ಆ್ಯಪ್ನಗರ

ನಾಪೋಕ್ಲು: ಮುಂದುವರೆದ ಮಳೆ

ನಾಪೋಕ್ಲು ವಿಭಾಗದಲ್ಲಿ ಮಳೆ ಮುಂದುವರೆದಿದ್ದು ಸ್ಥಳೀಯ ಚೆರಿಯಪರಂಬು ಪೈಸಾರಿಯಲ್ಲಿ ಪ್ರವಾಹ ಕಾಣಿಸಿಕೊಂಡಿದುದ, ನಿವಾಸಿಗಳನ್ನು ಗಂಜಿಕೇಂದ್ರಕ್ಕೆ ಕರೆದೊಯ್ಯಲಾಗಿದೆ.

Vijaya Karnataka Web 17 Aug 2018, 5:00 am
ನಾಪೋಕ್ಲು : ಮಳೆ ಮುಂದುವರೆದಿದ್ದು ಸ್ಥಳೀಯ ಚೆರಿಯಪರಂಬು ಪೈಸಾರಿಯಲ್ಲಿ ಪ್ರವಾಹ ಕಾಣಿಸಿಕೊಂಡಿದುದ, ನಿವಾಸಿಗಳನ್ನು ಗಂಜಿಕೇಂದ್ರಕ್ಕೆ ಕರೆದೊಯ್ಯಲಾಗಿದೆ.
Vijaya Karnataka Web rain continues in napoklu
ನಾಪೋಕ್ಲು: ಮುಂದುವರೆದ ಮಳೆ


ಚೆರಿಯಪರಂಬು ಬಳಿಯ ಕಲ್ಲುಮೊಟ್ಟೆಯ ಅಂಬೇಡ್ಕರ್‌ ಭವನದಲ್ಲಿ ನಿರಾಶ್ರಿತರಿಗೆ ಗಂಜಿ ಕೇಂದ್ರವನ್ನು ತೆರೆಯಲಾಗಿದೆ. ನಿರಂತರ ಮಳೆ ಜತೆಗೆ ಶೀತಗಾಳಿ ಹಾಗೂ ಚಳಿಯಿಂದ ಜನರು ಹೈರಾಣಾಗಿದ್ದಾರೆ.

ಕಾವೇರಿ ನದಿ ನೀರು ಕೊಟ್ಟಮುಡಿ ಬಳಿ ರಸ್ತೆಯ ಮೇಲೆ 3 ಅಡಿಗೂ ಹೆಚ್ಚು ಎತ್ತರದಲ್ಲಿ ಹರಿಯುತ್ತಿದ್ದು ನಾಪೋಕ್ಲುವಿಗೆ ಕಕ್ಕಬ್ಬೆ, ವಿರಾಜಪೇಟೆ ಮಾರ್ಗ ಬಿಟ್ಟರೆ, ಉಳಿದ ನಾಪೋಕ್ಲು- ಮಡಿಕೇರಿ ಸಂಪರ್ಕಿಸುವ ಕೊಟ್ಟಮುಡಿ,ನಾಪೋಕ್ಲು - ಮೂರ್ನಾಡು ಸಂಪರ್ಕಿಸುವ ಬೊಳಿಬಾಣೆ, ನಾಪೋಕ್ಲು- ಪಾರಾಣೆಗೆ ಸಂಪರ್ಕ ಕಲ್ಪಿಸುವ ಏತ್ತಕಡವು, ನಾಪೋಕ್ಲು - ಭಾಗಮಂಡಲ ಸಂಪರ್ಕ ರಸ್ತೆಯು ಸಂಪೂರ್ಣ ಕಡಿತಗೊಂಡಿದೆ.

ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು ಕೆಲವೆಡೆ ರಸ್ತೆ ಕುಸಿತ, ಬರೆ ಕುಸಿತ, ತೆರೆದ ಬಾವಿ ಕುಸಿತದ ಘಟನೆಗಳು ನಡೆದಿವೆ. ಮಳೆ ಮುಂದುವರೆದಿದ್ದು, ಆತಂಕ ಎದುರಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ