ಕೊಡಗು: ಹೋಂ ಸ್ಟೇನಲ್ಲಿ ವೇಶ್ಯಾವಾಟಿಕೆ..! ದಂಪತಿಯೊಂದಿಗೆ ಆಟೋ ಚಾಲಕ ಅಂದರ್
ಹೋಂ ಸ್ಟೇಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿ ಹಾಗೂ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಹೊರವಲಯದ ಹೋಂ ಸ್ಟೇಯೊಂದರಲ್ಲಿ ಅಕ್ರಮ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬುದಾಗಿ ವಿರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಕಚೇರಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ.
Vijaya Karnataka Web 11 Jan 2021, 5:22 pm
ವಿರಾಜಪೇಟೆ (ಕೊಡಗು): ಆರ್ಜಿ ಗ್ರಾಮ ವ್ಯಾಪ್ತಿಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಹೋಂಸ್ಟೇವೊಂದರ ಮೇಲೆ ದಾಳಿ ನಡೆಸಿರುವ ವಿರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಕಚೇರಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಹೋಂ ಸ್ಟೇ ಮಾಲೀಕ ಹಾಗೂ ಆತನ ಪತ್ನಿ ಹಾಗೂ ವೇಶ್ಯಾವಾಟಿಕೆಗೆ ಮಹಿಳೆಯನ್ನು ಕರೆತಂದಿದ್ದ ಕುಶಾಲನಗರದ ಆಟೋ ಚಾಲಕನನ್ನು ಬಂಧಿಸಿ ಆಟೋವನ್ನು ವಶಪಡಿಸಿಕೊಂಡಿದ್ದಾರೆ. ಕೂರ್ಗ್ ಮೌಂಟೇನ್ ಮಿಸ್ಟ್ ಹೋಂ ಸ್ಟೇ ಮಾಲೀಕ ಸಂತೋಷ್ ಮತ್ತು ಪತ್ನಿ ಹೇಮಲತಾ ಹಾಗೂ ವೇಶ್ಯಾವಾಟಿಕೆಗೆ ಸಹಕರಿಸಿದ ಅಟೋ ಚಾಲಕ ಕುಶಾಲನಗರದ ನಿವಾಸಿ ಶಿವರಾಜ್ ಬಂಧಿತ ಆರೋಪಿಗಳು.
ಅನೈತಿಕ ಚಟುವಟಿಕೆಯಲ್ಲಿತೊಡಗಿದ್ದ ಮಹಿಳೆಯನ್ನು ಜಿಲ್ಲಾ ಮಹಿಳಾ ಸಾಂತ್ವನ ಕೇಂದ್ರಕ್ಕೆ ರವಾನಿಸಲಾಗಿದೆ. ಆರೋಪಿಗಳ ವಿರುದ್ಧ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಕೊಡಗು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅವರ ಆದೇಶದಂತೆ ವಿರಾಜಪೇಟೆ ಉಪವಿಭಾಗ ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ನಗರ ಠಾಣಾಧಿಕಾರಿಗಳಾದ ಜಗದೀಶ್ ಧೂಳ ಶೆಟ್ಟಿ, ಅಪರಾಧ ವಿಭಾಗದ ನಿರೀಕ್ಷಕರಾದ ಎಚ್.ಎಸ್. ಬೋಜಪ್ಪ, ಸಿಬ್ಬಂದಿಯಾದ ಮುಸ್ತಾಫ, ಗಿರಿಶ್, ಎನ್.ಎಸ್ ಲೋಕೇಶ್, ಮಹಿಳಾ ಸಿಬ್ಬಂದಿ ನಳಿನಿ ಮತ್ತು ಚಾಲಕರಾದ ಪೂವಯ್ಯ, ಹಾಗೂ ಗೋಫಿನಾಥ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಹೋಂ ಸ್ಟೇ ಮಾಲೀಕ ಹಾಗೂ ಆತನ ಪತ್ನಿ ಹಾಗೂ ವೇಶ್ಯಾವಾಟಿಕೆಗೆ ಮಹಿಳೆಯನ್ನು ಕರೆತಂದಿದ್ದ ಕುಶಾಲನಗರದ ಆಟೋ ಚಾಲಕನನ್ನು ಬಂಧಿಸಿ ಆಟೋವನ್ನು ವಶಪಡಿಸಿಕೊಂಡಿದ್ದಾರೆ. ಕೂರ್ಗ್ ಮೌಂಟೇನ್ ಮಿಸ್ಟ್ ಹೋಂ ಸ್ಟೇ ಮಾಲೀಕ ಸಂತೋಷ್ ಮತ್ತು ಪತ್ನಿ ಹೇಮಲತಾ ಹಾಗೂ ವೇಶ್ಯಾವಾಟಿಕೆಗೆ ಸಹಕರಿಸಿದ ಅಟೋ ಚಾಲಕ ಕುಶಾಲನಗರದ ನಿವಾಸಿ ಶಿವರಾಜ್ ಬಂಧಿತ ಆರೋಪಿಗಳು.
ಅನೈತಿಕ ಚಟುವಟಿಕೆಯಲ್ಲಿತೊಡಗಿದ್ದ ಮಹಿಳೆಯನ್ನು ಜಿಲ್ಲಾ ಮಹಿಳಾ ಸಾಂತ್ವನ ಕೇಂದ್ರಕ್ಕೆ ರವಾನಿಸಲಾಗಿದೆ. ಆರೋಪಿಗಳ ವಿರುದ್ಧ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಕೊಡಗು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅವರ ಆದೇಶದಂತೆ ವಿರಾಜಪೇಟೆ ಉಪವಿಭಾಗ ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ನಗರ ಠಾಣಾಧಿಕಾರಿಗಳಾದ ಜಗದೀಶ್ ಧೂಳ ಶೆಟ್ಟಿ, ಅಪರಾಧ ವಿಭಾಗದ ನಿರೀಕ್ಷಕರಾದ ಎಚ್.ಎಸ್. ಬೋಜಪ್ಪ, ಸಿಬ್ಬಂದಿಯಾದ ಮುಸ್ತಾಫ, ಗಿರಿಶ್, ಎನ್.ಎಸ್ ಲೋಕೇಶ್, ಮಹಿಳಾ ಸಿಬ್ಬಂದಿ ನಳಿನಿ ಮತ್ತು ಚಾಲಕರಾದ ಪೂವಯ್ಯ, ಹಾಗೂ ಗೋಫಿನಾಥ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.