ಆ್ಯಪ್ನಗರ

ಸರಕಾರಿ ಕಚೇರಿಗಳಲ್ಲಿ ಹಿರಿಯ ನಾಗರಿಕರಿಗೆ ಗೌರವ ಸಿಗಲಿ

ಸರಕಾರಿ ಕಚೇರಿ, ಸಾರ್ವಜನಿಕ ಆಸ್ಪತ್ರೆ ಹಾಗೂ ಸಂಘ ಸಂಸ್ಥೆಗಳಲ್ಲಿ ಹಿರಿಯ ನಾಗರಿಕರಿಗೆ ಗೌರವ ಸಿಗುವಂತಾಗಬೇಕು ಎಂದು ಬಿಬಿಎಂಪಿ ವಿರೋಧ ಪಕ್ಷ ದ ಮಾಜಿ ನಾಯಕ ಎಂ.ಎನ್‌.ನಾಗರಾಜು ಅಭಿಪ್ರಾಯಪಟ್ಟರು.

Vijaya Karnataka 25 Mar 2019, 9:21 pm
ಸೋಮವಾರಪೇಟೆ: ಸರಕಾರಿ ಕಚೇರಿ, ಸಾರ್ವಜನಿಕ ಆಸ್ಪತ್ರೆ ಹಾಗೂ ಸಂಘ ಸಂಸ್ಥೆಗಳಲ್ಲಿ ಹಿರಿಯ ನಾಗರಿಕರಿಗೆ ಗೌರವ ಸಿಗುವಂತಾಗಬೇಕು ಎಂದು ಬಿಬಿಎಂಪಿ ವಿರೋಧ ಪಕ್ಷ ದ ಮಾಜಿ ನಾಯಕ ಎಂ.ಎನ್‌.ನಾಗರಾಜು ಅಭಿಪ್ರಾಯಪಟ್ಟರು.
Vijaya Karnataka Web respect senior citizens in govt offices
ಸರಕಾರಿ ಕಚೇರಿಗಳಲ್ಲಿ ಹಿರಿಯ ನಾಗರಿಕರಿಗೆ ಗೌರವ ಸಿಗಲಿ


ಸೋಮವಾರಪೇಟೆ ತಾಲೂಕು ಹಿರಿಯ ನಾಗರಿಕರ ಸೇವಾ ಟ್ರಸ್ಟ್‌ನ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು.

ಹಿರಿಯ ನಾಗರಿಕ ಶ್ರೇಯೋಬಿವೃದ್ಧಿಗಾಗಿ ಅಸ್ತಿತ್ವಕ್ಕೆ ಬಂದಿರುವ ಟ್ರಸ್ಟ್‌ ಹಿರಿಯರಿಗೆ ದಾರಿದೀಪವಾಗಬೇಕು. ನೊಂದ ಜೀವಗಳ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಕಿವಿಮಾತು ಹೇಳಿದರು.

ಕೃಷಿಯ ಮೂಲಕ ಪ್ರಾಮಾಣಿಕ ಬದುಕು ಕಟ್ಟಿಕೊಳ್ಳಲು ಸಾಧ್ಯ. ಕೃಷಿ ಹಿರಿಯ ಜೀವಗಳಿಗೆ ನೆಮ್ಮದಿ ಬದುಕನ್ನು ಕಟ್ಟಿಕೊಟ್ಟಿದೆ. ಆದರೆ, ಪ್ರಕೃತಿ ವಿಕೋಪದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿಗೆ ಯಾರೂ ಆತಂಕ ಪಡದೆ ತಮ್ಮ ವೃತ್ತಿಯನ್ನು ಮುಂದುವರಿಸಿ ಎಂದು ನಿವೃತ್ತ ಪೋಲೀಸ್‌ ವರಿಷ್ಠಾಧಿಕಾರಿ ಎಂ.ಎಸ್‌.ಶಿವಮೂರ್ತಿ ಹಿರಿಯ ನಾಗರಿಕರಿಗೆ ಧೈರ್ಯ ತುಂಬಿದರು.

ಹಿರಿಯ ನಾಗರಿಕರು ಸ್ವಾಭಿಮಾನಿಗಳು, ಕೊನೆ ಕಾಲದಲ್ಲಿ ಸಾಕಿದವರೆಲ್ಲ ಕೈಬಿಡುತ್ತಾರೆ. ನಾವು ಸರಕಾರಕ್ಕೆ ತೆರಿಗೆ ಕಟ್ಟಿದ್ದೇನೆ. ತೆರಿಗೆ ಹಣವನ್ನು ಕೆಲ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕೊಳ್ಳೆಹೊಡೆಯುತ್ತಾರೆ. ಹಿರಿಯ ನಾಗರಿಕರಿಗೆ 5ಸಾವಿರ ರೂ. ಮಾಸಾಶನ ನೀಡಬೇಕು ಎಂದು ಹಿರಿಯರಾದ ಜಿ.ವಿ.ಜಯರುದ್ರಪ್ಪ ಹೇಳಿದರು.

ಟ್ರಸ್ಟ್‌ನ ಅಧ್ಯಕ್ಷ ಎಂ.ಟಿ.ದಾಮೋದರ, ನಿವೃತ್ತ ನ್ಯಾಯಾಧೀಶ ಎಂ.ಆರ್‌.ದೇವಪ್ಪ, ನಿವೃತ್ತ ಮಾಹಿತಿ ಆಯುಕ್ತ ಜೆ.ಸಿ.ವಿರೂಪಾಕ್ಷ ಯ್ಯ, ಡಾ.ಬಿ.ಸಿ.ನವೀನ್‌ ಕುಮಾರ್‌, ಹಿರಿಯ ನಾಗರಿಕರಾದ ಜಿ.ಎಸ್‌.ಪ್ರಭುದೇವ್‌, ಎಚ್‌.ಸಿ.ನಾಗೇಶ್‌, ಎಸ್‌.ಪಿ.ಪ್ರಸನ್ನ, ಸಿ.ಕೆ.ಮಲ್ಲಪ್ಪ, ಎಸ್‌.ಎಂ.ಡಿ'ಸಿಲ್ವಾ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ