಹೊಡೆದಿದೆ. ಮತ್ತಿಕಾಡು ಆನೆ ಕ್ಯಾಂಪ್ನ ಮುಖ್ಯರಸ್ತೆಯಲ್ಲಿ ಮುಂಜಾನೆ 2 ಗಂಟೆ ವೇಳೆಗೆ ಈ ಘಟನೆ ಸಂಭವಿಸಿದೆ. ಕತ್ತಲೆಯಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ರಂಗನನ್ನು ಗುರುತಿಸದ ಚಾಲಕ ಡಿಕ್ಕಿ ಹೊಡೆದಿದ್ದಾನೆ.
ರಂಗನನ್ನು ಎಂದಿನಂತೆ ರಾತ್ರಿ ತಿರುಗಾಡಲು ಬಿಡಲಾಗಿತ್ತು. ಇದೀಗ ಆನೆಯ ಸೊಂಟ ಮುರಿದಿದ್ದು, ವೈದ್ಯಾಧಿಕಾರಿ ಡಾ. ಮುಜೀಬ್ ಅವರು ಚಿಕಿತ್ಸೆ ಆರಂಭಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರೌಡಿ ರಂಗ ಸಾವನ್ನಪ್ಪಿದ್ದಾನೆ.
ಘಟನೆ ಸಂಬಂಧ ಖಾಸಗಿ ಬಸ್ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರಂಗನನ್ನು ಮೂರು ವರಷ ಹಿಂದೆ ಬೆಂಗಳೂರು ಬಳಿಯಲ್ಲಿ ಸೆರೆ ಹಿಡಿಯಲಾಗಿತ್ತು. ತಂಟಾಟದಿಂದಾಗಿ ಈತನಿಗೆ ರೌಡಿ ರಂಗ ಎಂದೇ ಜನರು ಪ್ರೀತಿಯಿಂದ ಕರೆಯುತ್ತಿದ್ದರು. ಎರಡು ದಿನಗಳಲ್ಲಿ ಈತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ತೆರಳಬೇಕಿತ್ತು. ದುರ್ಘಟನೆಯಿಂದ ಮತ್ತಿಗೋಡು ಆನೆ ಕ್ಯಾಂಪ್ನ ಸಿಬ್ಬಂದಿ ಆಘಾತಕ್ಕೆ ಒಳಗಾಗಿದ್ದಾರೆ.