ಆ್ಯಪ್ನಗರ

ಮಳೆಗೆ ಬಿಡುವು: ಗರಿಗೆದರಿದ ವ್ಯಾಪಾರ, ವಹಿವಾಟು

ನಾಲ್ಕು ತಿಂಗಳಿಂದ ಭಾರಿ ಮಳೆಗೆ ಸಿಲುಕಿದ ಕೊಡಗಿನ ಜನತೆ ಕಂಗಾಲಾಗಿದ್ದರು...

Vijaya Karnataka 3 Sep 2018, 5:00 am
ಸುಂಟಿಕೊಪ್ಪ:ನಾಲ್ಕು ತಿಂಗಳಿಂದ ಭಾರಿ ಮಳೆಗೆ ಸಿಲುಕಿದ ಕೊಡಗಿನ ಜನತೆ ಕಂಗಾಲಾಗಿದ್ದರು. ಹೀಗಾಗಿ ವಾರಕ್ಕೊಮ್ಮೆ ಸುಂಟಿಕೊಪ್ಪದಲ್ಲಿ ಭಾನುವಾರ ನಡೆಯುವ ಸಂತೆಗೆ ಬರುವವರ ಸಂಖ್ಯೆ ಕಡಿಮೆಯಾಗಿತ್ತು. ಇದೀಗ ಮಳೆ ನಿಂತಿರುವ ಕಾರಣ ಮತ್ತೆ ವ್ಯಾಪಾರ-ವಹಿವಾಟು ಗರಿಗೆದರಿದೆ.
Vijaya Karnataka Web rain releif business as usual
ಮಳೆಗೆ ಬಿಡುವು: ಗರಿಗೆದರಿದ ವ್ಯಾಪಾರ, ವಹಿವಾಟು


ಇಂದು ಭಾನುವಾರ ಕಾಣಿಸಿಕೊಂಡ ಬಿಸಿಲು ಗ್ರಾಮಹಕರು, ವರ್ತಕರಿಗೆ ಮುದ ನೀಡಿತು. ನಾಕೂರು ಶಿರಂಗಾಲ, ಅಂದಗೋವೆ, ಕಾನ್‌ಬೈಲು, ಕೊಡಗರಹಳ್ಳಿ ಪಣ್ಯ, ಹರದೂರು, ಗರಗಂದೂರು, 7ನೇ ಮೈಲು, ಕೆದಕಲ್‌, ಮತ್ತಿಕಾಡು, ಬೂತನಕಾಡು, ಚುಂಡೆಕಾಡು ಸುತ್ತ ಮುತ್ತಲಿನ ಗ್ರಾಮಸ್ಥರು ಎಂದಿನಂತೆ ಸಂತೆಯಲ್ಲಿ ದಿನಸಿ ಪದಾರ್ಥ, ತರಕಾರಿ, ಸೊಪ್ಪನ್ನು ಉತ್ಸಾಹದಿಂದ ಖರೀದಿ ಮಾಡುತ್ತಿದ್ದುದು ಕಂಡು ಬಂತು.

ನಾಲ್ಕು ತಿಂಗಳಿಂದ ಸುರಿದ ಮಳೆ, ಪ್ರವಾಹದಿಂದ ವ್ಯಾಪಾರಸ್ಥರು, ಕೂಲಿ ಕಾರ್ಮಿಕರು ಸಂಷ್ಟಕ್ಕೆ ಸಿಲುಕಿದ್ದಲ್ಲದೇ, ಮನೆ ಮಠ, ಆಸ್ತಿ ಕಳೆದು ಕೊಂಡು ಬದುಕು ಅತಂತ್ರವಾಗಿತ್ತು. ಸೆ.2ರಂದು ಕೃಷ್ಣ ಜಯಂತಿ, ಕೈಲ್‌ ಮಹೂರ್ತ ಹಬ್ಬದ ದಿನ ಸಂತೆಯಲ್ಲಿ ಬಿಸಿಲಿನ ಆಗಮನದಿಂದ ನಿತ್ಯೋಪಯೊಗಿ ವಸ್ತುಗಳನ್ನು ಜನತೆ ಉತ್ಸಾಹದಿಂದ ಖರೀದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ