ಕುಶಾಲನಗರ: ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರು ಕೆಂಪುವರ್ಣಕ್ಕೆ ಬದಲಾಗಿದೆ. ಮಡಿಕೇರಿ, ಮಾದಾಪುರ ಭಾಗಗಳಲ್ಲಿ ಉಂಟಾದ ಭೂಕುಸಿತ ಪರಿಣಾಮ ಹಾರಂಗಿ ಜಲಮೂಲಕ್ಕೆ ವ್ಯಾಪಕ ಪ್ರಮಾಣದಲ್ಲಿ ಬರುತ್ತಿದ್ದ ಮಣ್ಣು ಮಿಶ್ರಿತ ನೀರು ಕಡುಗೆಂಪು ಬಣ್ಣಕ್ಕೆ ಬದಲಾಗಿದೆ. ಜಲಾಶಯದ ಕ್ರಸ್ಟ್ಗೇಟ್ ಮೂಲಕ ನದಿಗೆ ಹೊರಬಿಡುವ ನೀರು ಸಾಧಾರಣವಾಗಿ ಹಾಲ್ನೊರೆಯಂತೆ ಉಕ್ಕುತ್ತಿದ್ದ ದೃಶ್ಯ ಕಣ್ಮರೆಯಾಗಿದೆ. ಎರಡು ದಿನಗಳಿಂದ ಜಲಾಶಯದಿಂದ ಹೊರಬಿಡುತ್ತಿರುವ ನೀರು ಸಂಪೂರ್ಣ ಕೆಂಪು ಬಣ್ಣದಿಂದ ಕೂಡಿ ಇಡೀ ಪ್ರದೇಶವನ್ನು ಆವರಿಸಿಕೊಂಡಿದೆ.
ಹಾರಂಗಿಗೆ ಕೆಂಪುವರ್ಣದ ನೀರು
ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರು ಕೆಂಪುವರ್ಣಕ್ಕೆ ಬದಲಾಗಿದೆ.
Vijaya Karnataka 26 Aug 2018, 5:00 am