ಆ್ಯಪ್ನಗರ

15 ದಿನಕ್ಕೆ ಪುನರ್‌ವಸತಿ ಅಧಿಕಾರಿ ವರ್ಗ

ಕೊಡಗಿನ ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸಲು ಮುಖ್ಯಮಂತ್ರಿ ವಿಶೇಷ ಕಾಳಜಿ ವಹಿಸಿ ನೇಮಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿಯನ್ನು ಕೇವಲ 15 ದಿನಗಳಲ್ಲಿ ಸರಕಾರ ವರ್ಗ ಮಾಡಿದೆ.

Vijaya Karnataka 16 Sep 2018, 5:00 am
ಮಡಿಕೇರಿ: ಕೊಡಗಿನ ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸಲು ಮುಖ್ಯಮಂತ್ರಿ ವಿಶೇಷ ಕಾಳಜಿ ವಹಿಸಿ ನೇಮಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿಯನ್ನು ಕೇವಲ 15 ದಿನಗಳಲ್ಲಿ ಸರಕಾರ ವರ್ಗ ಮಾಡಿದೆ.
Vijaya Karnataka Web rehabilitation officer transfer for 15 days
15 ದಿನಕ್ಕೆ ಪುನರ್‌ವಸತಿ ಅಧಿಕಾರಿ ವರ್ಗ


ಜಿಲ್ಲಾಧಿಕಾರಿಗಳಿಗೆ ಒತ್ತಡವನ್ನು ನಿವಾರಿಸಲು ಹಾಗೂ ಪರಿಣಾಮಕಾರಿಯಾಗಿ ಪುನರ್‌ವಸತಿ ಕಾರ್ಯ ನಿರ್ವಹಿಸಲು ವಿಶೇಷ ಅಧಿಕಾರಿಯೊಬ್ಬರನ್ನು ನೇಮಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಡಿಕೇರಿಗೆ ಆಗಮಿಸಿದ್ದಾಗ ಹೇಳಿದ್ದರು. ಇದರಂತೆ ಕೆಎಎಸ್‌ ಹಿರಿಯ ಶ್ರೇಣಿಯ ಅಪರ ಜಿಲ್ಲಾಧಿಕಾರಿ ಎಂ.ಕೆ.ಜಗದೀಶ್‌ ಅವರನ್ನು ನೇಮಿಸಲಾಗಿತ್ತು. ಉತ್ತಮವಾಗಿ ಕಾರ್ಯನಿರ್ವಹಿಸುತ್ತ, ಪುನರ್‌ವಸತಿಗೆ ಜಾಗ ಗುರುತಿಸಿ ಮಾದರಿ ಮನೆಗಳ ನಿರ್ಮಾಣದಲ್ಲಿ ತೊಡಗಿದ್ದ ಅವರನ್ನು ಏಕಾಏಕಿಯಾಗಿ ಬೆಂಗಳೂರು ನಗರದ ವಿಶೇಷ ಜಿಲ್ಲಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಇವರ ಜಾಗಕ್ಕೆ ಬೇರೆ ಯಾರನ್ನೂ ವರ್ಗ ಮಾಡದ ಹಿನ್ನೆಲೆಯಲ್ಲಿ ಹುದ್ದೆ ಮುಂದುವರಿಯುವುದು ಅನುಮಾನವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ