ಕಾರು ಜಖಂಗೊಳಿಸಿದ ಹುಚ್ಚವೆಂಕಟ್ಗೆ ಧರ್ಮದೇಟು
ಇತ್ತೀಚೆಗೆ ಚೆನ್ನೈನ ಬೀದಿಗಳಲ್ಲಿ ಭಿಕಾರಿಯಾಗಿ ಕಾಣಿಸಿಕೊಂಡಿದ್ದ ನಟ ಹುಚ್ಚ ವೆಂಕಟ್ ಅವರು ಮಡಿಕೇರಿ ನಗರದಲ್ಲಿ ಗುರುವಾರ ಕಾರಿನ ಮೇಲೆ ದಾಳಿ ನಡೆಸಿ ಜಖಂಗೊಳಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
Vijaya Karnataka 31 Aug 2019, 12:54 am
ಮಡಿಕೇರಿ: ಇತ್ತೀಚೆಗೆ ಚೆನ್ನೈನ ಬೀದಿಗಳಲ್ಲಿ ಭಿಕಾರಿಯಾಗಿ ಕಾಣಿಸಿಕೊಂಡಿದ್ದ ನಟ ಹುಚ್ಚ ವೆಂಕಟ್ ಅವರು ಮಡಿಕೇರಿ ನಗರದಲ್ಲಿ ಗುರುವಾರ ಕಾರಿನ ಮೇಲೆ ದಾಳಿ ನಡೆಸಿ ಜಖಂಗೊಳಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ನಗರದ ಡಿಪೋ ಬಳಿ ನಿಲ್ಲಿಸಿದ್ದ ಕಾರಿನ ಮೇಲೆ ಹುಚ್ಚ ವೆಂಕಟ್ ತನ್ನ ರೋಷಾವೇಶ ಪ್ರದರ್ಶಿಸಿದ್ದು, ಪಾಲೂರು ನಿವಾಸಿಯ ಮಾರುತಿ 800 ಕಾರಿನ ಗಾಜು ಹಾಗೂ ಇಂಡಿಕೇಟರ್ ಒಡೆದು ಹಾಕಿದ್ದಾರೆ. ಅಲ್ಲದೆ, ಕಾರಿನ ಡೋರ್ ಜಖಂಗೊಳಿಸಿದ್ದಾರೆ.
ರಸ್ತೆ ಬದಿ ವಿಚಿತ್ರವಾಗಿ ವರ್ತಿಸುತ್ತಿದ್ದ ವೆಂಕಟ್ ವರ್ತನೆಗೆ ಸಿಟ್ಟಿಗೆದ್ದ ಸಾರ್ವಜನಿಕರು ಅವರಿಗೆ ಧರ್ಮದೇಟು ನೀಡಿದ್ದಾರೆ. ಸದ್ಯ ಮಡಿಕೇರಿ ನಗರ ಪೊಲೀಸರು ವೆಂಕಟ್ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ. ನಂತರ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ಡಿಪೋ ಬಳಿ ನಿಲ್ಲಿಸಿದ್ದ ಕಾರಿನ ಮೇಲೆ ಹುಚ್ಚ ವೆಂಕಟ್ ತನ್ನ ರೋಷಾವೇಶ ಪ್ರದರ್ಶಿಸಿದ್ದು, ಪಾಲೂರು ನಿವಾಸಿಯ ಮಾರುತಿ 800 ಕಾರಿನ ಗಾಜು ಹಾಗೂ ಇಂಡಿಕೇಟರ್ ಒಡೆದು ಹಾಕಿದ್ದಾರೆ. ಅಲ್ಲದೆ, ಕಾರಿನ ಡೋರ್ ಜಖಂಗೊಳಿಸಿದ್ದಾರೆ.
ರಸ್ತೆ ಬದಿ ವಿಚಿತ್ರವಾಗಿ ವರ್ತಿಸುತ್ತಿದ್ದ ವೆಂಕಟ್ ವರ್ತನೆಗೆ ಸಿಟ್ಟಿಗೆದ್ದ ಸಾರ್ವಜನಿಕರು ಅವರಿಗೆ ಧರ್ಮದೇಟು ನೀಡಿದ್ದಾರೆ. ಸದ್ಯ ಮಡಿಕೇರಿ ನಗರ ಪೊಲೀಸರು ವೆಂಕಟ್ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ. ನಂತರ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.