ಆ್ಯಪ್ನಗರ

ಜಿಲ್ಲೆಯಲ್ಲಿ ಮಳೆ ಅಬ್ಬರ ಇಳಿಮುಖ

ಜಿಲ್ಲೆಯ ವಿವಿಧೆಡೆ ಮಳೆಯ ಅಬ್ಬರ ಇಳಿಮುಖವಾಗಿದ್ದು, ನಗರದಲ್ಲಿ ಭಾನುವಾರ ಜಿಟಿಜಿಟಿ ಮಳೆ ಮುಂದುವರಿದಿದೆ. ಹಲವು ದಿನಗಳಿಂದ ಸುರಿದ ಮಳೆ ಕಡಿಮೆಯಾಗಿದೆಯಾದರೂ ನಡುನಡುವೆ ಸಾಧಾರಣ ಮಳೆ ಸುರಿಯುತ್ತಿದೆ.

Vijaya Karnataka 23 Jul 2018, 5:00 am
ಮಡಿಕೇರಿ: ಜಿಲ್ಲೆಯ ವಿವಿಧೆಡೆ ಮಳೆಯ ಅಬ್ಬರ ಇಳಿಮುಖವಾಗಿದ್ದು, ನಗರದಲ್ಲಿ ಭಾನುವಾರ ಜಿಟಿಜಿಟಿ ಮಳೆ ಮುಂದುವರಿದಿದೆ. ಹಲವು ದಿನಗಳಿಂದ ಸುರಿದ ಮಳೆ ಕಡಿಮೆಯಾಗಿದೆಯಾದರೂ ನಡುನಡುವೆ ಸಾಧಾರಣ ಮಳೆ ಸುರಿಯುತ್ತಿದೆ.
Vijaya Karnataka Web rain decreases in district
ಜಿಲ್ಲೆಯಲ್ಲಿ ಮಳೆ ಅಬ್ಬರ ಇಳಿಮುಖ


ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 42.4 ಮಿ.ಮೀ. ಮಳೆಯಾಗಿದೆ.

ಮಡಿಕೇರಿ ತಾಲೂಕಿನಲ್ಲಿ ಸರಾಸರಿ 61.4 ಮಿ.ಮೀ. ಮಳೆಯಾಗಿದ್ದು, ವಿರಾಜಪೇಟೆ ತಾಲೂಕಿನಲ್ಲಿ 21.6 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 44.2 ಮಿ.ಮೀ. ಮಳೆಯಾಗಿದೆ.

ಹೋಬಳಿವಾರು ವಿವರ: ಮಡಿಕೇರಿ ಕಸಬಾ 54.4, ನಾಪೋಕ್ಲು 33, ಸಂಪಾಜೆ 78, ಭಾಗಮಂಡಲ 80, ವಿರಾಜಪೇಟೆ ಕಸಬಾ 16, ಹುದಿಕೇರಿ 37.5, ಶ್ರೀಮಂಗಲ 31, ಪೊನ್ನಂಪೇಟೆ 8, ಅಮ್ಮತಿ 24, ಬಾಳೆಲೆ 13, ಸೋಮವಾರಪೇಟೆ ಕಸಬಾ 47, ಶನಿವಾರಸಂತೆ 43.4, ಶಾಂತಳ್ಳಿ 106.4, ಕೊಡ್ಲಿಪೇಟೆ 35.2, ಕುಶಾಲನಗರ 6.8, ಸುಂಟಿಕೊಪ್ಪ 26 ಮಿ.ಮೀ. ಮಳೆಯಾಗಿದೆ.

2,859ಗಳ ಗರಿಷ್ಠ ಮಟ್ಟದ ಹಾರಂಗಿ ಜಲಾಶಯದಲ್ಲಿ ಭಾನುವಾರದ ನೀರಿನ ಮಟ್ಟ 2857.41 ಅಡಿ ಇತ್ತು.. ಹಾರಂಗಿಯಲ್ಲಿ ಬಿದ್ದ ಮಳೆ 18.2 ಮಿ.ಮೀ. ಆಗಿದ್ದು, ಒಳ ಹರಿವು 11067 ಕ್ಯುಸೆಕ್‌, ಹೊರ ಹರಿವು ನದಿಗೆ 8600 ಕ್ಯುಸೆಕ್‌, ನಾಲೆಗೆ 868 ಕ್ಯುಸೆಕ್‌ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ