ಆ್ಯಪ್ನಗರ

ರಂಗಸಮುದ್ರ: ಮನೆಗೆ ಹಾನಿ

ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಸಮುದ್ರ ಬಳಿಯ ಮಾವಿನಹಳ್ಳಿ ಗಿರಿಜನ ಹಾಡಿಯಲ್ಲಿ ಭಾರಿ ಮಳೆ ಮತ್ತು ಗಾಳಿಗೆ ಮನೆಯೊಂದರ ಮೇಲೆ ಹೊನ್ನೆ ಮರ ಬಿದ್ದಿದೆ.

Vijaya Karnataka 17 Jul 2018, 5:00 am
ಕುಶಾಲನಗರ: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಸಮುದ್ರ ಬಳಿಯ ಮಾವಿನಹಳ್ಳಿ ಗಿರಿಜನ ಹಾಡಿಯಲ್ಲಿ ಭಾರಿ ಮಳೆ ಮತ್ತು ಗಾಳಿಗೆ ಮನೆಯೊಂದರ ಮೇಲೆ ಹೊನ್ನೆ ಮರ ಬಿದ್ದಿದೆ.
Vijaya Karnataka Web rangasamudra damage to house
ರಂಗಸಮುದ್ರ: ಮನೆಗೆ ಹಾನಿ


ಜೇನುಕುರುಬರ ರಾಜು ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಮರ ಬಿದ್ದ ರಭಸಕ್ಕೆ ಮನೆಯ ಅರ್ಧದಷ್ಟು ಭಾಗಕ್ಕೆ ಹಾನಿಯಾಗಿದೆ. ಈ ಸಂದರ್ಭ ರಾಜು ಮನೆಯ ಹೊರಗೆ ಇದ್ದರು. ಪತ್ನಿ ಮತ್ತು ಮಕ್ಕಳು ಅಡುಗೆ ಕೋಣೆಯಲ್ಲಿ ಇದ್ದರು. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗ್ರಾ.ಪಂ. ಸದಸ್ಯೆ ಮಲ್ಲಿಗೆ, ಅರಣ್ಯ ಇಲಾಖೆ ಆನೆ ಕಾಡು ವಲಯದ ಅಧಿಕಾರಿ ಸತೀಶ್‌, ಗಿರಿಜನ ಮುಖಂಡ ಆರ್‌. ಕೆ . ಚಂದ್ರು, ಜೆ. ಪಿ. ರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ