ಆ್ಯಪ್ನಗರ

ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಚೆ ಸೇವಕರ ಪ್ರತಿಭಟನೆ

ಶ್ರೀ ಕಮಲೇಶ್‌ ಚಂದ್ರ ವೇತನ ಆಯೋಗದ ಶಿಫಾರಸನ್ನು 2016 ಜನವರಿಯಿಂದಲೇ ಜಾರಿಗೊಳಿಸಬೇಕು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಜಿಲ್ಲಾ ವಿಭಾಗ ಬುಧವಾರ ಪ್ರಧಾನ ಅಂಚೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

Vijaya Karnataka 20 Dec 2018, 5:00 am
ಮಡಿಕೇರಿ: ಶ್ರೀ ಕಮಲೇಶ್‌ ಚಂದ್ರ ವೇತನ ಆಯೋಗದ ಶಿಫಾರಸನ್ನು 2016 ಜನವರಿಯಿಂದಲೇ ಜಾರಿಗೊಳಿಸಬೇಕು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಜಿಲ್ಲಾ ವಿಭಾಗ ಬುಧವಾರ ಪ್ರಧಾನ ಅಂಚೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
Vijaya Karnataka Web MDK-mdk19jay9


ಅಂಚೆ ಇಲಾಖೆ ಪ್ರಾರಂಭವಾಗಿ ಹದಿನೈದು ದಶಕಗಳು ಕಳೆದಿದೆ. ಆದರೂ, ಇಲಾಖೆಯಲ್ಲಿ ನಮಗೆ ಹೆಚ್ಚಿನ ಸೌಲಭ್ಯ ಒದಗಿಸಲಾಗಿಲ್ಲ. ಸ್ವಾತಂತ್ರ್ಯ ಹಾಗೂ ಸಮಾನತೆ ಇನ್ನೂ ಕನಸಾಗಿಯೇ ಉಳಿದಿದೆ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತ ಪಡಿಸಿ, ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ಈ ಸಂದರ್ಭ ಮಾತನಾಡಿದ ಸಂಘದ ಕಾರ್ಯದರ್ಶಿ ಬಿ.ಎಂ ಮಂಜುನಾಥ್‌, ಇಂದು ಹೋರಾಟದ ಮೂಲಕವೇ ನಮಗೆ ದೊರೆಯಬೇಕಾದ ಸವಲತ್ತನ್ನು ಪಡೆಯಬೇಕಿದೆ. ಇದರಿಂದಲೇ ಇಂದು ಕೇಂದ್ರ ಸಂಘಟನೆ ದೇಶವ್ಯಾಪ್ತಿ ಅನಿರ್ದಿಷ್ಟ ಮುಷ್ಕರಕ್ಕೆ ಕರೆ ಕೊಟ್ಟಿದ್ದು, ಎಲ್ಲರೂ ಹೋರಾಡಬೇಕಿದೆ. ಇಷ್ಟು ವರ್ಷ ಕಳೆದರೂ ಕೆಲಸ ಕಾಯಂ ಆಗಿಲ್ಲ. ಸವಲತ್ತು ದೊರೆಯದ ವಿರುದ್ಧ ಹೋರಾಟ ನಡೆಸುವುದು ಅನಿವಾರ‍್ಯ ಎಂದರು.

ವಿಭಾಗೀಯ ಅಧ್ಯಕ್ಷ ಪಿ.ಎಸ್‌ ಕುರಿಯನ್‌, ಉಪಾಧ್ಯಕ್ಷ ಎ.ಯು. ಪೂಣಚ್ಚ, ಸಹಕಾರ್ಯದರ್ಶಿ ಅಚ್ಚಯ್ಯ ಬಿ.ಪಿ., ಖಜಾಂಚಿ ಪ್ರಶಾಂತ್‌ ಎಸ್‌., ಪ್ರಮುಖರಾದ ಪಿ.ಈ. ಸುಶೀಲಾ, ಸತೀಶ, ಅಕ್ಕಮ್ಮ ಹಾಜರಿದ್ದರು.

ಬೇಡಿಕೆಗಳು

ಶ್ರೀ ಕಮಲೇಶ್‌ ಚಂದ್ರ ವೇತನ ಆಯೋಗದ ಶಿಫಾರಸನ್ನು 2016 ಜನವರಿಯಿಂದಲೇ ಜಾರಿಗೊಳಿಸಬೇಕು

ಗ್ರ್ಯಾಚ್ಯುಟಿ ಹಣವನ್ನು 1,50,000 ರೂ. ಗಳಿಂದ 5,00,000ಕ್ಕೆ ಏರಿಸಬೇಕು

ಮಕ್ಕಳ ವಿದ್ಯಾಭ್ಯಾಸ ಭತ್ಯೆ 6 ಸಾವಿರ ರೂ. ವಾರ್ಷಿಕ ಪ್ರತಿ ಎರಡು ಮಕ್ಕಳಿಗೆ ಒದಗಿಸಬೇಕು

ಪರಿಮಿತಿಯಲ್ಲಿರುವ ಟ್ರಾನ್ಸ್‌ಫರ್‌ ಸೌಲಭ್ಯವನ್ನು ಮೂರು ಬಾರಿ ಗ್ರಾಮೀಣ ನೌಕರರಿಗೆ ಅವರ ಸಂಬಳದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಜಾರಿಗೊಳಿಸಬೇಕು

ಬ್ರಾಂಚ್‌ ಪೋಸ್ಟ್‌ ಆಫೀಸ್‌ ಸಮಯ 8 ಗಂಟೆ ನಿಗದಿಗೊಳಿಸಬೇಕು.ಎಲ್ಲ ಗ್ರಾಮೀಣ ಅಂಚೆ ನೌಕರರನ್ನು ಕಾಯಂಗೊಳಿಸಬೇಕು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ